Main Centers
International Centers
India
USA
FILTERS:
SORT BY:
ನಿಮ್ಮ ಸುತ್ತಲಿನ ಜನರನ್ನು ಹಿಡಿತದಲ್ಲಿರಿಸಲು ಪ್ರಯತ್ನಿಸಬೇಡಿ. ಅವರು ಅವರ ಸ್ವಭಾವಕ್ಕನುಗುಣವಾಗಿ ಇದ್ದಾರೆ. ನೀವು ಈ ಒಂದು ಜೀವವನ್ನು—ನಿಮ್ಮನ್ನು—ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ.
ಮಾನಸಿಕ ನೋವನ್ನು ನಿಮಗೆ ಬೇರೆ ಯಾರೂ ಉಂಟು ಮಾಡಲಾರರು. ಅದನ್ನು ಮಾಡಿಕೊಳ್ಳುವುದು ನೀವೇ – ನಿಮ್ಮ ಸುತ್ತ ನಡೆಯುವ ಏನಕ್ಕೋ ಅದು ನಿಮ್ಮದೇ ಪ್ರತಿಕ್ರಿಯೆ.
ಜೀವವು ನಿರಾಳವಾಗಿಯೇ ಇದೆ. ಒತ್ತಡದಲ್ಲಿರುವುದು ಮನಸ್ಸು ಅಷ್ಟೆ.
ಜಗತ್ತಿನಲ್ಲಿ ಬಹುತೇಕರು ಬ್ಯುಸಿಯಾಗಿಲ್ಲ, ಅವರ ಮನಸ್ಸು ಅನಗತ್ಯ ಸಂಗತಿಗಳಿಂದ ಕಿಕ್ಕಿರಿದು ಹೋಗಿದೆ ಅಷ್ಟೆ.
ನಿಜಕ್ಕೂ ಮುಖ್ಯವಾಗುವುದು ಜನರು ನಿಮ್ಮನ್ನು ಪ್ರೀತಿಸುತ್ತಾರೆಯೇ ಎಂಬುದಲ್ಲ, ಬದಲಿಗೆ ನೀವು ಪ್ರೀತಿಯಿಂದ ತುಂಬಿದ್ದೀರಾ ಎಂಬುದು.
ನೀವು ಬಂಧಿಸಲ್ಪಟ್ಟಿರುವುದು ನೀವು ಇಷ್ಟಪಡುವ ಅಥವಾ ಪ್ರೀತಿಸುವ ವ್ಯಕ್ತಿಗಳೊಂದಿಗೆ ಮಾತ್ರವಲ್ಲ. ನೀವು ಇಷ್ಟ ಪಡದಿರುವ ಅಥವಾ ದ್ವೇಷಿಸುವ ವ್ಯಕ್ತಿಗಳೊಂದಿಗೆ ನೀವು ಇನ್ನೂ ಹೆಚ್ಚು ಆಳವಾಗಿ ಬಂಧಿತರಾಗಿದ್ದೀರಿ.
ವಯಸ್ಸಿನೊಂದಿಗೆ ನಿಮ್ಮ ದೈಹಿಕ ಚುರುಕುತನ ಕುಗ್ಗಬಹುದು. ಆದರೆ ನಿಮ್ಮ ಜೀವಂತಿಕೆ ಕುಗ್ಗಬೇಕಾಗಿಲ್ಲ.
ನಿಮಗೆ ಬಹಳ ಹತ್ತಿರದವರು ಮತ್ತು ಆತ್ಮೀಯರಾದವರಿಗೇ ನಿಮ್ಮ ಅತ್ಯಂತ ಕೆಟ್ಟ ರೂಪ ನೋಡಲು ಸಿಗುತ್ತದೆ. ಯಾವ ಅಪರಿಚಿತರಿಗೂ ಆ ಕೊಳಕು ನೋಡಲು ಸಿಗುವುದಿಲ್ಲ.
ನಿಚ್ಚಳ ಸ್ಪಷ್ಟತೆಯಿದ್ದರೆ, ಆಗ ಧೈರ್ಯದ ಅಗತ್ಯವಿಲ್ಲ. ಸ್ಪಷ್ಟತೆಯೇ ನಿಮ್ಮನ್ನು ಆ ಕಡೆಗೆ ದಾಟಿಸುತ್ತದೆ.
ನಾವೆಲ್ಲರೂ ಹುಟ್ಟು ಆತ್ಮಜ್ಞಾನಿಗಳು. ಅಜ್ಞಾನವು ಒಂದು ಆಯ್ಕೆಯಷ್ಟೆ.
ನಿಮ್ಮನ್ನು ಇತರರಿಗೆ ಹೋಲಿಸಿಕೊಳ್ಳುತ್ತಾ ನಿಮ್ಮ ಬದುಕನ್ನು ವ್ಯರ್ಥ ಮಾಡಬೇಡಿ. ನೀವು ನಿನ್ನೆಗಿಂತ ಸ್ವಲ್ಪವಾದರೂ ಹೆಚ್ಚು ಉತ್ತಮರಾಗಿದ್ದೀರಾ ಎಂದು ನೋಡಿ ಅಷ್ಟೆ.
ನೀವು ಮಾಡುವ ವಿಷಯಗಳು ನೀವು ಯಾರು ಎಂಬುದನ್ನು ನಿರ್ಧರಿಸಬಾರದು. ನೀವು ಯಾರು ಎಂಬುದು ನೀವೇನನ್ನು ಮಾಡುತ್ತೀರಿ ಎಂಬುದನ್ನು ನಿರ್ಧರಿಸಬೇಕು.