“ಒಬ್ಬ ವ್ಯಕ್ತಿಯು ಯಾವುದೇ ಭಾವನೆಯನ್ನು, ತನ್ನ ಬದುಕಿನಲ್ಲಿ ಒಂದು ಸೃಜನಾತ್ಮಕ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಅವಕಾಶವಿರುತ್ತದೆ.” – ಸದ್ಗುರು
ಭಾವನೆಗಳನ್ನು “ರಸಕ್ಕೆ” ಹೋಲಿಸುವುದು ಕೇವಲ ಕವಿತೆಯ ಭಾಷೆಯಲ್ಲ, ಅದರ ನಿಜವಾದ ಅರ್ಥದಲ್ಲಿಯೂ ಸಹ ಭಾವನೆಗಳು ನಮ್ಮ ಶರೀರದಲ್ಲಿ
ಹರಿಯುವ ರಾಸಾಯನಿಕ ದ್ರವ್ಯಗಳಾಗಿವೆ. ಆದರೆ ಹಿತಕರ ಭಾವನೆಗಳಿಂದ ನಮಗೆ ಯಾವುದೇ ತೊಂದರೆಯಿಲ್ಲ. ಈ ಅಹಿತಕರ ಭಾವನೆಗಳೇ ನಮ್ಮ
ಬದುಕಿನ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.
ಈ ಭಾವನೆಗಳತ್ತ ಒಂದು ಆಳವಾದ ನೋಟ ಬೀರಿರುವ ಸದ್ಗುರುಗಳು, ಅವುಗಳನ್ನು ಬದುಕಿನಲ್ಲಿ ಅಡ್ಡ ಬರುವ ಬಂಡೆಗಳಾಗಿ ನೋಡದೆ, ಮೇಲೇರುವ
ಮೆಟ್ಟಿಲುಗಳಾಗಿ ಪರಿವರ್ತಿಸಿಕೊಳ್ಳುವುದು ಹೇಗೆಂದು ತಮ್ಮ “
ಸಂಬಂಧಗಳು
ನಂಟೋ
...
ಕಗ್ಗಂಟೋ
...
“ನೀವು ಜೀವನದಲ್ಲಿ, ಕೇವಲ ಸುಖದ ಹುಡುಕಾಟವನ್ನು ಬಿಟ್ಟು ಎಲ್ಲೆಡೆ ಆನಂದವನ್ನು ಹರಡುತ್ತಿದ್ದಲ್ಲಿ, ನಿಮ್ಮ ಸಂಬಂಧಗಳು ಸಹಜವಾಗಿಯೇ
ಅದ್ಭುತವಾಗಿರುತ್ತದೆ” - ಸದ್ಗುರು
ವ್ಯಕ್ತಿಗಳು ನಿರಂತರವಾಗಿ ಸಂಬಂಧಗಳನ್ನು ಬೆಸೆದುಕೊಳ್ಳುತ್ತಿರುತ್ತಾರೆ ಹಾಗೂ ಮುರಿದುಕೊಳ್ಳುತ್ತಿರುತ್ತಾರೆ. ವಿಷಾದದ ಸಂಗತಿಯೆಂದರೆ, ಸಂಬಂಧಗಳೂ
ಜನರನ್ನು ಮೇಲೆತ್ತಬಹುದು ಅಥವ ಕುಸಿಯುವಂತೆ ಮಾಡಬಹುದು. ಸಂಬಂಧಗಳು ಬಹುತೇಕರಿಗೆ ಏಕೆ ಇಂತಹ ಒಂದು ಗೊಂದಲವಾಗಿದೆ? ನಮ್ಮೊಳಗಿರುವ
ಯಾವ ಮೂಲಭೂತ ಪ್ರೇರಣೆಯು ಇನ್ನೊಬ್ಬರೊಡನೆ ಶಾರೀರಿಕ, ಮಾನಸಿಕ ಅಥವಾ ಭಾವನಾತ್ಮಕ ನಂಟಿನ ಒತ್ತಾಯವನ್ನು ಮಾಡುತ್ತಿದೆ? ಹೇಗೆ ಈ
ನಂಟು, ಕಗ್ಗಂಟಾಗದಂತೆ ಉಳಿಸಿಕೊಳ್ಳುವುದು? ಈ ಮೂಲಭೂತ ಪ್ರಶ್ನೆಗಳನ್ನು – “ಸಂಬಂಧಗಳು - ನಂಟೋ... ಕಗ್ಗಂಟೋ...” ಪುಸ್ತಕದ ಮೂಲಕ
ಸದ್ಗುರುಗಳು ಅವಲೋಕಿಸುತ್ತಾರೆ. ಹಾಗೂ ನಮ್ಮೊಡನೆ ಶಾಶ್ವತ ಹಾಗೂ ಆನಂದಮಯ ಬೆಸುಗೆಗಳನ್ನು ರೂಪಿಸಿಕೊಳ್ಳುವ ಕೀಲಿಕೆಗಳನ್ನು
ಹಂಚಿಕೊಂಡಿದ್ದಾರೆ. ಅವು ಪತಿ-ಪತ್ನಿ, ಕುಟುಂಬ-ಮಿತ್ತರು. ಆಫೀಸ್ ಅಥವಾ ನಮ್ಮ ಈ ಅಸ್ತಿತ್ವವೇ ಆಗಿರಬಹುದು.