logo
search

ಧರ್ಮ

Want to get a fresh perspective on ಧರ್ಮ? Explore Sadhguru’s wisdom and insights through articles, videos, quotes, podcasts and more.

video  
’ಸಿಎಎ’ ಅಥವಾ ‘ಪೌರತ್ವ ತಿದ್ದುಪಡಿ ಕಾಯ್ದೆ’ ಅನುಮೋದನೆಯಾದ ನಂತರ ದೇಶದ ಕೆಲವೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಕೆಲವು ಕಡೆ ಬಸ್ಸುಗಳಿಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿತ್ತು. ಸಿಎಎ ಮತ್ತು ಈ ಹಿಂಸಾಚಾರದ ಬಗ್ಗೆ ಸದ್ಗುರುಗಳು ಮಾತನಾಡಿದ್ದರು ಕೂಡ. ಈ ಹಿನ್ನಲೆಯಲ್ಲಿ, ಸದ್ಗುರುಗಳು ದಾವೋಸ್ ನಲ್ಲಿ ನಡೆದ ’ಜಾಗತಿಕ ಆರ್ಥಿಕ ಸಮಾವೇಶ’ (World Economic Form) ಭಾಗವಹಿಸಲು ತೆರಳಿದ್ದಾಗ ಅಲ್ಲಿಗೆ ಆಗಮಿಸಿದ್ದ ’ಇಂಡಿಯಾ ಟುಡೇ’ ನಿರೂಪಕ ರಾಹುಲ್ ಕನ್ವಾಲ್ ಸದ್ಗುರುಗಳೊಂದಿಗೆ ಚಿಕ್ಕ ಸಂದರ್ಶನ ಮಾಡಿದ್ದರು. ಇದು ಅದರ ಕನ್ನಡ ಅವತರಣಿಕೆ. ಸಿಎಎ ನಂತರ ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನು ಮಾಡಬೇಕಿತ್ತು? ಸಿಎಎ ಕಾಯ್ದೆಯಲ್ಲಿ ಭಾರತೀಯರಿಗೆ ಮುಳುವಾಗುವಂಥದ್ದೇನಾದರೂ ಇದೆಯೇ? ಹಾಗಿದ್ದರೆ ಸರ್ಕಾರ ವಿಫಲವಾಗಿದ್ದೆಲ್ಲಿ? ಮಾಧ್ಯಮಗಳು ಯಾವ ರೀತಿ ನಡೆದುಕೊಳ್ಳಬೇಕಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಸದ್ಗುರುಗಳ ಮಾತುಗಳನ್ನು ಕೇಳಬಹುದು.
Jul 25, 2022
Loading...
Loading...
video  
ಸದ್ಗುರುಗಳು ಇಲ್ಲಿ ಶ್ರೀರಾಮ ಮತ್ತು ಯೇಸುವಿನ ಗುಣಗಳಲ್ಲಿರುವ ಸಾಮ್ಯತೆಯನ್ನೂ, ಅವರುಗಳು ಯಾಕೆ ಇಂದಿಗೂ ಅತ್ಯಂತ ಸಂಗತರಾಗಿದ್ದಾರೆ ಎಂಬುದನ್ನೂ ತೋರಿಸುತ್ತಾರೆ. ನಾವು ಇವರನ್ನು ಮಹಾನ್ ಎಂದು ಪರಿಗಣಿಸಿ ಪೂಜಿಸುವುದು ಅವರು ಅಂದಿನ ಮಹಾ ಯಶಸ್ವೀ ವ್ಯಕ್ತಿಗಳು ಎಂದೇನೂ ಅಲ್ಲ, ಆದರೆ ಅವರು ತಮ್ಮ ಜೀವನದಲ್ಲಿ ದುರಂತಗಳ ಮೇಲೆ ದುರಂತಗಳು ಬಂದರೂ ಅವನ್ನು ಮೀರಿ ನಿಂತಿದ್ದರು, ಮತ್ತು ತಮ್ಮ ಸ್ಥಿರತೆಯನ್ನು, ಸಮತ್ವವನ್ನು ಕಳೆದುಕೊಳ್ಳಲಿಲ್ಲ ಎಂಬುದಕ್ಕಾಗಿ. ಆದ್ದರಿಂದ ಅವರು ನಿಜವಾಗಿ ಇದ್ದರೋ ಇಲ್ಲವೋ ಎಂಬ ಇತಿಹಾಸಕಾರರ ಗೋಜಲಿಗೆ ಬೀಳದೆ ಅವರ ಜೀವನವನ್ನು ನಮಗೆ ಒಂದು ಪ್ರೇರಣೆಯನ್ನಾಗಿ ಮಾಡಿಕೊಂಡು ಅವರ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು, ನಮಗೆ ಮುಖ್ಯವಾಗುವುದು ಅದಷ್ಟೆ ಎಂದು ಕಿವಿಮಾತು ಹೇಳುತ್ತಾರೆ.
Jul 10, 2022
Loading...
Loading...