Main Centers
International Centers
India
USA
FILTERS:
SORT BY:
ಜೀವನವು ಒಂದು ವರವೋ ಶಾಪವೋ ಎಂಬುದು ನಿಮ್ಮ ಮನಸ್ಸು ನಿಮ್ಮ ಸೂಚನೆಯಂತೆ ನಡೆದುಕೊಳ್ಳುತ್ತಿದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ.
ಭವಿಷ್ಯಕ್ಕಾಗಿ ಪ್ಲಾನ್ ಮಾಡುವುದು, ಮತ್ತು ಇನ್ನೂ ಬಂದಿಲ್ಲದ ಭವಿಷ್ಯವನ್ನು ಈಗಲೇ ನರಳುವುದು – ಇವೆರಡೂ ಬೇರೆ ಬೇರೆ ವಿಷಯಗಳು.
ಜನರು ಯಾವಾಗಲೂ ಜಗತ್ತಿನ ಅತ್ಯದ್ಭುತ ವ್ಯಕ್ತಿಯನ್ನು ಭೇಟಿಯಾಗಲು ಬಯಸುತ್ತಾರೆ. ನೀವೇ ಆ ಅತ್ಯದ್ಭುತ ವ್ಯಕ್ತಿಯೇಕೆ ಆಗಬಾರದು.
ನೀವು ಪ್ರಜ್ಞಾಪೂರ್ವಕರಾಗಿ ಸ್ಪಂದಿಸಿದರೆ, ನಿಮಗೆ ಬೇಕಿರುವುದು ನಡೆಯುತ್ತದೆ. ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದರೆ, ಬೇರೆಯವರಿಗೆ ಬೇಕಿರುವುದು ನಡೆಯುತ್ತದೆ.
ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಮ್ಮನ್ನು ಗುಲಾಮರಾಗಿಸುತ್ತದೆ. ಸಂತೋಷವು ಅದ್ಭುತವಾದುದು – ಎಲ್ಲಕ್ಕಿಂತ ಮಿಗಿಲಾಗಿ ಅದು ನಮ್ಮನ್ನು ಮುಕ್ತಗೊಳಿಸುತ್ತದೆ.
ಕೆಲವೊಮ್ಮೆ ಪ್ರಪಂಚ ನಿಮಗೆ ವಿರುದ್ಧವಾಗಬಹುದು. ಆದರೆ ನೀವೇ ನಿಮಗೆ ವಿರುದ್ಧವಾಗಿದ್ದರೆ, ಆಗ ಪರಿಹಾರವೇ ಇಲ್ಲ.
ಸಂತೋಷಭರಿತರಾಗಿರುವವರಿಗೆ ಜೀವನವು ಚುಟುಕಾದದ್ದು. ತೊಳಲಾಡುತ್ತಿರುವವರಿಗೆ ಅದು ಬಹಳ ದೀರ್ಘವಾದುದು.
ನಂಬಿಕೆ ಎನ್ನುವುದು ಮಾನಸಿಕ ಸಾರಾಯಿಯಷ್ಟೆ. ಸಾರಾಯಿ ದೇಹದ ಮೇಲೆ ಕಾರ್ಯಗೈದರೆ, ನಂಬಿಕೆ ಮನಸ್ಸಿನ ಮೇಲೆ ಕಾರ್ಯಗೈಯುತ್ತದೆ.
ಮಕ್ಕಳು ಗಮನ ನೀಡುತ್ತಾ, ತೊಡಗುತ್ತಾ ಬೆಳೆಯುತ್ತಾರೆಯೇ ಹೊರತು, ಬೋಧನೆ ಮತ್ತು ಸಿದ್ಧಾಂತಗಳನ್ನು ಕೇಳುವುದರಿಂದಲ್ಲ. ನಿಮ್ಮ ಮಗುವು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ಬಯಸುತ್ತೀರೋ ನೀವು ಅಂತಹ ವ್ಯಕ್ತಿಯಾಗಬೇಕು.
ಚೆನ್ನಾಗಿ ಬಾಳುವುದು ಎಂದರೆ ಐಷಾರಾಮಿ ಬದುಕು ಎಂದರ್ಥವಲ್ಲ. ಚೆನ್ನಾಗಿ ಬಾಳುವುದು ಎಂದರೆ ನೀವೊಂದು ಕಲ್ಲಿನ ಮೇಲೆ ಕೂತರೂ ಸಂತೋಷದಿಂದ ಕೂರುತ್ತೀರಿ.
ನಿಮ್ಮ ಮನಸ್ಸನ್ನು ನೀವು ನಡೆಸಬೇಕು. ಮನಸ್ಸು ನಿಮ್ಮನ್ನು ನಡೆಸುವುದಲ್ಲ.
ನಿಮ್ಮ ಒಂದು ಕಣ್ಣು ಗುರಿಯ ಮೇಲಿದ್ದರೆ, ದಾರಿಯನ್ನು ನೋಡಲು ಉಳಿಯುವುದು ಒಂದೇ ಕಣ್ಣು. ಜೀವನದ ಮೂಲಕ ಸಾಗಲು ಅದು ಸಕ್ಷಮವಾದ ವಿಧಾನವಲ್ಲ.