FILTERS:
SORT BY:
ಸಂಬಂಧಗಳು ಹೊಂದಾಣಿಕೆ, ಒಡನಾಟ, ಅಥವಾ ಇನ್ನೊಬ್ಬರಿಂದ ಸಂತೋಷವನ್ನು ಹಂಬಲಿಸುವ ಬಗ್ಗೆಯಲ್ಲ. ಬದಲಿಗೆ ಅವು ಮಹತ್ತಾದ ಸಾಧ್ಯತೆಗಳಿಗೆ ನಾಂದಿಯಾಗಬಲ್ಲಂತಹ ಐಕ್ಯತೆಯನ್ನು ಸೃಜಿಸಲು ಇರುವ ಒಂದು ಅವಕಾಶ.
ನೀವು ಕಾಡಿನಲ್ಲಿ ಸಮಯ ಕಳೆದರೆ, ನೀವೂ ಇನ್ನೊಂದು ಜೀವಿಯಷ್ಟೆ ಎಂಬುದನ್ನು ಮನಗಾಣುವಿರಿ. ನಿಮ್ಮ ಬಗ್ಗೆ ನಿಮಗೆ ಅನಿಸುವಂತೆಯೇ ಸುತ್ತಲಿನ ಎಲ್ಲ ಜೀವಿಗಳ ಬಗ್ಗೆಯೂ ಅನಿಸುವುದು ಒಂದು ದೊಡ್ಡ ಆಧ್ಯಾತ್ಮಿಕ ಹೆಜ್ಜೆ.
ಈಗ ಸೂರ್ಯನು ತನ್ನ ಉತ್ತುಂಗದಲ್ಲಿದ್ದಾನೆ. ಜೀವಶಕ್ತಿಯು ತನ್ನ ಉತ್ತುಂಗದಲ್ಲಿದೆ. ನಿಮಗೆ ನಿಮ್ಮ ಜೀವನವು ಫಲ ನೀಡಬೇಕೆಂದಿದ್ದರೆ, ನಿಮಗೆ ರೂಪಾಂತರಣೆ ಬೇಕೆಂದಿದ್ದರೆ, ಇದುವೇ ಅದಕ್ಕೆ ಅತ್ಯಂತ ಸೂಕ್ತವಾದ ಸಮಯ.
ಇನ್ನೊಬ್ಬರ ನರಳಾಟದ ಮೂಲಕ ಯಾರೂ ಒಳಿತನ್ನು ಪಡೆಯಲಾರರು. ನಿಮಗೆ ತಾತ್ಕಾಲಿಕ ಲಾಭವುಂಟಾದರೂ, ನೀವದಕ್ಕೆ ಬೆಲೆ ತೆರುತ್ತೀರಿ.
The Mind, which is the greatest Miracle, has become a misery-manufacturing machine for too many people.
ನಿಮ್ಮ ಸಂತೋಷವನ್ನು ನಂತರಕ್ಕೆ ಉಳಿಸಬೇಡಿ. ನೀವು ಸಂತೋಷಭರಿತರಾಗಿದ್ದಾಗ, ನಿಮ್ಮ ಸಂಪೂರ್ಣ ಬದುಕೇ ಒಂದು ಉತ್ಸವವಾಗುವುದು.
ಎಲ್ಲದರ ಬಗ್ಗೆಯೂ ಸಿಕ್ಕಾಪಟ್ಟೆ ಖಚಿತವಾಗಿರುವವರ ಬುದ್ಧಿಶಕ್ತಿಯು ಮಂಜುಗಡ್ಡೆಯಂತೆ ಹೆಪ್ಪುಗಟ್ಟಿಬಿಟ್ಟಿರುತ್ತದೆ.
ನಿಮ್ಮ ಯೋಚನೆ-ಭಾವನೆಗಳಲ್ಲಿ ನೀವು ಹೆಚ್ಚು ಪ್ರತ್ಯೇಕವಾದ ವ್ಯಕ್ತಿತ್ವವಾದಷ್ಟೂ, ‘ಜೀವನ’ದಿಂದ ನೀವು ಹೆಚ್ಚು ಪ್ರತ್ಯೇಕಿಸಲ್ಪಡುತ್ತೀರಿ.
ನೀರು ಜೀವ ನಿರ್ಮಾತೃ ಪದಾರ್ಥ. ನೀರನ್ನು ಉಳಿಸುವುದು ಜೀವವನ್ನು ಉಳಿಸಿದಂತೆ.
ಅನುಗ್ರಹಕ್ಕೆ ಪಾತ್ರರಾಗಲು ಇರುವ ಅತ್ಯುತ್ತಮ ದಾರಿಯೆಂದರೆ, ಈ ‘ನಾನು’ ಎಂಬುದನ್ನು ಕುಗ್ಗಿಸುವುದು.
ನಿಮಗೇ ಮುಖ್ಯವೆನಿಸದ ವಿಷಯಗಳ ಮೇಲೆ ನಿಮ್ಮ ಸಮಯ ಮತ್ತು ಜೀವನವನ್ನು ವ್ಯರ್ಥ ಮಾಡಬೇಡಿ. ನಿಮಗೆ ಯಾವುದು ನಿಜವಾಗಿಯೂ ಮುಖ್ಯವೆನಿಸುವುದೋ, ಅದಕ್ಕೆ ನೂರಕ್ಕೆ ನೂರು ಬದ್ಧರಾಗಿರಿ – ನಾಳೆಯಲ್ಲ, ಇಂದೇ.
ನಂಬಿಕೆ ಎಂದರೆ ನಿಮಗೆ ಎಳ್ಳಷ್ಟೂ ಗೊತ್ತಿಲ್ಲದ ವಿಷಯಗಳ ಬಗ್ಗೆ ಸಿದ್ಧಾಂತಗಳನ್ನು ಮಾಡಿಕೊಳ್ಳುವುದು.