Main Centers
International Centers
India
USA
Wisdom
FILTERS:
SORT BY:
ಕೃತಜ್ಞತೆ ಎಂಬುದು ಒಂದು ಮಾನಸಿಕ ನಿಲುವಲ್ಲ. ನೀವು ಏನನ್ನು ಪಡೆದಿದ್ದೀರೋ ಅದನ್ನು ನೋಡಿ ನಿಮ್ಮ ಹೃದಯ ತುಂಬಿ ಬಂದಾಗ ನಿಮ್ಮಿಂದ ಸಹಜವಾಗಿ ಹೊರಸೂಸುವುದೇ ಕೃತಜ್ಞತೆ.
ಸ್ಪೆಷಲ್ ಅನಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟೂ ನೀವು ಹೆಚ್ಚು ಘಾಸಿಗೊಳಗಾಗುತ್ತೀರಿ. ಸುಮ್ಮನೆ ಹಾಗೇ ಕರಗಿಹೋಗಿ ತಂಗಾಳಿಯ, ಭೂಮಿಯ ಭಾಗವಾಗಿ; ಎಲ್ಲದರಲ್ಲಿ ವಿಲೀನವಾಗಿ. ಅದುವೇ ಸೃಷ್ಟಿಯ ಸಂಕಲ್ಪ.
ನೀವು ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದರೆ, ನೀವು ಈ ಕ್ಷಣದಲ್ಲಿ ಹೇಗಿದ್ದೀರಿ ಎಂಬುದನ್ನು ಬಾಹ್ಯ ಸನ್ನಿವೇಶಗಳು ನಿರ್ಧರಿಸುತ್ತವೆ. ಪ್ರಜ್ಞಾಪೂರ್ವಕರಾಗಿ ಸ್ಪಂದಿಸಿದರೆ, ನಿಮ್ಮ ಒಳಿತು ನಿಮ್ಮ ಕೈಯಲ್ಲೇ ಇರುತ್ತದೆ.
ಬದುಕು ಬಹಳ ಚುಟುಕಾದದ್ದು. ನಿಮ್ಮ ಬಾಳನ್ನು ಧನ್ಯಗೊಳಿಸಲು ಇರುವ ಒಂದೇ ದಾರಿಯೆಂದರೆ ನಿಮ್ಮ ಹೃದಯಕ್ಕೆ ನಿಜವಾಗಿಯೂ ಕಳಕಳಿಯಿರುವುದರಲ್ಲಿ ತೊಡಗುವುದು.
ನಿಮ್ಮೊಡನೆ ಸ್ಪರ್ಧಿಸುವವರು ವೈರಿಗಳಲ್ಲ. ಅವರು ನಿಮ್ಮದೇ ನ್ಯೂನತೆಗಳನ್ನು ನಿಮಗೆ ಸದಾ ನೆನಪಿಸುತ್ತಾ ಇರುವವರು, ನಿಮ್ಮ ಗುಣಮಟ್ಟವನ್ನು ಖಚಿತಪಡಿಸುವವರು.
ಎಲ್ಲದರ ಬಗ್ಗೆಯೂ ಸೀರಿಯಸ್ ಆಗಿರುವವರಿಗಿಂತ, ಸಂತೋಷಭರಿತ, ಜವಾಬ್ದಾರಿಯುತ, ಮತ್ತು ಸ್ವಲ್ಪ ವಿವೇಚನೆಯಿರುವ ವ್ಯಕ್ತಿಯು ಸವಾಲಿನ ಪರಿಸ್ಥಿತಿಗಳನ್ನು ಎಷ್ಟೋ ಚೆನ್ನಾಗಿ ನಿಭಾಯಿಸಬಲ್ಲರು.
ಇದು ಗ್ರಹಣಶೀಲತೆ, ಅನುಗ್ರಹ, ಜ್ಞಾನೋದಯ, ಮತ್ತು ಪರಮಮುಕ್ತಿಯ ದಿನ. ಅತ್ಯುನ್ನತವಾದುದನ್ನು ನೀವು ಹಂಬಲಿಸುವಂತಾಗಲಿ.
ಯಾರಿಗಾದರೂ ನೋವಾಗುತ್ತಿದ್ದಾಗ ಅದರಿಂದ ನಿಮಗೆ ನೋವಾಗದಿದ್ದರೆ, ಅದರರ್ಥ ನೀವು ನಿಮ್ಮ ಮಾನವೀಯತೆಯನ್ನು ತೊರೆದುಬಿಟ್ಟಿದ್ದೀರಿ.
ಸಂತೋಷಭರಿತ ಮುಖವು ಎಂದಿಗಿದ್ದರೂ ಸುಂದರವಾದ ಮುಖ.
ಜೀವನದೊಂದಿಗೆ ನೀವು ಒಂದಿನಿತು ವಿನೋದಮಯರಾಗಿದ್ದರೆ, ಪ್ರತಿ ಕ್ಷಣವೂ ಒಂದು ಸಂಭ್ರಮಾಚರಣೆಯಾಗುತ್ತದೆ.
ಮನುಷ್ಯರಾಗಿರುವ ನೀವು ನಿಂತ ನೀರಲ್ಲ, ಬದಲಿಗೆ ಒಂದು ‘ಆಗು’ವಿಕೆ, ಒಂದು ನಿರಂತರ ಪ್ರಕ್ರಿಯೆ. ಅಂದರೆ ನಿಮ್ಮೊಳಗೆ ಯಾವುದೂ ಪೂರ್ವನಿಗದಿತವಲ್ಲ. ನೀವು ನಿಮಗೆ ಬೇಕಿದ್ದಂತೆ ಇರಬಹುದು.
ನಿಮ್ಮ ಬಳಿ ಏನಿದೆಯೋ – ನಿಮ್ಮ ಕೌಶಲ, ನಿಮ್ಮ ಪ್ರೀತಿ, ನಿಮ್ಮ ಸಂತೋಷ, ನಿಮ್ಮ ಮೇಧಾವಿತನ, ನಿಮ್ಮ ಕಾರ್ಯಸಾಮರ್ಥ್ಯ – ಅದನ್ನು ಈಗಲೇ ಅಭಿವ್ಯಕ್ತಪಡಿಸಿ. ಅದನ್ನು ಇನ್ನೊಂದು ಜೀವಮಾನಕ್ಕೆ ಉಳಿಸಲು ನೋಡಬೇಡಿ.