ಗೌತಮ ಬುದ್ಧ ಭಾರತದ ಅತ್ಯಂತ ಸುಪ್ರಸಿದ್ಧ ದಾರ್ಶನಿಕರಲ್ಲಿ ಒಬ್ಬ. ಆತನ ಬದುಕಿನಲ್ಲಿ ನಡೆದ ಅನೇಕ ಘಟನೆಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ಇದು ಆತನ ಬದುಕಿನಲ್ಲಿ ನಡೆದ ಒಂದು ಮನಮುಟ್ಟುವ ಪ್ರಸಂಗ. ಆತ ಮತ್ತು ಆತನ ಶಿಷ್ಯ ಆನಂದತೀರ್ಥನನ್ನು ಒಳಗೊಳ್ಳುವ ಈ ಘಟನೆ, ಗುರು-ಶಿಷ್ಯರ ಅಪೂರ್ವ ಸಂಬಂಧಕ್ಕೂ ಸಾಕ್ಷಿಯಾಗಿದೆ. ಹಾಗೆಯೇ ಆಧ್ಯಾತ್ಮಿಕ ಸಾಧನೆ ಮತ್ತು ಆಧ್ಯಾತ್ಮದ ಹಾದಿ ಎಷ್ಟು ಶಕ್ತಿಯುತವೆಂದೂ, ’ಸತ್ಯ’ ಎಂಬುದು ಹೇಗೆ ಎಂದೆಂದಿಗೂ ಅಜರಾಮರ ಎಂದೂ ತಿಳಿಸಿಕೊಡುತ್ತದೆ. ಆಧ್ಯಾತ್ಮಿಕ ಹಾದಿಯಲ್ಲಿ ಸತ್ಯನಿಷ್ಠನಾದವನಿಗೆ ಹೇಗೆ ಯಾವುದೂ ಅಡಚಣೆಯಾಗಲು ಸಾಧ್ಯವಿಲ್ಲವೆಂದು ಮನಮುಟ್ಟುವಂತೆ ತಿಳಿಸಿಕೊಡುತ್ತದೆ. ಆಧ್ಯಾತ್ಮ ಸಾಧಕರಿಗೆ ಶ್ರದ್ಧೆಯಿಂದ ತಮ್ಮ ಸಾಧನೆಯಲ್ಲಿ ತೊಡಗಲು ಈ ಕಥೆ ಪ್ರೇರಣೆಯಾಗಿದೆ. ಬನ್ನಿ, ಸದ್ಗುರುಗಳ ಮಾತಿಗೆ ಕಿವಿಯಾಗೋಣ.

video
Jul 16, 2022
Subscribe