Login | Sign Up
Inner Engineering
Login|Sign Up
Country

ಸತ್ಯ

Want to get a fresh perspective on ಸತ್ಯ? Explore Sadhguru’s wisdom and insights through articles, videos, quotes, podcasts and more.

video  
ಬದುಕು ಏಕಿಷ್ಟು ಕ್ರೂರ?: ಸಮಂತಾರ ಪ್ರಶ್ನೆ | Samantha Prabhu Asks | Sadhguru Kannada
Apr 25, 2023
Loading...
Loading...
video  
ಮಗುವಿಗೆ ಬೇಕಾಗಿರುವುದು ಒಬ್ಬ ಸ್ನೇಹಿತ, ಬಾಸ್ ಅಲ್ಲ ಎಂಬ ವಿಷಯವನ್ನು ಇಲ್ಲಿ ಸದ್ಗುರುಗಳು ವಿವರಿಸುತ್ತಾರೆ. ನಿಮ್ಮ ಉಪದೇಶಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದರೆ, ಅವರು ಸ್ವಾತಂತ್ರ್ಯದ ಭಾವನೆಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಇದರಿಂದ ಅವರು ಮುಂದೆ ನಿಮ್ಮ ಮೇಲೆ ತಿರುಗಿ ಬೀಳಬಹುದಾದ ಸಂಭವನೀಯತೆ ಉಂಟಾಗುತ್ತದೆ. ನೀವು ಹಾಗೆ ಮಾಡದಿದ್ದರೆ ಮಕ್ಕಳೇ ನಿಮ್ಮ ಬಳಿ ಪ್ರಶ್ನೆಗಳೊಂದಿಗೆ ಅಥವಾ ಸಹಾಯ ಕೇಳುತ್ತಾ ಬರುತ್ತಾರೆ. ಆಗ ನಿಮಗೆ ಗೊತ್ತಿದ್ದಷ್ಟು, ನಿಮ್ಮಿಂದಾದಷ್ಟು ಉತ್ತರಗಳನ್ನು, ಸಹಾಯವನ್ನು ನೀಡಿ, "ನನಗಿಷ್ಟೇ ಗೊತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದೆನ್ನುತ್ತಾರೆ. ಹೆತ್ತವರು ಮಕ್ಕಳ ಮುಂದೆ ೧೦೦% ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ. ಹಾಗೆಯೇ ಅವರನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಬೇಕು ಅಷ್ಟೆ, ಉಳಿದಂತೆ ಅವರನ್ನು ಸ್ವತಂತ್ರರಾಗಿ ಬಿಡಬೇಕೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ಅವರು ನಿಮ್ಮ ಪ್ರಭಾವದಿಂದಲೂ ಸ್ವತಂತ್ರರಾಗಿರಬೇಕು ಎಂದು ಸೂಚಿಸುತ್ತಾರೆ. ಅವರೊಂದು ಸ್ವತಂತ್ರ ಜೀವ, ನಿಮ್ಮ ಆಸ್ತಿಯಲ್ಲ!
Jan 2, 2023
Loading...
Loading...
video  
’ಸಿಎಎ’ ಅಥವಾ ‘ಪೌರತ್ವ ತಿದ್ದುಪಡಿ ಕಾಯ್ದೆ’ ಅನುಮೋದನೆಯಾದ ನಂತರ ದೇಶದ ಕೆಲವೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಕೆಲವು ಕಡೆ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಸಿಎಎ ಮತ್ತು ಈ ಹಿಂಸಾಚಾರದ ಬಗ್ಗೆ ಸದ್ಗುರುಗಳು ಮಾತನಾಡಿದ್ದರು ಕೂಡ. ಈ ಹಿನ್ನಲೆಯಲ್ಲಿ, ಸದ್ಗುರುಗಳು ದಾವೋಸ್ ನಲ್ಲಿ ನಡೆದ ’ಜಾಗತಿಕ ಆರ್ಥಿಕ ಸಮಾವೇಶ’ (World Economic Form) ಭಾಗವಹಿಸಲು ತೆರಳಿದ್ದಾಗ ಅಲ್ಲಿಗೆ ಆಗಮಿಸಿದ್ದ ’ಇಂಡಿಯಾ ಟುಡೇ’ ನಿರೂಪಕ ರಾಹುಲ್ ಕನ್ವಾಲ್ ಸದ್ಗುರುಗಳೊಂದಿಗೆ ಚಿಕ್ಕ ಸಂದರ್ಶನ ಮಾಡಿದ್ದರು. ಇದು ಅದರ ಕನ್ನಡ ಅವತರಣಿಕೆ. ಸಿಎಎ ನಂತರ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನು ಮಾಡಬೇಕಿತ್ತು? ಸಿಎಎ ಕಾಯ್ದೆಯಲ್ಲಿ ಭಾರತೀಯರಿಗೆ ಮುಳುವಾಗುವಂಥದ್ದೇನಾದರೂ ಇದೆಯೇ? ಹಾಗಿದ್ದರೆ ಸರ್ಕಾರ ವಿಫಲವಾಗಿದ್ದೆಲ್ಲಿ? ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳಬೇಕಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಸದ್ಗುರುಗಳ ಮಾತುಗಳನ್ನು ಕೇಳಬಹುದು.
Jan 2, 2023
Loading...
Loading...
video  
ಗೌತಮ ಬುದ್ಧ ಭಾರತದ ಅತ್ಯಂತ ಸುಪ್ರಸಿದ್ಧ ದಾರ್ಶನಿಕರಲ್ಲಿ ಒಬ್ಬ. ಆತನ ಬದುಕಿನಲ್ಲಿ ನಡೆದ ಅನೇಕ ಘಟನೆಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ಇದು ಆತನ ಬದುಕಿನಲ್ಲಿ ನಡೆದ ಒಂದು ಮನಮುಟ್ಟುವ ಪ್ರಸಂಗ. ಆತ ಮತ್ತು ಆತನ ಶಿಷ್ಯ ಆನಂದತೀರ್ಥನನ್ನು ಒಳಗೊಳ್ಳುವ ಈ ಘಟನೆ, ಗುರು-ಶಿಷ್ಯರ ಅಪೂರ್ವ ಸಂಬಂಧಕ್ಕೂ ಸಾಕ್ಷಿಯಾಗಿದೆ. ಹಾಗೆಯೇ ಆಧ್ಯಾತ್ಮಿಕ ಸಾಧನೆ ಮತ್ತು ಆಧ್ಯಾತ್ಮದ ಹಾದಿ ಎಷ್ಟು ಶಕ್ತಿಯುತವೆಂದೂ, ’ಸತ್ಯ’ ಎಂಬುದು ಹೇಗೆ ಎಂದೆಂದಿಗೂ ಅಜರಾಮರ ಎಂದೂ ತಿಳಿಸಿಕೊಡುತ್ತದೆ. ಆಧ್ಯಾತ್ಮಿಕ ಹಾದಿಯಲ್ಲಿ ಸತ್ಯನಿಷ್ಠನಾದವನಿಗೆ ಹೇಗೆ ಯಾವುದೂ ಅಡಚಣೆಯಾಗಲು ಸಾಧ್ಯವಿಲ್ಲವೆಂದು ಮನಮುಟ್ಟುವಂತೆ ತಿಳಿಸಿಕೊಡುತ್ತದೆ. ಆಧ್ಯಾತ್ಮ ಸಾಧಕರಿಗೆ ಶ್ರದ್ಧೆಯಿಂದ ತಮ್ಮ ಸಾಧನೆಯಲ್ಲಿ ತೊಡಗಲು ಈ ಕಥೆ ಪ್ರೇರಣೆಯಾಗಿದೆ. ಬನ್ನಿ, ಸದ್ಗುರುಗಳ ಮಾತಿಗೆ ಕಿವಿಯಾಗೋಣ.
Jan 2, 2023
Loading...
Loading...