Main Centers
International Centers
India
USA
Wisdom
FILTERS:
SORT BY:
ತಾಯ್ತನದ ಸೊಬಗು ಇರುವುದು ಸಂತಾನೋತ್ಪತ್ತಿಯಲ್ಲಿ ಅಲ್ಲ, ಬದಲಿಗೆ ಒಳಗೂಡಿಸಿಕೊಳ್ಳುವಿಕೆಯಲ್ಲಿ – ಇನ್ನೊಂದು ಜೀವವನ್ನು ನಿಮ್ಮದೇ ಭಾಗವಾಗಿ ಅನುಭವಿಸುವುದರಲ್ಲಿ.
ನಿಮ್ಮ ಬದುಕು ನಿಮ್ಮದೇ ಸ್ಪಷ್ಟತೆ ಮತ್ತು ಸಾಮರ್ಥ್ಯಗಳಿಂದ ನಡೆಯಲಿ, ಆಕಸ್ಮಿಕವಾಗಿ ಅಥವಾ ಇತರರ ದಯೆ-ಕರುಣೆಗಳಿಂದ ಅಲ್ಲ.
ಪರಿಪೂರ್ಣ ಮನುಷ್ಯರಾಗುವುದು ಎಂದರೆ ನಿಮ್ಮ ಬದುಕಿನ ಪ್ರತಿ ಅಂಶವನ್ನೂ, ಪ್ರತಿ ಕ್ಷಣವನ್ನೂ ಸಂಪೂರ್ಣವಾಗಿ ಜೀವಿಸುವುದು.
ಧ್ಯಾನ ಎಂಬುದು ಏಕಾಗ್ರತೆಯೂ ಅಲ್ಲ, ವಿಶ್ರಾಂತಿಯೂ ಅಲ್ಲ. ಅದೊಂದು ರೀತಿಯಲ್ಲಿ ನೀವು ನಿಮ್ಮ ಮನೆಗೆ ಹಿಂತಿರುಗುವ ಪ್ರಕ್ರಿಯೆ.
ಮಾನವರಾಗಿರುವುದು ಎಂದರೆ ನೀವು ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ಪ್ರಜ್ಞಾಪೂರ್ವಕರಾಗಿರುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮ್ಮ ಮತ್ತು ನಿಮ್ಮ ಯೋಚನಾ ಪ್ರಕ್ರಿಯೆಯ ನಡುವೆ ಒಂದು ಅಂತರ ಉಂಟಾಯಿತೆಂದರೆ, ಒಂದು ಹೊಸ ಸ್ವಾತಂತ್ರ್ಯ ಹುಟ್ಟುವುದು. ಈ ಸ್ವಾತಂತ್ರ್ಯದೊಂದಿಗೆ, ಒಂದು ಹೊಸ ಅರಿವು ಹುಟ್ಟುವುದು.
ಜೀವನವನ್ನು ಅರಿಯಲು ನಿಮಗಿರುವ ಏಕೈಕ ದ್ವಾರವೆಂದರೆ ನೀವೇ. ಅದನ್ನು ತೆರೆದಿಡಿ.
ಮನುಷ್ಯ ಒಂದು ಸಂಪನ್ಮೂಲವಲ್ಲ. ಮನುಷ್ಯ ಒಂದು ಅಗಾಧ ಸಾಧ್ಯತೆ. ಸರಿಯಾದ ಪೋಷಣೆ ಸಿಕ್ಕರೆ, ಅವರೊಂದು ಅಸಾಮಾನ್ಯ ಅದ್ಭುತವಾಗಿ ಅರಳುತ್ತಾರೆ.
ನಿಮ್ಮ ಆಸೆಗಳನ್ನು ಹೆಚ್ಚಿಸಿಕೊಳ್ಳುವುದರ ಬದಲಿಗೆ ನಿಮ್ಮ ಸಾಮರ್ಥ್ಯಗಳನ್ನು ವರ್ಧಿಸಿಕೊಂಡರೆ ನೀವು ಜೀವನದ ಮೂಲಕ ಅನಾಯಾಸವಾಗಿ, ಸಲಿಲತೆಯೊಂದಿಗೆ ಸಾಗುವಿರಿ, ಮತ್ತು ಯಶಸ್ವಿಯಾಗುವಿರಿ.
ಯೋಗವು ಸ್ವರ್ಗಕ್ಕೆ ಹೋಗುವ ಬಗ್ಗೆಯಾಗಿಲ್ಲ, ಬದಲಿಗೆ ನಿಮ್ಮನ್ನೇ ಸ್ವರ್ಗಮಯವಾಗಿಸಿಕೊಳ್ಳುವ ಬಗ್ಗೆಯಾಗಿದೆ.
ನೀವು ಗತಕಾಲ ಅಥವಾ ಭವಿಷ್ಯವನ್ನು ನರಳುವುದು ಸಾಧ್ಯವಿಲ್ಲ, ಏಕೆಂದರೆ ಅವು ಅಸ್ತಿತ್ವದಲ್ಲೇ ಇಲ್ಲ. ನೀವು ನರಳುತ್ತಿರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು.