Main Centers
International Centers
India
USA
Wisdom
FILTERS:
SORT BY:
ನೀವು ನಶ್ವರರು ಎಂಬ ಅರಿವು ನಿಮ್ಮಲ್ಲಿ ನಿರಂತರವಾಗಿದ್ದರೆ ಮಾತ್ರ ನೀವು ನಿಜವಾಗಿಯೂ ಪ್ರಜ್ಞಾಪೂರ್ವಕರಾಗಿದ್ದು ಜೀವನದ ಪ್ರತಿ ಕ್ಷಣವನ್ನೂ ಆನಂದಿಸಬಲ್ಲಿರಿ.
ನಾವು ಭೂಮಿತಾಯಿಯ ಮಡಿಲಿನಲ್ಲಿ ಸಲಹಲ್ಪಡುತ್ತಿದ್ದೇವೆ. ನಾವು ಸಹಜವಾಗಿಯೇ ಅವಳತ್ತ ಆದರಪೂರ್ವಕರಾಗಿರಬೇಕು.
ನಿಮ್ಮ ಮನಸ್ಸು ಒಂದು ಬೆಂಕಿಯ ಚೆಂಡಿದ್ದಂತೆ. ಅದನ್ನು ನೀವು ಸರಿಯಾಗಿ ಬಳಸಿಕೊಂಡರೆ, ಅದು ಸೂರ್ಯನಂತಾಗಬಲ್ಲದು.
ನಿಮ್ಮನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳಲು ನಿಮಗೆ ಸಾಧ್ಯವಾದಾಗ, ನಿಮ್ಮ ವಿಧಿಯನ್ನೂ ನಿಮಗೆ ಬೇಕಾದಂತೆ ನೀವು ರೂಪಿಸಿಕೊಳ್ಳಬಹುದು.
ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಡಿ. ನಿಮ್ಮ ವರ್ತಮಾನವನ್ನು ಚೆನ್ನಾಗಿ ನಿರ್ವಹಿಸಿ. ಭವಿಷ್ಯವು ತಾನಾಗೇ ಅರಳುತ್ತದೆ.
ನೀವು ಏನನ್ನು ಮಾಡುತ್ತೀರಿ ಎಂಬುದು ನನಗೆ ಮುಖ್ಯವಲ್ಲ. ಅದನ್ನು ನೀವು ಹೇಗೆ ಮಾಡುತ್ತೀರಿ ಎಂಬುದೇ ಜೀವನದ ಸಾರಸತ್ತ್ವ.
ನೀವು ಏನನ್ನೇ ಮಾಡಿದರೂ, ಇದನ್ನು ಪರಿಶೀಲಿಸಿಕೊಳ್ಳಿ – ನಿಮ್ಮ ಕಾರ್ಯವು ಕೇವಲ ನಿಮ್ಮ ಕುರಿತಾದುದೋ ಅಥವಾ ಅದು ಎಲ್ಲರ ಒಳಿತಿನ ಸಲುವಾಗಿಯೋ. ಒಳ್ಳೆಯ ಮತ್ತು ಕೆಟ್ಟ ಕರ್ಮದ ಕುರಿತಾದ ಎಲ್ಲ ಗೊಂದಲವನ್ನು ಇದು ನಿವಾರಿಸುತ್ತದೆ.
ಅಗತ್ಯವಾದ ಜೀವಶಕ್ತಿಯಿಲ್ಲದೆಯೇ ಅರಿವಿನಿಂದ ಇರುವುದು ಬಹಳ ಕಷ್ಟ. ಯೋಗ ಸಾಧನೆಯಲ್ಲಿ ತೊಡಗುವುದು ಅದಕ್ಕೇ – ಅದು ಜೀವಶಕ್ತಿಯನ್ನು ತೀವ್ರಗೊಳಿಸುತ್ತದೆ.
ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ಸನ್ನಿವೇಶಗಳು ನಿರ್ಧರಿಸದಿದ್ದರೆ, ಬದಲಿಗೆ ಸನ್ನಿವೇಶಗಳು ಹೇಗಿರಬೇಕೆಂದು ನೀವು ನಿರ್ಧರಿಸಿದರೆ, ಅದುವೇ ಯಶಸ್ಸು.
ನಿಮಗೆ ಬೇಕೆಂದರೆ ಈ ಕ್ಷಣವೇ ನೀವು ಸಂತೋಷಭರಿತರಾಗಬಹುದು. ನೀವು ಆ ಆಯ್ಕೆಯನ್ನು ಮಾಡಬೇಕಷ್ಟೆ.
ನಿಮಗೆ ಎಚ್ಚರದ ಸ್ಥಿತಿಯಿಂದ ನಿದ್ರೆಗೆ ಪ್ರಜ್ಞಾಪೂರ್ವಕವಾಗಿ ಸಾಗಲು ಸಾಧ್ಯವಾದರೆ, ಜೀವನದಿಂದ ಮರಣಕ್ಕೂ ನೀವು ಪ್ರಜ್ಞಾಪೂರ್ವಕವಾಗಿ ಸಾಗಲು ಸಮರ್ಥರಾಗುತ್ತೀರಿ.
ಮನುಷ್ಯ ಒಂದು ಬೀಜವಿದ್ದಂತೆ. ಒಂದೋ ನೀವು ಈಗಿರುವಂತೆಯೇ ಇದ್ದುಬಿಡಬಹುದು, ಅಥವಾ ಹೂವು-ಹಣ್ಣುಗಳಿಂದ ಕೂಡಿದ ಅದ್ಭುತ ಮರವಾಗಿ ನಿಮ್ಮನ್ನು ಬೆಳೆಸಿಕೊಳ್ಳಬಹುದು.