Main Centers
International Centers
India
USA
Wisdom
FILTERS:
SORT BY:
ದೇವಿಯ ಅನುಗ್ರಹಕ್ಕೆ ಪಾತ್ರರಾದವರು ಸೌಭಾಗ್ಯವಂತರು. ಆಗ ನೀವು ನಿಮ್ಮ ಕಲ್ಪನೆ, ಸಾಮರ್ಥ್ಯಗಳನ್ನು ಎಷ್ಟೋ ಮೀರಿದಂತಹ ಬಾಳನ್ನು ಬಾಳುವಿರಿ.
ಸ್ತ್ರೀತತ್ವವು ಜೀವನದ ಶಕ್ತಿಯುತವಾದ ಆಯಾಮ. ‘ಶಕ್ತಿ’ ಇಲ್ಲದೇ ಹೋದರೆ ಅಸ್ತಿತ್ವದಲ್ಲಿ ಏನೊಂದೂ ಇರದು.
The best way to approach Navratri is in a spirit of Celebration. This is the secret of life: to be non-serious but absolutely Involved.
ನೆಲದ ಮೇಲೆ ದೃಢವಾಗಿ ಕಾಲೂರಿ ನಿಲ್ಲುವುದು, ಮತ್ತು ಕೈಚಾಚಿ ಆಕಾಶವನ್ನು ಮುಟ್ಟುವುದು – ಇದುವೇ ಆಧ್ಯಾತ್ಮಿಕ ಪ್ರಕ್ರಿಯೆಯ ಸಾರಸತ್ತ್ವ.
ದೇಹ ಮತ್ತು ಮನಸ್ಸುಗಳ ನಡುವೆ ಆಳವಾದ ಸಂಬಂಧವಿದೆ. ದೇಹವು ನಿಶ್ಚಲವಾದರೆ ಮನಸ್ಸೂ ಸಹಜವಾಗಿಯೇ ನಿಶ್ಚಲವಾಗುತ್ತದೆ.
ಮನುಷ್ಯರಾಗಿರುವುದು ಎಂದರೆ ಪ್ರಕೃತಿಯ ನಿಯಮಗಳನ್ನು ಮೀರುವ ಸಾಮರ್ಥ್ಯವನ್ನು ಹೊಂದಿರುವುದು, ಮತ್ತು ನಮಗಿಂತ ಮಹತ್ತರವಾದುದನ್ನು ಸಾಕಾರಗೊಳಿಸುವುದು.
ನಿಮ್ಮ ಪಿತೃಗಳು ನಿಮಗೆ ಒಂದು ಸೋಪಾನವಾಗಬೇಕೇ ಹೊರತು ಬಂಧನವಲ್ಲ. ಮಹಾಲಯ ಅಮಾವಾಸ್ಯೆಯು ಆ ಸಾಧ್ಯತೆಯನ್ನು ತೆರೆಯುತ್ತದೆ.
ಯಾರ ಬಗ್ಗೆಯೂ ಎಂದೂ ಅಭಿಪ್ರಾಯ ರೂಪಿಸಿಕೊಳ್ಳಬೇಡಿ. ಅವರು ಈ ಕ್ಷಣ ಹೇಗಿದ್ದಾರೆ ಎಂಬುದಷ್ಟೆ ಮುಖ್ಯ.
ಭಯವು ಪ್ರಜ್ಞಾಹೀನತೆಯ ಒಂದು ಪರಿಣಾಮ. ಭಯಭೀತರಾಗಿರುವುದು ನಮ್ಮನ್ನು ಕಾಪಾಡುವುದಿಲ್ಲ. ಪ್ರಜ್ಞಾಪೂರ್ವಕರಾಗುವ ಮೂಲಕವಷ್ಟೆ ನಾವು ಜೀವನವನ್ನು ನಿಜವಾಗಿಯೂ ಸೃಜಿಸಬಹುದು.
ಜ್ಞಾನೋದಯ ಎಂದರೆ ‘ಬೆಳಕು’ ಮೂಡುವ ಬಗ್ಗೆಯಲ್ಲ – ಅದು ಕತ್ತಲು-ಬೆಳಕುಗಳನ್ನು ಮೀರಿದ ಒಂದು ಸಾಕ್ಷಾತ್ಕಾರ.
ನಿಮಗೆ ಇಷ್ಟವಿರಲಿ ಇಲ್ಲದಿರಲಿ, ಜೀವನವು ನಿಮ್ಮ ಕೈಯಲ್ಲಿ ಎಲ್ಲ ರೀತಿಯ ದೊಂಬರಾಟವನ್ನು ಮಾಡಿಸುತ್ತದೆ. ನೀವು ಅದಕ್ಕೆ ಸಿದ್ಧರಾಗಿದ್ದರೆ ಅದನ್ನು ನೀವು ಉಲ್ಲಾಸದಿಂದ ಮಾಡಬಹುದು.
ಶಾಂತಿ-ಸಂತೋಷಗಳ ನೆಲೆ ಇರುವುದು ಮಾರುಕಟ್ಟೆಯಲ್ಲೂ ಅಲ್ಲ, ಕಾಡಿನಲ್ಲೂ ಅಲ್ಲ, ಬದಲಿಗೆ ನಿಮ್ಮೊಳಗೆ.