FILTERS:
SORT BY:
ನೀವು ನಿಮ್ಮ ನೆನಪುಗಳಲ್ಲಿ ಜೀವಿಸುತ್ತಿದ್ದಾಗ, ಕಣ್ಣ ಮುಂದಿರುವುದನ್ನೇ ನೀವು ನೋಡಲಾರಿರಿ.
ಮತ್ತೆ ಮತ್ತೆ ಅದೇ ಸಮಸ್ಯೆ ಉಂಟಾಗುತ್ತಿದ್ದರೆ, ಅದರರ್ಥ ಮೂಲ ಸಮಸ್ಯೆ ನೀವೇ.
ಬಹುತೇಕ ಮನುಷ್ಯರು ತಮ್ಮೊಳಗೆ ಅಡಗಿರುವ ಮೇಧಾಶಕ್ತಿಯನ್ನು ಜಾಗೃತಗೊಳಿಸದೆಯೇ ಜೀವನಪೂರ್ತಿ ಕಳೆದು ಸಾವನ್ನಪ್ಪುತ್ತಾರೆ.
ವಿಷುವತ್ ಸಂಕ್ರಾಂತಿಯಂದು ಸೂರ್ಯನ ಶಕ್ತಿಯು ನಮಗೆ ಅತ್ಯಂತ ಚೈತನ್ಯದಾಯಕವಾಗಿರುತ್ತದೆ. ಬದುಕಿನಲ್ಲಿ ಕಾಲೆಳೆಯುತ್ತಾ ಸಾಗಬೇಡಿ – ನವಚೇತನ ಮತ್ತು ತೀವ್ರತೆಯೊಂದಿಗೆ ಅದರಲ್ಲಿ ಧುಮುಕಿ.
ಈ ದೇಹವು ಭೂಮಿಯ ಒಂದು ತುಣುಕಷ್ಟೆ. ಭೂಮಿ ಸ್ವಸ್ಥವಾಗಿಲ್ಲದೆ ನಾವು ಒಳ್ಳೆಯ ಜೀವನವನ್ನು ಹೊಂದುವುದು ಸಾಧ್ಯವಿಲ್ಲ.
ಗಾಳಿಮಾತುಗಳಿಂದ ಮನಸ್ಸಿಗೆ ನೋವಾಗುವುದು ಮೂರ್ಖರಿಗಷ್ಟೆ. ಗಾಳಿಮಾತುಗಳನ್ನು ಹರಟುವವರು ತಮಗೆ ತಾವೇ ಅತ್ಯಂತ ಹೆಚ್ಚು ನೋವುಂಟು ಮಾಡಿಕೊಳ್ಳುತ್ತಿದ್ದಾರೆ.
ಪ್ರೀತಿಯು ಮುಕ್ತಗೊಳಿಸುವಂತಹ ಒಂದು ಶಕ್ತಿ. ಮೋಹವು ಬಂಧಿಸುವಂತಹ ಪ್ರಕ್ರಿಯೆ.
ಭೂಮಿಯ ಮೇಲೆ ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಉಳಿಸಲು ಬಯಸುವವರು ಎಂದೂ ಹಾರುವುದಿಲ್ಲ.
ವಿಶ್ವಾಸ ಎಂದರೆ ಬೇರೆಯವರು ನಿಮ್ಮ ನಿರೀಕ್ಷೆಯಂತೆ ನಡೆದುಕೊಳ್ಳಬೇಕು ಎಂದಲ್ಲ. ವಿಶ್ವಾಸ ಎಂದರೆ ನಿಮ್ಮನ್ನು ನೀವು ಪ್ರಜ್ಞಾಪೂರ್ವಕವಾಗಿ ಅಸುರಕ್ಷಿತರಾಗಿಸಿಕೊಳ್ಳುವುದು.
ತಂತ್ರಜ್ಞಾನವು ಮನುಷ್ಯರಿಗಿಂತ ವೇಗವಾಗಿ ಬೆಳೆಯುತ್ತಿದೆ. ನಾವು ತಂತ್ರಜ್ಞಾನಕ್ಕಿಂತ ವೇಗವಾಗಿ ವಿಕಾಸ ಹೊಂದದೇ ಇದ್ದಲ್ಲಿ, ನಾವದನ್ನೆಂದೂ ವಿವೇಚನಾಯುತವಾಗಿ ಬಳಸಲಾರೆವು.
ಯೋಗವು ವ್ಯಾಯಾಮವಲ್ಲ. ಅದು ಅಂತರಂಗದ ಒಂದು ಸ್ಥಿತಿ.
ನೀವು ಅವರಿಂದಲೂ, ಮತ್ತು ಅವರು ನಿಮ್ಮಿಂದಲೂ ಸಂತೋಷವನ್ನು ಹಿಂಡಲು ಪ್ರಯತ್ನಿಸುತ್ತಿದ್ದರೆ, ಅಂತಹ ಸಂಬಂಧವು ಕಾಲಾಂತರದಲ್ಲಿ ಯಾತನಾಮಯವಾಗುತ್ತದೆ.