ಸದ್ಗುರುಗಳು ಇಲ್ಲಿ ಶ್ರೀರಾಮ ಮತ್ತು ಯೇಸುವಿನ ಗುಣಗಳಲ್ಲಿರುವ ಸಾಮ್ಯತೆಯನ್ನೂ, ಅವರುಗಳು ಯಾಕೆ ಇಂದಿಗೂ ಅತ್ಯಂತ ಸಂಗತರಾಗಿದ್ದಾರೆ ಎಂಬುದನ್ನೂ ತೋರಿಸುತ್ತಾರೆ. ನಾವು ಇವರನ್ನು ಮಹಾನ್ ಎಂದು ಪರಿಗಣಿಸಿ ಪೂಜಿಸುವುದು ಅವರು ಅಂದಿನ ಮಹಾ ಯಶಸ್ವೀ ವ್ಯಕ್ತಿಗಳು ಎಂದೇನೂ ಅಲ್ಲ, ಆದರೆ ಅವರು ತಮ್ಮ ಜೀವನದಲ್ಲಿ ದುರಂತಗಳ ಮೇಲೆ ದುರಂತಗಳು ಬಂದರೂ ಅವನ್ನು ಮೀರಿ ನಿಂತಿದ್ದರು, ಮತ್ತು ತಮ್ಮ ಸ್ಥಿರತೆಯನ್ನು, ಸಮತ್ವವನ್ನು ಕಳೆದುಕೊಳ್ಳಲಿಲ್ಲ ಎಂಬುದಕ್ಕಾಗಿ. ಆದ್ದರಿಂದ ಅವರು ನಿಜವಾಗಿ ಇದ್ದರೋ ಇಲ್ಲವೋ ಎಂಬ ಇತಿಹಾಸಕಾರರ ಗೋಜಲಿಗೆ ಬೀಳದೆ ಅವರ ಜೀವನವನ್ನು ನಮಗೆ ಒಂದು ಪ್ರೇರಣೆಯನ್ನಾಗಿ ಮಾಡಿಕೊಂಡು ಅವರ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು, ನಮಗೆ ಮುಖ್ಯವಾಗುವುದು ಅದಷ್ಟೆ ಎಂದು ಕಿವಿಮಾತು ಹೇಳುತ್ತಾರೆ.

video
Jul 10, 2022
Subscribe