Main Centers
International Centers
India
USA
Wisdom
FILTERS:
SORT BY:
ಜೀವನವನ್ನು ಅರಿಯಲು ನಿಮಗಿರುವ ಏಕೈಕ ದ್ವಾರವೆಂದರೆ ನೀವೇ. ಅದನ್ನು ತೆರೆದಿಡಿ.
ಮನುಷ್ಯ ಒಂದು ಸಂಪನ್ಮೂಲವಲ್ಲ. ಮನುಷ್ಯ ಒಂದು ಅಗಾಧ ಸಾಧ್ಯತೆ. ಸರಿಯಾದ ಪೋಷಣೆ ಸಿಕ್ಕರೆ, ಅವರೊಂದು ಅಸಾಮಾನ್ಯ ಅದ್ಭುತವಾಗಿ ಅರಳುತ್ತಾರೆ.
ಎಲ್ಲವನ್ನೂ ಅದು ಇರುವಂತೆಯೇ ನೋಡಿದಾಗ, ಅದು ನಿಮಗೆ ಜೀವನದ ಮೂಲಕ ಅನಾಯಾಸವಾಗಿ ಸಾಗಲು ಅಗತ್ಯವಾದ ಶಕ್ತಿ-ಸಾಮರ್ಥ್ಯಗಳನ್ನು ನೀಡುತ್ತದೆ.
ನಿಮ್ಮ ಮಾನವೀಯತೆಯು ಉಕ್ಕಿ ಹರಿಯುತ್ತಿದ್ದರೆ, ನೀವು ಸುತ್ತಲಿನ ಜೀವಗಳಿಗಾಗಿ ಸಹಜವಾಗಿಯೇ ಮಿಡಿಯುತ್ತೀರಿ. ಇದು ನೈತಿಕತೆಯಲ್ಲ. ಇದು ಮನುಷ್ಯ ಹೃದಯದ ಸ್ವಭಾವವೇ ಆಗಿದೆ.
ನೀವು ಗತಕಾಲ ಅಥವಾ ಭವಿಷ್ಯವನ್ನು ನರಳುವುದು ಸಾಧ್ಯವಿಲ್ಲ, ಏಕೆಂದರೆ ಅವು ಅಸ್ತಿತ್ವದಲ್ಲೇ ಇಲ್ಲ. ನೀವು ನರಳುತ್ತಿರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು.
ಯಾವುದನ್ನೂ ಮೇಲಾಗಿಯೂ ನೋಡಬೇಕಿಲ್ಲ, ಕೀಳಾಗಿಯೂ ನೋಡಬೇಕಿಲ್ಲ. ಇದು ಮುಖ್ಯ. ಎಲ್ಲವನ್ನೂ ಅದು ಇರುವಂತೆಯೇ ನೋಡುವುದೇ ನಿಜವಾದ ದರ್ಶನ.
ವ್ಯಕ್ತಿಗತ ಗಡಿಗಳು ಬೇಕಿರುವುದು ನಿಮ್ಮ ದೇಹಕ್ಕೆ ಮಾತ್ರ. ನಿಮ್ಮ ಕುರಿತಾದ ಬೇರೆಲ್ಲಾ ವಿಷಯಗಳೂ ‘ವಿಶ್ವಗತ’ವಾಗಿರಬಹುದು.
ಧ್ಯಾನ ಎಂಬುದು ಏಕಾಗ್ರತೆಯೂ ಅಲ್ಲ, ವಿಶ್ರಾಂತಿಯೂ ಅಲ್ಲ. ಅದೊಂದು ರೀತಿಯಲ್ಲಿ ನೀವು ನಿಮ್ಮ ಮನೆಗೆ ಹಿಂತಿರುಗುವ ಪ್ರಕ್ರಿಯೆ.
ನಿಮ್ಮ ಜೀವ ಇರುವುದು ನಿಮ್ಮ ದೇಹ, ಮನಸ್ಸು, ಅಥವಾ ಭಾವನೆಗಳ ಸೇವೆ ಮಾಡಲು ಅಲ್ಲ. ಬದಲಿಗೆ ದೇಹ, ಮನಸ್ಸು, ಮತ್ತು ಭಾವನೆಗಳಿರುವುದು ಜೀವದ ಸೇವೆ ಮಾಡಲು.
ಜೀವನವು ಸುಂದರವಾಗಿರುವುದು ಅದು ಸಮತೋಲನವನ್ನು ಹೊಂದಿದ್ದಾಗ ಮಾತ್ರ.