ಒಂದು ಪ್ರಜ್ಞಾವಂತ ಪ್ರಪಂಚದ ರಚನೆ
"ಅದ್ಭುತವಾದ ಸಂಗತಿಗಳು ‘ಕೆಲವರು’ ಖುದ್ದಾಗಿ ಮಾಡುವುದರಿಂದ ಸಂಭವಿಸುತ್ತವೆಯೇ ಹೊರತು ಯಾರೋ ಇಷ್ಟ ಪಟ್ಟರೆಂದು ನಡೆಯುವುದಿಲ್ಲ, ಆ ‘ಕೆಲವರು’ ನೀವಾಗಿದ್ದೀರಾ......." - ಸದ್ಗುರು
ಯೋಗ ಸಂಸ್ಕೃತಿಯಲ್ಲಿ ಸಂಘ ಎಂಬುದು ಆಧ್ಯಾತ್ಮಿಕ ಸಮುದಾಯವನ್ನು ಸೂಚಿಸುತ್ತದೆ ಮತ್ತು ಮಿತ್ರ ಎಂದರೆ ಸ್ನೇಹಿತ. ಸಂಘಮಿತ್ರ ಎಂದರೆ ಆಧ್ಯಾತ್ಮಿಕ ಸಮುದಾಯಕ್ಕೆ ಸ್ನೇಹಿತ ಎಂದರ್ಥ.
ಈಶಾ ಸಂಘಮಿತ್ರ ಎಂಬುದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಒಂದು ಹನಿ ಆಧ್ಯಾತ್ಮಿಕತೆಯನ್ನು ನೀಡುವ ಮೂಲಕ ಹೆಚ್ಚು ಪ್ರಜ್ಞಾಪೂರ್ವಕ ಮಾನವೀಯತೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸದ್ಗುರುಗಳ ದೂರದೃಷ್ಟಿಯ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಲು ನಮಗಿರುವ ಒಂದು ಅನನ್ಯ ಅವಕಾಶ ಮತ್ತು ಬದ್ಧತೆಯಾಗಿದೆ.
ನಿಮ್ಮದೇ ಆಯ್ಕೆಯ ಅವಧಿ ಪರ್ಯಂತ ಮಾಸಿಕವಾಗಿ ದೇಣಿಗೆ ನೀಡುವುದರ ಮೂಲಕ ಸಂಘಮಿತ್ರದಲ್ಲಿ ಪಾಲ್ಗೊಳ್ಳಬಹುದು.ಯಾವುದೇ ದೇಣಿಗೆಯು ಚಿಕ್ಕದು ಅಥವಾ ದೊಡ್ಡದು ಎನಿಸುವುದಿಲ್ಲ. ದಯವಿಟ್ಟು ನಿಮ್ಮ ಶಕ್ತ್ಯಾನುಸಾರ ಯಾವುದೇ ರೀತಿಯಲ್ಲಿ ನಮಗೆ ಬೆಂಬಲ ನೀಡಬಹುದು.
ಲಕ್ಷಾಂತರ ಜನರನ್ನು ತಲುಪುವುದರ ಮೂಲಕ ಮಾನವೀಯತೆಗೆ ಪರಿವರ್ತನೆಯ ಸಾಧನಗಳನ್ನು ನೀಡುತ್ತಿರುವ ಮತ್ತು ಸದ್ಗುರುಗಳ ಉಪಸ್ಥಿತಿಯಿರುವ ಈ ಪವಿತ್ರ ಸ್ಥಳದ ಭಾಗವಾಗಿರುವುದು ಒಂದು ಐತಿಹಾಸಿಕ ಕಾಲಘಟ್ಟ. ಇಲ್ಲಿರುವುದು ಒಂದು ಅನುಗ್ರಹ.
ಯಾವ ಶೋಷಣೆಗೂ ಒಳಗಾಗುವ ಚಿಂತೆಯಿಲ್ಲದೆ, ಜನರ ಸೇವೆಗಾಗಿ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಳ್ಳಬಲ್ಲ ಇಂತಹ ಜಾಗ ಇದೆಯೆಂಬುದು ನನಗೆ ತಿಳಿದಿರಲಿಲ್ಲ. ಪ್ರತಿ ದಿನವೂ ಸ್ವಚ್ಚಂದವಾಗಿ ಹಾಗೂ ಆನಂದದಿಂದ ಸೇವೆಯನ್ನು ಮಾಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ! ನನ್ನ ಕಾಳಜಿಯನ್ನು ವಹಿಸಲಾಗಿದೆ ಎಂಬ ಭಾವನೆ ಯಾವಾಗಲೂ ನನಲ್ಲಿದೆ. ಇಂತಹ ಸ್ಥಳವನ್ನು ನಿರ್ಮಿಸಲು ಕಾರಣರಾದ ಎಲ್ಲರಿಗೂ ನಾನು ತಲೆಬಾಗುತ್ತೇನೆ
ನಾನು ಮೊದಲ ಬಾರಿಗೆ ಈ ಜಾಗವನ್ನು ಪ್ರವೇಶಿಸಿದ ಕ್ಷಣವೇ ಅದರೊಂದಿಗೆ ಒಂದು ರೀತಿಯ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಇದಕ್ಕೆ ಕಾರಣ, ಇಲ್ಲಿನ ವಾಸ್ತುಶಿಲ್ಪದ ಸೌಂದರ್ಯ, ಶುದ್ಧ ಪರಿಸರ, ಜನರಲ್ಲಿನ ವಿನಮ್ರ ಮತ್ತು ಕರುಣಾ ಭಾವ ಮತ್ತು ಇಲ್ಲಿರುವ ಪ್ರತಿಯೊಂದು ವಿವರಗಳಲ್ಲೂ ವಹಿಸಲಾದ ಗಮನ ಮತ್ತು ಕಾಳಜಿ.
ಕೆಲವು ತಿಂಗಳುಗಳ ಹಿಂದೆಯಷ್ಟೇ ನನಗೆ 50 ವರ್ಷ ವಯಸ್ಸಾಯಿತು. - ಆದರೆ ನನಗೆ ವಯಸ್ಸಾಗಿದೆಯೆಂದು ಅನಿಸುತ್ತಲೇ ಇಲ್ಲ. ವಾಸ್ತವವಾಗಿ, ನನ್ನ ಕಾಲೇಜು ದಿನಗಳಲ್ಲಿದ್ದಕ್ಕಿಂತಲೂ ನಾನು ಹೆಚ್ಚು ಜೀವಂತವಾಗಿ ಮತ್ತು ಉತ್ಸಾಹಿಯಾಗಿದ್ದೇನೆ. ಈಶಾ ಮತ್ತು ಸದ್ಗುರುಗಳೊಂದಿಗಿನ ನನ್ನ ಪ್ರಯಾಣವು ಸಮೃದ್ಧವಾಗಿದೆ ಮತ್ತು ತೃಪ್ತಿದಾಯಕವಾಗಿದೆ, ಇದನ್ನು ನಾನು ಪ್ರಪಂಚದ ಬೇರೆ ಯಾವುದರೊಂದಿಗೂ ಬದಲಾಯಿಸಿಕೊಳ್ಳಲು ಇಚ್ಛಿಸುವುದಿಲ್ಲ.
ಒಬ್ಬ ಜ್ಞಾನಿಯ ಉಪಸ್ಥಿತಿಯಲ್ಲಿರುವ ಅನುಭವವನ್ನು ಅರಿತುಕೊಂಡ ಮೇಲೆ, ಅದರಿಂದ ನನಗೇನು ಸಿಗುತ್ತದೆ ಎಂಬುದನ್ನು ತಿಳಿಸಲು ಪದಗಳಿರುವುದಿಲ್ಲ. ಆದರೆ, ಸದ್ಗುರುಗಳ ಜೀವಿತದಲ್ಲಿ, ನಾನಿಲ್ಲಿರುವುದಕ್ಕಿಂತ ಉತ್ತಮವಾಗಿ ಪ್ರಪಂಚದ ಇನ್ಯಾವ ಸ್ಥಳದಲ್ಲೂ ಇರಲಾರೆನು ಎಂದು ಮಾತ್ರ ಹೇಳಬಲ್ಲೆ.
ನನಗೆ ಈಶಾ ಯೋಗ ಕೇಂದ್ರದಲ್ಲಿ ವಾಸವಿರಲು ಕಾರಣವಾದ ಅತ್ಯಂತ ಅಮೂಲ್ಯವಾದ ಅಂಶವೆಂದರೆ, ನಾನು ಮಾಡುತ್ತಿರುವ ಚಟುವಟಿಕೆ ಮತ್ತು ನಾನು ಅನುಸರಿಸುತ್ತಿರುವ ಆಧ್ಯಾತ್ಮಿಕ ಪ್ರಕ್ರಿಯೆಯನ್ನು, “ನನಗೇನು ಸಿಗುತ್ತದೆ" ಎಂಬ ಯೋಚನೆಯಿಲ್ಲದೆ ನಡೆಸಿಕೊಂಡು ಹೋಗಲು ಪೂರಕವಾದ ವಾಸಸ್ಥಳ ಇಲ್ಲಿ ನಿರ್ಮಾಣವಾಗಿದೆ.
ಇಲ್ಲಿನ ಪವಿತ್ರ ಸ್ಥಳಗಳು, ಜನರ ಜೀವನಶೈಲಿ, ಆಹಾರವನ್ನು ಹೇಗೆ ನೀಡಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ - ಇಂತಹ ಚಿಕ್ಕಚಿಕ್ಕ ವಿಚಾರಗಳ ಕಾರಣದಿಂದ ಆಧ್ಯಾತ್ಮಿಕ ಅನ್ವೇಷಕರಿಗೆ ಈ ಸ್ಥಳವು ಬಹಳ ಅನುಕೂಲಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಷರತ್ತಿಲ್ಲದೆ ಎಲ್ಲ ರೀತಿಯ ಬೆಂಬಲದ ಹೊರತಾಗಿಯೂ, ಜನರೊಂದಿಗೆ ಯಾವುದೇ ರೀತಿಯ ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳುವ ಭಯವಿಲ್ಲ. ನಾನು ಬೇರೆ ಯಾವುದೇ ಆಮಿಷವನ್ನು ಇಲ್ಲಿರುವುದಕ್ಕೆ ಪ್ರತಿಯಾಗಿ ಒಪ್ಪಿಕೊಳ್ಳುವುದಿಲ್ಲ.
ನನ್ನಲ್ಲಿ ಅಂತ್ಯವಿಲ್ಲದ ಆಕಾಂಕ್ಷೆಗಳ ಪಟ್ಟಿ ಇತ್ತು. ಆದರೆ ಸ್ಪಷ್ಟ ಗುರಿಯಿರಲಿಲ್ಲ. ಈಶಾಯೋಗ ಕೇಂದ್ರವನ್ನು ಹುಡುಕಿಕೊಂಡಿದ್ದು ಯಾರೂ ಮುಟ್ಟದ ಚಿನ್ನದ ಗಣಿಯನ್ನು ಕಂಡುಹಿಡಿದಂತಾಗಿದೆ. ನಾನು ಆಳವಾಗಿ ಅಗೆಯುತ್ತಾ ಹೋದಷ್ಟೂ, ಈ ನನ್ನ ಅಂತರ್ಯದ ಪ್ರಯಾಣವು ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯಯುತವಾಗಿದೆ ಮತ್ತು ಈಗ ನನ್ನೊಳಗೆ ಉಕ್ಕುತ್ತಿರುವ ಆಕಾಂಕ್ಷೆಯೆಂದರೆ ಜೀವನವನ್ನು ಸಾಧ್ಯವಾದಷ್ಟೂ ತೀವ್ರವಾಗಿ ನಡೆಸುವುದು.
ಲಕ್ಷಾಂತರ ಜನರನ್ನು ತಲುಪುವುದರ ಮೂಲಕ ಮಾನವೀಯತೆಗೆ ಪರಿವರ್ತನೆಯ ಸಾಧನಗಳನ್ನು ನೀಡುತ್ತಿರುವ ಮತ್ತು ಸದ್ಗುರುಗಳ ಉಪಸ್ಥಿತಿಯಿರುವ ಈ ಪವಿತ್ರ ಸ್ಥಳದ ಭಾಗವಾಗಿರುವುದು ಒಂದು ಐತಿಹಾಸಿಕ ಕಾಲಘಟ್ಟ. ಇಲ್ಲಿರುವುದು ಒಂದು ಅನುಗ್ರಹ.
ಯಾವ ಶೋಷಣೆಗೂ ಒಳಗಾಗುವ ಚಿಂತೆಯಿಲ್ಲದೆ, ಜನರ ಸೇವೆಗಾಗಿ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಳ್ಳಬಲ್ಲ ಇಂತಹ ಜಾಗ ಇದೆಯೆಂಬುದು ನನಗೆ ತಿಳಿದಿರಲಿಲ್ಲ. ಪ್ರತಿ ದಿನವೂ ಸ್ವಚ್ಚಂದವಾಗಿ ಹಾಗೂ ಆನಂದದಿಂದ ಸೇವೆಯನ್ನು ಮಾಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ! ನನ್ನ ಕಾಳಜಿಯನ್ನು ವಹಿಸಲಾಗಿದೆ ಎಂಬ ಭಾವನೆ ಯಾವಾಗಲೂ ನನಲ್ಲಿದೆ. ಇಂತಹ ಸ್ಥಳವನ್ನು ನಿರ್ಮಿಸಲು ಕಾರಣರಾದ ಎಲ್ಲರಿಗೂ ನಾನು ತಲೆಬಾಗುತ್ತೇನೆ
ನಾನು ಮೊದಲ ಬಾರಿಗೆ ಈ ಜಾಗವನ್ನು ಪ್ರವೇಶಿಸಿದ ಕ್ಷಣವೇ ಅದರೊಂದಿಗೆ ಒಂದು ರೀತಿಯ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಇದಕ್ಕೆ ಕಾರಣ, ಇಲ್ಲಿನ ವಾಸ್ತುಶಿಲ್ಪದ ಸೌಂದರ್ಯ, ಶುದ್ಧ ಪರಿಸರ, ಜನರಲ್ಲಿನ ವಿನಮ್ರ ಮತ್ತು ಕರುಣಾ ಭಾವ ಮತ್ತು ಇಲ್ಲಿರುವ ಪ್ರತಿಯೊಂದು ವಿವರಗಳಲ್ಲೂ ವಹಿಸಲಾದ ಗಮನ ಮತ್ತು ಕಾಳಜಿ.
ಕೆಲವು ತಿಂಗಳುಗಳ ಹಿಂದೆಯಷ್ಟೇ ನನಗೆ 50 ವರ್ಷ ವಯಸ್ಸಾಯಿತು. - ಆದರೆ ನನಗೆ ವಯಸ್ಸಾಗಿದೆಯೆಂದು ಅನಿಸುತ್ತಲೇ ಇಲ್ಲ. ವಾಸ್ತವವಾಗಿ, ನನ್ನ ಕಾಲೇಜು ದಿನಗಳಲ್ಲಿದ್ದಕ್ಕಿಂತಲೂ ನಾನು ಹೆಚ್ಚು ಜೀವಂತವಾಗಿ ಮತ್ತು ಉತ್ಸಾಹಿಯಾಗಿದ್ದೇನೆ. ಈಶಾ ಮತ್ತು ಸದ್ಗುರುಗಳೊಂದಿಗಿನ ನನ್ನ ಪ್ರಯಾಣವು ಸಮೃದ್ಧವಾಗಿದೆ ಮತ್ತು ತೃಪ್ತಿದಾಯಕವಾಗಿದೆ, ಇದನ್ನು ನಾನು ಪ್ರಪಂಚದ ಬೇರೆ ಯಾವುದರೊಂದಿಗೂ ಬದಲಾಯಿಸಿಕೊಳ್ಳಲು ಇಚ್ಛಿಸುವುದಿಲ್ಲ.
ಒಬ್ಬ ಜ್ಞಾನಿಯ ಉಪಸ್ಥಿತಿಯಲ್ಲಿರುವ ಅನುಭವವನ್ನು ಅರಿತುಕೊಂಡ ಮೇಲೆ, ಅದರಿಂದ ನನಗೇನು ಸಿಗುತ್ತದೆ ಎಂಬುದನ್ನು ತಿಳಿಸಲು ಪದಗಳಿರುವುದಿಲ್ಲ. ಆದರೆ, ಸದ್ಗುರುಗಳ ಜೀವಿತದಲ್ಲಿ, ನಾನಿಲ್ಲಿರುವುದಕ್ಕಿಂತ ಉತ್ತಮವಾಗಿ ಪ್ರಪಂಚದ ಇನ್ಯಾವ ಸ್ಥಳದಲ್ಲೂ ಇರಲಾರೆನು ಎಂದು ಮಾತ್ರ ಹೇಳಬಲ್ಲೆ.
ನನಗೆ ಈಶಾ ಯೋಗ ಕೇಂದ್ರದಲ್ಲಿ ವಾಸವಿರಲು ಕಾರಣವಾದ ಅತ್ಯಂತ ಅಮೂಲ್ಯವಾದ ಅಂಶವೆಂದರೆ, ನಾನು ಮಾಡುತ್ತಿರುವ ಚಟುವಟಿಕೆ ಮತ್ತು ನಾನು ಅನುಸರಿಸುತ್ತಿರುವ ಆಧ್ಯಾತ್ಮಿಕ ಪ್ರಕ್ರಿಯೆಯನ್ನು, “ನನಗೇನು ಸಿಗುತ್ತದೆ" ಎಂಬ ಯೋಚನೆಯಿಲ್ಲದೆ ನಡೆಸಿಕೊಂಡು ಹೋಗಲು ಪೂರಕವಾದ ವಾಸಸ್ಥಳ ಇಲ್ಲಿ ನಿರ್ಮಾಣವಾಗಿದೆ.
ಇಲ್ಲಿನ ಪವಿತ್ರ ಸ್ಥಳಗಳು, ಜನರ ಜೀವನಶೈಲಿ, ಆಹಾರವನ್ನು ಹೇಗೆ ನೀಡಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ - ಇಂತಹ ಚಿಕ್ಕಚಿಕ್ಕ ವಿಚಾರಗಳ ಕಾರಣದಿಂದ ಆಧ್ಯಾತ್ಮಿಕ ಅನ್ವೇಷಕರಿಗೆ ಈ ಸ್ಥಳವು ಬಹಳ ಅನುಕೂಲಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಷರತ್ತಿಲ್ಲದೆ ಎಲ್ಲ ರೀತಿಯ ಬೆಂಬಲದ ಹೊರತಾಗಿಯೂ, ಜನರೊಂದಿಗೆ ಯಾವುದೇ ರೀತಿಯ ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳುವ ಭಯವಿಲ್ಲ. ನಾನು ಬೇರೆ ಯಾವುದೇ ಆಮಿಷವನ್ನು ಇಲ್ಲಿರುವುದಕ್ಕೆ ಪ್ರತಿಯಾಗಿ ಒಪ್ಪಿಕೊಳ್ಳುವುದಿಲ್ಲ.
ನನ್ನಲ್ಲಿ ಅಂತ್ಯವಿಲ್ಲದ ಆಕಾಂಕ್ಷೆಗಳ ಪಟ್ಟಿ ಇತ್ತು. ಆದರೆ ಸ್ಪಷ್ಟ ಗುರಿಯಿರಲಿಲ್ಲ. ಈಶಾಯೋಗ ಕೇಂದ್ರವನ್ನು ಹುಡುಕಿಕೊಂಡಿದ್ದು ಯಾರೂ ಮುಟ್ಟದ ಚಿನ್ನದ ಗಣಿಯನ್ನು ಕಂಡುಹಿಡಿದಂತಾಗಿದೆ. ನಾನು ಆಳವಾಗಿ ಅಗೆಯುತ್ತಾ ಹೋದಷ್ಟೂ, ಈ ನನ್ನ ಅಂತರ್ಯದ ಪ್ರಯಾಣವು ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯಯುತವಾಗಿದೆ ಮತ್ತು ಈಗ ನನ್ನೊಳಗೆ ಉಕ್ಕುತ್ತಿರುವ ಆಕಾಂಕ್ಷೆಯೆಂದರೆ ಜೀವನವನ್ನು ಸಾಧ್ಯವಾದಷ್ಟೂ ತೀವ್ರವಾಗಿ ನಡೆಸುವುದು.
ಲಕ್ಷಾಂತರ ಜನರನ್ನು ತಲುಪುವುದರ ಮೂಲಕ ಮಾನವೀಯತೆಗೆ ಪರಿವರ್ತನೆಯ ಸಾಧನಗಳನ್ನು ನೀಡುತ್ತಿರುವ ಮತ್ತು ಸದ್ಗುರುಗಳ ಉಪಸ್ಥಿತಿಯಿರುವ ಈ ಪವಿತ್ರ ಸ್ಥಳದ ಭಾಗವಾಗಿರುವುದು ಒಂದು ಐತಿಹಾಸಿಕ ಕಾಲಘಟ್ಟ. ಇಲ್ಲಿರುವುದು ಒಂದು ಅನುಗ್ರಹ.
ನೀವು ಪ್ರತಿ ತಿಂಗಳೂ ರೂ. 511, ರೂ. 1,011, ರೂ. 10,111 ಅಥವಾ ನೀವು ಬಯಸುವ ಯಾವುದೇ ಮೊತ್ತವನ್ನು ದೇಣಿಗೆ ನೀಡಬಹುದು.
ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನೀವು ಆನ್ಲೈನ್ನಲ್ಲಿ ದೇಣಿಗೆ ನೀಡಬಹುದು.
ಪ್ರಪಂಚದ ಪ್ರತಿಯೊಬ್ಬ ಮನುಷ್ಯರಿಗೂ ಕನಿಷ್ಠ ಒಂದು ಹನಿ ಆಧ್ಯಾತ್ಮಿಕತೆಯನ್ನು ನೀಡುವ ಸದ್ಗುರುಗಳ ದೃಷ್ಟಿಗೆ ಅನುಗುಣವಾಗಿ, ಪ್ರತಿ ಹಂತದಲ್ಲೂ ಮಾನವ ಯೋಗಕ್ಷೇಮವನ್ನು ಪರಿಹರಿಸಲು ಮತ್ತು ಹೆಚ್ಚು ಉತ್ಸಾಹೀ, ಒಳಗೂಡಿಸಿಕೊಂಡಂತಹ ಮತ್ತು ಜಾಗೃತ ಜಗತ್ತನ್ನು ಸೃಷ್ಟಿಸುವ ಈಶಾ ಫೌಂಡೇಶನ್ನ ಪ್ರಯತ್ನವನ್ನು ನಿಮ್ಮ ದೇಣಿಗೆಯು ಬೆಂಬಲಿಸುತ್ತದೆ.
ಈಶಾ ಸಂಘಮಿತ್ರ ನಿಮ್ಮದೇ ಆಯ್ಕೆಯ ನಿಗದಿತ ಅವಧಿಯ ಬದ್ಧತೆಯಾಗಿರುತ್ತದೆ. ಹಾಗಾಗಿಯೂ, ನೀವು ಒಂದು ನಿರ್ದಿಷ್ಟ ತಿಂಗಳು ದೇಣಿಗೆ ನೀಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಕನಿಷ್ಠ 10 ದಿನಗಳ ಮುಂಚಿತವಾಗಿ isha.sanghamitra@ishafoundation.org ಗೆ ಬರೆಯಿರಿ.
ಈಶಾಫೌಂಡೇಶನ್ಗೆ ನೀಡುವ ದೇಣಿಗೆಗೆ ಸೆಕ್ಷನ್ 80 ಜಿ ಅಡಿಯಲ್ಲಿ ಭಾರತೀಯ ತೆರಿಗೆದಾರರಿಗೆ ವಿನಾಯಿತಿಯಿರುತ್ತದೆ.
ಹೌದು, ನೀವೂ ಸಹ ಈಶಾ ಸಂಘಮಿತ್ರಕ್ಕೆ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚು ಪ್ರಜ್ಞಾಪೂರ್ವಕವಾದ ಪ್ರಪಂಚವನ್ನು ಸೃಷ್ಟಿಸುವ ಈಶಾದ ಕಾರ್ಯಗಳಿಗೆ ಬೆಂಬಲಿಸುವ ಒಂದು ಸುಂದರವಾದ ಅವಕಾಶವೇ ಈಶಾ ಸಂಘಮಿತ್ರ. ಇದು ಈಶಾಫೌಂಡೇಶನ್ನ ಚಟುವಟಿಕೆಗಳನ್ನು ಬೆಂಬಲಿಸಲು ಮಾಸಿಕ ದೇಣಿಗೆಯನ್ನು ಒಳಗೊಂಡಿರುತ್ತದೆ. ಇಲ್ಲಿ ದೇಣಿಗೆಯ ಮೊತ್ತ ಮತ್ತು ಅವಧಿಯನ್ನು ವ್ಯಕ್ತಿಯ ವಿವೇಚನೆಗೆ ಬಿಡಲಾಗುತ್ತದೆ. ನಿಗದಿತ ಸಮಯ ಮುಗಿದ ನಂತರ ಆ ವ್ಯಕ್ತಿ ತಮ್ಮ ಬೆಂಬಲವನ್ನು ನವೀಕರಿಸಬಹುದು.
ಈಶಾಂಗ 7% ಸದ್ಗುರುಗಳೊಂದಿಗಿನ ಜೀವನಪರ್ಯಂತದ ಪವಿತ್ರ ಪಾಲುದಾರಿಕೆಯಾಗಿದೆ. ಈಶಾಂಗವಾಗುವುದು ಎಂದರೆ ಇದರ ಮೂಲಕ ನಿಮ್ಮ ಗಳಿಕೆಯ 7% ಅಥವಾ ಹೆಚ್ಚಿನದನ್ನು ನಿಯಮಿತವಾಗಿ ಈಶಾಫೌಂಡೇಶನ್ಗೆ ನೀಡಲು ನೀವು ಸಿದ್ಧರಿದ್ದೀರಿ ಎಂದರ್ಥ. ಈಶಾಂಗ 7% ಪಾಲುದಾರರನ್ನು ಸದ್ಗುರು ಪ್ರಬಲ ಪ್ರಕ್ರಿಯೆಗೆ ಒಳಗೊಳಿಸುತ್ತಾರೆ ಹಾಗು ಇದನ್ನು ಪ್ರತಿದಿನ ಅಭ್ಯಾಸ ಮಾಡಬೇಕಾಗುತ್ತದೆ.
ನೀವು ಪ್ರತಿದಿನ ಈ ಕೆಳಗಿನ ಸರಳ ಆದರೆ ಶಕ್ತಿಯುತ ಅಭ್ಯಾಸವನ್ನು ಮಾಡಬಹುದು:
ತುಪ್ಪ ಅಥವಾ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ.
ಅರ್ಧ ಸಿದ್ಧಾಸನ ಅಥವಾ ಚಕ್ಕಂಬಕ್ಕಳ ಭಂಗಿಯಲ್ಲಿ ಕುಳಿತುಕೊಳ್ಳಿ. ಕಣ್ಣುಗಳನ್ನು ಮುಚ್ಚಿ ಅಂಗೈಗಳನ್ನು ಮೇಲ್ಮುಖವಾಗಿ ಇಟ್ಟು, ನಿಮ್ಮ ತೊಡೆಯ ಮೇಲೆ ಕೈಗಳನ್ನು ಇರಿಸಿ.
"ಯೋಗ ಯೋಗ ಯೋಗೇಶ್ವರಾಯ"ವನ್ನು 12 ಬಾರಿ ಪಠಿಸಿ.
5 ನಿಮಿಷಗಳ ಕಾಲ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳುವುದನ್ನು ಮುಂದುವರಿಸಿ ಮತ್ತು ಮುಖವನ್ನು ಸ್ವಲ್ಪ ಮೇಲ್ಮುಖ್ಗವಾಗಿರಿಸಿಕೊಳ್ಳಿ.
ನೀವು ತಂಡವನ್ನು +91 844 844 7707 ಗೆ ಕರೆ ಮಾಡುವ ಮೂಲಕ ಅಥವಾ isha.sanghamitra@ishafoundation.org ಮೂಲಕ ತಲುಪಬಹುದು.