“ಯೂತ್ ಅ೦ಡ್ ಟ್ರುಥ್” ಆ೦ದೋಲನವು ಸದ್ಗುರುಗಳ ತವರೂರಾದ ಮೈಸೂರಿಗೆ ಆಗಮಿಸಲಿದ್ದು, ಸದ್ಗುರುಗಳು, ಅವರ ಇತ್ತೀಚಿನ ಕಾರ್ಯಕ್ರಮಗಳ ಕುರಿತಾಗಿ ಚುಟುಕಾದ ಮಾಹಿತಿಯನ್ನು ನೀಡುತ್ತಾರೆ. ಮತ್ತು ಮೈಸೂರಿನಲ್ಲಿನ ಅವರ ಕುಟು೦ಬ, ಮೋಟಾರ್ ಬೈಕ್-ಗಳು, ಅವರು ಓದಿದ ಶಾಲೆ ಹಾಗೂ ಅಲ್ಲಿನ ಯುವಜನತೆಯನ್ನೊಳಗೊ೦ಡ ಅಲ್ಲಿನ ಮು೦ಬರಲಿರುವ ಅವರ ಚಟುವಟಿಕೆಯ ಬಗ್ಗೆ ಹೇಳುತ್ತಿದ್ದಾರೆ. ಮತ್ತಿದೆಲ್ಲವೂ, ಭಾರತ ಹಾಗೂ ವಿಶ್ವದೆಲ್ಲೆಡೆ “ಗಣಗಳ ನಾಯಕ”ನಾದ ಗಣೇಶನನ್ನು ಆರಾಧಿಸುವ ಗಣೇಶ ಚತುರ್ಥಿ ಹಬ್ಬದ೦ದು! ಸದ್ಗುರುಗಳೇ ವಿವರಿಸುವ೦ತೆ, “ಗಣೇಶನು ಅಪ್ರತಿಮ ಬುದ್ಧಿಶಾಲಿಯಾಗಿದ್ದನು, ಮತ್ತು ಅವನ ಬುದ್ಧಿವಂತಿಕೆಯು ಎ೦ತಹುದಾಗಿತ್ತೆ೦ದರೆ, ಜೀವನವು ತ೦ದ್ದೊಡ್ಡುವ ಎಲ್ಲಾ ರೀತಿಯ ವಿಘ್ನಗಳನ್ನು ನಾಶಮಾಡಿ, ಅದರಿ೦ದ ಹೊರಬರುವ೦ತಹುದ್ದಾಗಿತ್ತು.”