1. Home/
  2. Wisdom/
  3. Video/
  4. ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ!
Also in:
English
español

ನಿಮ್ಮ 50% ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ!

#HealthTips #Immunity ಕೊರೊನಾ ಎರಡನೇ ಅಲೆ ಬಂದಿರುವ ಈ ಸಂದರ್ಭದಲ್ಲಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಾದ ಮಹತ್ವ ನಮಗೆಲ್ಲರಿಗೂ ಮನದಟ್ತಾಗುತ್ತಿದೆ. ಮಧ್ಯಂತರ ಉಪವಾಸ ಅಥವಾ Intermittent Fasting ಎನ್ನುವುದು ಯೌಗಿಕ ಸಂಸ್ಕೃತಿಯಲ್ಲಿ ಬಹಳ ಪ್ರಸಿದ್ಧ. ಇದನ್ನು ಅಭ್ಯಸಿಸುವ ಪ್ರಯೋಜನಗಳೇನು ಹಾಗೂ ರೋಗಗಳನ್ನು ದೂರವಿಡುವಲ್ಲಿ ಇದು ಹೇಗೆ ಸಹಕಾರಿ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ‘ಉಪವಾಸ’ ಎನ್ನುವುದು ನಮ್ಮ ಸಂಸ್ಕೃತಿಯಲ್ಲಿ ಅನೇಕ ವಿಧಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಅದು ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಎಂದು ಅನೇಕರು ಮೂದಲಿಸುತ್ತಿದ್ದರು. ಇತ್ತೀಚಿಗೆ ಕೆಲವು ಪಾಶ್ಚಿಮಾತ್ಯ ಸಂಶೋಧನೆಗಳು ಉಪವಾಸವು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ತೋರಿಸಿಕೊಟ್ಟು ಅದಕ್ಕೆ ನೋಬೆಲ್ ಪ್ರಶಸ್ತಿಯೂ ದೊರೆಯಿತು. ಉಪವಾಸವನ್ನು ಮೊದಲು ಮೂದಲಿಸಿದ್ದ ಅನೇಕರು ಈಗ ಅದನ್ನು ಒಪ್ಪಿ ‘ಮಧ್ಯಂತರ ಉಪವಾಸ’ ಎಂಬುದನ್ನು ಪ್ರಾರಂಭಿಸಿದ್ದಾರೆ. ಮಧ್ಯಂತರ ಉಪವಾಸ ಮಾಡುವುದಿದ್ದರೆ ಹೇಗೆ ಮಾಡಬೇಕು? ಎರಡು ಊಟಗಳ ನಡುವೆ ಎಷ್ಟು ಅಂತರವಿರವಿದ್ದರೆ ಚೆನ್ನ? ಮಧ್ಯಂತರ ಉಪವಾಸದಿಂದ ನಮ್ಮ ಆರೋಗ್ಯದ ಸಮಸ್ಯೆಗಳು ದೂರವಾಗಬಹುದೇ? ಇವೆಲ್ಲವಕ್ಕೂ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ!

video

Jul 10, 2022


Subscribe

Get weekly updates on the latest blogs via newsletters right in your mailbox.

Related Tags

ಆಹಾರ
ಶರೀರ
ಆರೋಗ್ಯ
ನಿದ್ರೆ
ಜೀವನಶೈಲಿ
ಧ್ಯಾನ
ಯೂತ್ ಅಂಡ್ ಟ್ರುತ್
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023