FILTERS:
SORT BY:
ನೀವು ಮಗುವಾಗಿದ್ದಾಗ, ನಿಮಗೆ ದುಃಖವುಂಟು ಮಾಡಲು ಬೇರೆಯವರು ಬಹಳ ಕಷ್ಟ ಪಡಬೇಕಾಗಿತ್ತು. ಇಂದು, ನಿಮಗೆ ಸಂತೋಷವುಂಟು ಮಾಡಲು ಬೇರೆಯವರು ಬಹಳ ಕಷ್ಟ ಪಡಬೇಕಾಗಿ ಬಂದಿದೆ. ಮಾನವ ಅನುಭವದ ಮೂಲವು ನಿಮ್ಮೊಳಗೇ ಇದೆ ಎಂದು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ.
ಹೂವಿಗೆ ಕಂಪು ಹೇಗೆಯೋ, ಮನುಷ್ಯರಿಗೆ ಪ್ರೀತಿಯೂ ಹಾಗೇ.
ನೀವು ಕೈಗೊಳ್ಳುವ ಎಲ್ಲದರಲ್ಲೂ ನಿಮಗೆ ಯಶಸ್ಸು ಮತ್ತು ಸಂತೋಷ ಬೇಕಿದ್ದರೆ, ನಿಮ್ಮಲ್ಲಿರಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ಗ್ರಹಿಕೆಯಲ್ಲಿನ ಸ್ಪಷ್ಟತೆ.
ಧ್ಯಾನ ಎಂದರೆ ಏನನ್ನೋ ಹೊಂದುವುದು ಅಥವಾ ಸಾಧಿಸುವುದಲ್ಲ – ಅದು ಮನೆಗೆ ಮರಳುವ ಪ್ರಕ್ರಿಯೆ. ಅದು ಎಲ್ಲಿಗೋ ಹೋಗುವ ಬಗ್ಗೆಯಲ್ಲ, ಬದಲಿಗೆ ನಿಮ್ಮೆಡೆಗೇ ನಿಮ್ಮ ಪುನರಾಗಮನ.
ಹೋಳಿಯು ಬರುವುದು ಎಲ್ಲವೂ ಅರಳಿ ವಸಂತವು ಉತ್ತುಂಗದಲ್ಲಿರುವಾಗ. ಇದು ಬಣ್ಣ, ಪ್ರೀತಿ, ಮತ್ತು ಲವಲವಿಕೆಯ ನೃತ್ಯದಲ್ಲಿ ನಿಮ್ಮ ‘ಜೀವಂತಿಕೆ’ಯನ್ನು ಸಂಭ್ರಮಾಚರಿಸುವ ಸಮಯ.
You are only given the raw material for your Life. What you make out of it is up to you.
ನಿಮ್ಮ ಬದುಕು ಹೇಗೇ ನಡೆಯುತ್ತಿರಲಿ, ನೀವು ದುಃಖಪಡಲು ಯಾವುದೇ ಕಾರಣವಿಲ್ಲ. ನೀವು ಬರಿಗೈಯಲ್ಲಿ ಬಂದಿರಿ, ಆದ್ದರಿಂದ ನೀವು ಯಾವಾಗಲೂ ಲಾಭದಲ್ಲೇ ಇದ್ದೀರಿ.
ನಿಮ್ಮ ಹೃದಯದಲ್ಲಿ ನಿಮ್ಮ ಮಕ್ಕಳಿಗಾಗಿ ನಿಜವಾಗಿಯೂ ಪ್ರೀತಿ ಇದ್ದರೆ, ನೀವು ಅವರಿಗಾಗಿ ಮಾಡಬಹುದಾದ ಅತ್ಯುತ್ತಮವಾದ ಸಂಗತಿಯೆಂದರೆ ನಿಮ್ಮ ರೂಪಾಂತರಣೆಯತ್ತ ಕಾರ್ಯಗೈಯುವುದು, ಅವರಿಗೆ ಏನೋ ಬೋಧನೆ ನೀಡುವುದಲ್ಲ.
ಕಾಲಭೈರವನು ಕೇವಲ ಮೃತ್ಯುವಿನ ದೇವತೆಯಲ್ಲ, ಅವನು ಕಾಲದ ದೇವತೆ. ನಿಮ್ಮ ಜೀವನದ ಗುಣಮಟ್ಟವು ಮೂಲತಃ ನೀವು ನಿಮ್ಮ ಸಮಯವನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿದೆ.
ನೀವು ನಿಮ್ಮೊಳಗೆ ಮೌನವಾದರೆ, ಆಗ ನೀವು ಜೀವನವನ್ನು ಕಲ್ಪಿಸಲು ಅಸಾಧ್ಯವಾದ ರೀತಿಯಲ್ಲಿ ಗ್ರಹಿಸುವಿರಿ, ಅದರ ಪರಮ ಅಗಾಧತೆಯನ್ನು ಅನುಭವಿಸುವಿರಿ.
ನಿಮ್ಮ ಹೃದಯದಲ್ಲಿ ಪ್ರೀತಿಯಿದ್ದರೆ, ದಯಾಪರತೆಯ ಅಗತ್ಯವಿಲ್ಲ. ಪ್ರೀತಿಯೇ ನಿಮ್ಮನ್ನು ಜೀವನದಲ್ಲಿ ಕೈಹಿಡಿದು ನಡೆಸುತ್ತದೆ.
ಹತ್ತುವುದು ಪ್ರಯಾಸ, ಬೀಳುವುದು ಅನಾಯಾಸ. ನೀವು ಸೊಗಸಾದ ಜಾಗಗಳಲ್ಲಿ ಬೀಳುವುದನ್ನು ಕಲಿಯಬೇಕಷ್ಟೆ – ಮತ್ತು ಅತ್ಯಂತ ಸೊಗಸಾದ ಜಾಗ ನಿಮ್ಮೊಳಗೇ ಇದೆ.