Main Centers
International Centers
India
USA
FILTERS:
SORT BY:
ನಿಮ್ಮ ಮನಸ್ಸಿನಲ್ಲಿ ಏನೇ ತೊಳಲಾಟ ಉಂಟಾದರೂ ನಿಮ್ಮ ಬುದ್ಧಿಶಕ್ತಿ ನಿಮಗೇ ವಿರುದ್ಧವಾಗಿಬಿಟ್ಟಿದೆ ಎಂದರ್ಥ.
ಪ್ರೀತಿ ಎಂಬುದು ನಿಮ್ಮೊಳಗಿನ ಒಂದು ಮಧುರವಾದ ಭಾವನೆ. ಆ ಇನ್ನೊಬ್ಬ ವ್ಯಕ್ತಿ ಹೊರಟು ಹೋದರೂ ನೀವು ನಿಮ್ಮೊಳಗೆ ಪ್ರೀತಿಯನ್ನು ಅನುಭವಿಸಬಲ್ಲಿರಿ.
ನಿನ್ನೆ ನಡೆದದ್ದನ್ನು ನೀವು ನರಳುತ್ತಿದ್ದರೆ, ನೀವು ನರಳುತ್ತಿರುವುದು ನಿಮ್ಮ ನೆನಪನ್ನು, ನಿಮ್ಮ ಜೀವನವನ್ನಲ್ಲ.
ಒಳಿತು ಮತ್ತು ತೊಳಲಾಟಗಳೆರಡೂ ಉಂಟಾಗುವುದು ನಿಮ್ಮೊಳಗಿನಿಂದಲೇ. ಆಯ್ಕೆ ನಿಮ್ಮದೇ.
ನೀವು ನಶ್ವರರು ಎಂದು ನೀವು ಮನಗಂಡರಷ್ಟೇ ನೀವು ಪ್ರಜ್ಞಾಪೂರ್ವಕರಾಗುತ್ತೀರಿ. ಇಲ್ಲವಾದರೆ ನೀವು ಬಾಳನ್ನು ಪ್ರಜ್ಞಾಹೀನವಾಗಿ ಬಾಳುತ್ತೀರಿ.
ಸಂತೋಷವು ನೀವು ಪಡೆಯುವಂತದ್ದಲ್ಲ, ಬದಲಿಗೆ ನೀವು ನಿಮ್ಮ ಸ್ವರೂಪಕ್ಕೆ ಮರಳುವುದಾಗಿದೆ.
ಭಾರತದ ರಾಷ್ಟ್ರೀಯತೆ ಎಲ್ಲ ಮತಧರ್ಮಗಳಿಗಿಂತಲೂ ಪ್ರಾಚೀನವಾದದ್ದು. ನಾವು ಹಿಂದೆಯೂ ಒಂದು ರಾಷ್ಟ್ರವಾಗಿದ್ದೆವು, ಮತ್ತು ಈಗಲೂ ಒಂದು ರಾಷ್ಟ್ರವಾಗಿದ್ದೇವೆ. ಪರಮಮುಕ್ತಿಯ ಹಂಬಲವು ನಮ್ಮನ್ನು ಸದಾ ಒಂದಾಗಿರಿಸಿದೆ.
ಯೌವನ ಎಂಬುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಜೀವಂತಿಕೆ ಮತ್ತು ತೊಡಗುವಿಕೆಗೆ ಸಂಬಂಧಿಸಿದ್ದು.
ಜೀವನದ ಬಗ್ಗೆ ನೀವು ಹೆಚ್ಚು ಸಿದ್ಧಾಂತಗಳನ್ನು ಮಾಡಿಕೊಂಡಷ್ಟೂ ನಿಮ್ಮ ಜೀವಂತಿಕೆ ಕಡಿಮೆಯಾಗುತ್ತದೆ.
ನಿಶ್ಚಲತೆ, ಲವಲವಿಕೆ, ಮತ್ತು ಉನ್ಮತ್ತತೆ – ಇವೆಲ್ಲವೂ ಒಟ್ಟಾಗಿ ನಡೆಯುವುದೇ ಜೀವನದ ಪರಮೋಚ್ಛ ಸ್ಥಿತಿ.
ನನಗೆ ಗುಹೆಯಲ್ಲಿ ಕೂರುವ ಅಗತ್ಯವಿಲ್ಲ. ನನ್ನ ಅಧ್ಯಾತ್ಮ ಅಷ್ಟು ದುರ್ಬಲವಲ್ಲ. ನಾನು ಮಾರುಕಟ್ಟೆಯಲ್ಲಿದ್ದರೂ ಹಾಗೇ ಇರಬಲ್ಲೆ.
ನೀವು ಬಹಳ ಅಹಂಕಾರಿಯಾಗಿದ್ದರೆ, ಜೀವನವು ನಿಮ್ಮನ್ನು ರುಬ್ಬುತ್ತದೆ. ಅದಕ್ಕೆ ಬೇರೆ ಯಾವ ಚಿಕಿತ್ಸೆಯೂ ಇಲ್ಲ.