Main Centers
International Centers
India
USA
Wisdom
FILTERS:
SORT BY:
ಪ್ರಕೃತಿಯು ನಿಮಗೆ ನೀವೊಬ್ಬ ಪ್ರತ್ಯೇಕ ವ್ಯಕ್ತಿಯೆಂಬ ಭಾವನೆಯನ್ನು ನೀಡಿದೆ, ಆದರೆ ಜೀವನವು ನಡೆಯುವುದು ಪ್ರತ್ಯೇಕವಾಗಲ್ಲ. ಜೀವನವು ಒಂದು ಅಖಂಡ ವಿದ್ಯಮಾನ.
ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ.
ಅತೀಂದ್ರಿಯ ಅನುಭವಗಳಿಗಾಗಿ ಹಂಬಲಿಸಬೇಡಿ. ರೂಪಾಂತರಣೆಗಾಗಿ ಹಂಬಲಿಸಿ.
ನೀವು ಸಮಯವನ್ನು ನೋಡಿಕೊಂಡಾಗೆಲ್ಲ, ಬದುಕು ಸರಿದು ಹೋಗುತ್ತಿದೆ ಎಂಬುದನ್ನು ನೆನಪಿಸಿಕೊಳ್ಳಿ. ಯಾವುದು ನಿಜವಾಗಿಯೂ ಮುಖ್ಯವೋ ಅದರತ್ತ ಗಮನ ಹರಿಸುವ ಸಮಯ ಬಂದಿದೆ.
ದೇಹ-ಮನಸ್ಸುಗಳ ಮಿತಿಗಳನ್ನು ಮೀರಿದ ನಿಮ್ಮ ಸ್ವರೂಪವನ್ನು ನೀವು ನಿಜವಾಗಿಯೂ ಅನುಭವಿಸಿದರೆ, ಆಗ ಭಯ ಎಂಬುದಿರದು.
ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ್ವ.
ನಿಮ್ಮ ದೇಹ-ಮನಸ್ಸುಗಳು ಆಹಾರ ಮತ್ತು ಯೋಚನೆಗಳ ಶೇಖರಣೆಗಳಷ್ಟೆ. ಅವುಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನೀವು ನಿಲ್ಲಿಸಿದರೆ, ಅಂತರಂಗದಲ್ಲಿ ನಿಮಗೆ ನಿಶ್ಚಲತೆಯ ಅರಿವಾಗುವುದು. ಧ್ಯಾನಸ್ಥರಾಗಲು ಬೇಕಿರುವುದು ಅದಷ್ಟೆ.
ನೀವು ಜಗತ್ತನ್ನು ‘ಇದು ನನಗೆ ಇಷ್ಟ’ ಮತ್ತು ‘ಇದು ನನಗೆ ಇಷ್ಟವಿಲ್ಲ’ ಎಂಬುದಾಗಿ ವಿಭಜಿಸಿದರೆ, ಸತ್ಯವನ್ನು ಗ್ರಹಿಸಲು ನೀವು ಅಸಮರ್ಥರಾಗುತ್ತೀರಿ.
ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ, ನಿಮ್ಮ ಸುತ್ತಲಿನ ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ – ಇದು ಮಾನವ ಹೃದಯದ ಗುಣ.
ಸಮಸ್ಯೆ ಇರುವುದು ಜೀವನದಲ್ಲಲ್ಲ. ಸಮಸ್ಯೆಯೇನೆಂದರೆ ನೀವು ನಿಮ್ಮ ಮನಸ್ಸನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಂಡಿಲ್ಲ.
ಮಾನವ ಶರೀರಕ್ಕಿಂತ ಒಳ್ಳೆಯ ರಾಸಾಯನಿಕ ಕಾರ್ಖಾನೆ ಈ ಭೂಮಿಯ ಮೇಲೆ ಮತ್ತೊಂದಿಲ್ಲ. ನೀವು ಉತ್ತಮ ಮ್ಯಾನೇಜರ್ ಆಗಿದ್ದರೆ, ನೀವದರಲ್ಲಿ ಪರಮಾನಂದದ ರಸಾಯನವನ್ನು ಉತ್ಪಾದಿಸಬಹುದು.