Main Centers
International Centers
India
USA
FILTERS:
SORT BY:
ನಿಮ್ಮೊಳಗೆ ನೀವು ಹೇಗಿದ್ದೀರಿ ಎಂಬುದು ನಿಮ್ಮಿಂದಲೇ ನಿರ್ಧರಿತವಾಗಬೇಕು. ‘ಆಧ್ಯಾತ್ಮಿಕ’ರಾಗಿರುವುದರ ಅರ್ಥ ಅದೇ.
ನಿಮ್ಮ ಅಂತರಂಗದ ಅನುಭವ ಚೆನ್ನಾಗಿದ್ದರೆ ಅದು ಹೊರಗಿನ ಸನ್ನಿವೇಶವನ್ನು ಸುಂದರವಾಗಿಸುತ್ತದೆ. ಆದರೆ ನಿಮ್ಮ ಅಂತರಂಗವು ಚೆನ್ನಾಗಿಲ್ಲದಿದ್ದರೆ, ನೀವು ವಸಂತವನ್ನೂ ನರಳುತ್ತೀರಿ.
ನೀವು ಜಗತ್ತನ್ನು ನಿಭಾಯಿಸಬೇಕಾಗಿಲ್ಲ. ನಿಮ್ಮನ್ನು ನೀವು ನಿಭಾಯಿಸಲು ಕಲಿತರೆ ಸಾಕು, ಎಲ್ಲವೂ ನಿಭಾಯಿಸಲ್ಪಡುತ್ತದೆ.
ಕೆಲವೇ ಕೆಲವರಷ್ಟೆ ನಿಜವಾಗಿಯೂ ಜೀವಿಸುತ್ತಿದ್ದಾರೆ. ಉಳಿದವರು ಜೀವಿಕೆ ನೋಡಿಕೊಳ್ಳುತ್ತಿದ್ದಾರೆ ಅಷ್ಟೆ.
ಪ್ರೀತಿ ಎಂಬುದು ಸ್ವ-ಪತನ. ಪ್ರೀತಿಯು ಉಂಟಾಗುವುದು ನೀವು ಅದರಲ್ಲಿ ಬಿದ್ದಾಗ, ಲೆಕ್ಕಾಚಾರ ಅಥವಾ ಅನುಕೂಲ ನೋಡಿಕೊಂಡಾಗಲ್ಲ.
ಜೀವನವು ಎಲ್ಲವನ್ನೂ ತನ್ನಲ್ಲಿ ಒಳಗೂಡಿಸಿಕೊಂಡಿದೆ. ಪ್ರತ್ಯೇಕತೆಯನ್ನು ಭಾವಿಸುವುದು ನಿಮ್ಮ ಮನಸ್ಸಷ್ಟೆ.
ಪ್ರಯತ್ನ ಬೇಕಿರುವುದು ಜೀವಂತವಾಗಿರಲು. ಸಾವು ಕರಾರುವಾಕ್ಕಾಗಿ ನಡೆಯುತ್ತದೆ – ಅದನ್ನು ನೀವು ಅಭ್ಯಾಸ ಮಾಡಬೇಕಾಗಿಲ್ಲ. ಆದರೆ ಜೀವಿಸಲು ಬಹಳ ಅಭ್ಯಾಸ ಅಗತ್ಯ.
ಜೀವನವು ಒಂದು ವರವೋ ಶಾಪವೋ ಎಂಬುದು ನಿಮ್ಮ ಮನಸ್ಸು ನಿಮ್ಮ ಸೂಚನೆಯಂತೆ ನಡೆದುಕೊಳ್ಳುತ್ತಿದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ.
ಭೂಮಿಯನ್ನು ನಾಶ ಮಾಡುತ್ತಿರುವುದು ಯಾರೋ ದುಷ್ಟ ಜನರಲ್ಲ. ಅದನ್ನು ಮಾಡುತ್ತಿರುವುದು ಸಂತೋಷದ ಹುಡುಕಾಟದಲ್ಲಿರುವ ನಾವೇ.
ನಾವು ಕೇವಲ ಈ ಭೂಮಿಯ ಮೇಲೆ ಜೀವಿಸುತ್ತಿಲ್ಲ – ನಾವು ಈ ಭೂಮಿಯೇ ಆಗಿದ್ದೇವೆ. ನಿಮಗೆ ಇದು ಇಂದು ಅರ್ಥವಾಗದೇ ಇದ್ದರೆ, ನಿಮ್ಮನ್ನು ಹೂತಾಗ ನಿಮಗಿದು ಅರ್ಥವಾಗುತ್ತದೆ.
ಎಲ್ಲ ಸಮಸ್ಯೆಗಳ ಮೂಲ ನಿಮ್ಮೊಳಗೇ ಇದೆ. ಪರಿಹಾರಗಳೂ ಕೂಡ ನಿಮ್ಮೊಳಗೇ ಇದೆ.
ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಮ್ಮನ್ನು ಗುಲಾಮರಾಗಿಸುತ್ತದೆ. ಸಂತೋಷವು ಅದ್ಭುತವಾದುದು – ಎಲ್ಲಕ್ಕಿಂತ ಮಿಗಿಲಾಗಿ ಅದು ನಮ್ಮನ್ನು ಮುಕ್ತಗೊಳಿಸುತ್ತದೆ.