Main Centers
International Centers
India
USA
FILTERS:
SORT BY:
ಭೂಮಿಯನ್ನು ನಾಶ ಮಾಡುತ್ತಿರುವುದು ಯಾರೋ ದುಷ್ಟ ಜನರಲ್ಲ. ಅದನ್ನು ಮಾಡುತ್ತಿರುವುದು ಸಂತೋಷದ ಹುಡುಕಾಟದಲ್ಲಿರುವ ನಾವೇ.
ನಾವು ಕೇವಲ ಈ ಭೂಮಿಯ ಮೇಲೆ ಜೀವಿಸುತ್ತಿಲ್ಲ – ನಾವು ಈ ಭೂಮಿಯೇ ಆಗಿದ್ದೇವೆ. ನಿಮಗೆ ಇದು ಇಂದು ಅರ್ಥವಾಗದೇ ಇದ್ದರೆ, ನಿಮ್ಮನ್ನು ಹೂತಾಗ ನಿಮಗಿದು ಅರ್ಥವಾಗುತ್ತದೆ.
ಎಲ್ಲ ಸಮಸ್ಯೆಗಳ ಮೂಲ ನಿಮ್ಮೊಳಗೇ ಇದೆ. ಪರಿಹಾರಗಳೂ ಕೂಡ ನಿಮ್ಮೊಳಗೇ ಇದೆ.
ಇಂದ್ರಿಯಸುಖವು ಸುಂದರವಾದುದೇ, ಆದರೆ ಅದು ನಮ್ಮನ್ನು ಗುಲಾಮರಾಗಿಸುತ್ತದೆ. ಸಂತೋಷವು ಅದ್ಭುತವಾದುದು – ಎಲ್ಲಕ್ಕಿಂತ ಮಿಗಿಲಾಗಿ ಅದು ನಮ್ಮನ್ನು ಮುಕ್ತಗೊಳಿಸುತ್ತದೆ.
ನಿಮ್ಮ ಅಂತರಂಗದ ಅನುಭವ ಚೆನ್ನಾಗಿದ್ದರೆ ಅದು ಹೊರಗಿನ ಸನ್ನಿವೇಶವನ್ನು ಸುಂದರವಾಗಿಸುತ್ತದೆ. ಆದರೆ ನಿಮ್ಮ ಅಂತರಂಗವು ಚೆನ್ನಾಗಿಲ್ಲದಿದ್ದರೆ, ನೀವು ವಸಂತವನ್ನೂ ನರಳುತ್ತೀರಿ.
ನೀವು ಜಗತ್ತನ್ನು ನಿಭಾಯಿಸಬೇಕಾಗಿಲ್ಲ. ನಿಮ್ಮನ್ನು ನೀವು ನಿಭಾಯಿಸಲು ಕಲಿತರೆ ಸಾಕು, ಎಲ್ಲವೂ ನಿಭಾಯಿಸಲ್ಪಡುತ್ತದೆ.
ಕೆಲವೇ ಕೆಲವರಷ್ಟೆ ನಿಜವಾಗಿಯೂ ಜೀವಿಸುತ್ತಿದ್ದಾರೆ. ಉಳಿದವರು ಜೀವಿಕೆ ನೋಡಿಕೊಳ್ಳುತ್ತಿದ್ದಾರೆ ಅಷ್ಟೆ.
ಮಕ್ಕಳು ಗಮನ ನೀಡುತ್ತಾ, ತೊಡಗುತ್ತಾ ಬೆಳೆಯುತ್ತಾರೆಯೇ ಹೊರತು, ಬೋಧನೆ ಮತ್ತು ಸಿದ್ಧಾಂತಗಳನ್ನು ಕೇಳುವುದರಿಂದಲ್ಲ. ನಿಮ್ಮ ಮಗುವು ಯಾವ ರೀತಿಯ ವ್ಯಕ್ತಿಯಾಗಬೇಕೆಂದು ಬಯಸುತ್ತೀರೋ ನೀವು ಅಂತಹ ವ್ಯಕ್ತಿಯಾಗಬೇಕು.
ಜೀವನವು ಎಲ್ಲವನ್ನೂ ತನ್ನಲ್ಲಿ ಒಳಗೂಡಿಸಿಕೊಂಡಿದೆ. ಪ್ರತ್ಯೇಕತೆಯನ್ನು ಭಾವಿಸುವುದು ನಿಮ್ಮ ಮನಸ್ಸಷ್ಟೆ.
ಪ್ರಯತ್ನ ಬೇಕಿರುವುದು ಜೀವಂತವಾಗಿರಲು. ಸಾವು ಕರಾರುವಾಕ್ಕಾಗಿ ನಡೆಯುತ್ತದೆ – ಅದನ್ನು ನೀವು ಅಭ್ಯಾಸ ಮಾಡಬೇಕಾಗಿಲ್ಲ. ಆದರೆ ಜೀವಿಸಲು ಬಹಳ ಅಭ್ಯಾಸ ಅಗತ್ಯ.
ಜೀವನವು ಒಂದು ವರವೋ ಶಾಪವೋ ಎಂಬುದು ನಿಮ್ಮ ಮನಸ್ಸು ನಿಮ್ಮ ಸೂಚನೆಯಂತೆ ನಡೆದುಕೊಳ್ಳುತ್ತಿದೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿದೆ.
ಭವಿಷ್ಯಕ್ಕಾಗಿ ಪ್ಲಾನ್ ಮಾಡುವುದು, ಮತ್ತು ಇನ್ನೂ ಬಂದಿಲ್ಲದ ಭವಿಷ್ಯವನ್ನು ಈಗಲೇ ನರಳುವುದು – ಇವೆರಡೂ ಬೇರೆ ಬೇರೆ ವಿಷಯಗಳು.