Main Centers
International Centers
India
USA
Wisdom
FILTERS:
SORT BY:
ಯಾರ ಬಗ್ಗೆಯೂ ಎಂದೂ ಅಭಿಪ್ರಾಯ ರೂಪಿಸಿಕೊಳ್ಳಬೇಡಿ. ಅವರು ಈ ಕ್ಷಣ ಹೇಗಿದ್ದಾರೆ ಎಂಬುದಷ್ಟೆ ಮುಖ್ಯ.
ಕರ್ಮವು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದು ನಿಮ್ಮನ್ನು ಈ ದೇಹಕ್ಕೆ ಅಂಟಿಸುವ ಒಂದು ಗೋಂದು. ನೀವು ನಿಮ್ಮ ಎಲ್ಲ ಕರ್ಮವನ್ನೂ ತೊಳೆದುಬಿಟ್ಟಾಕ್ಷಣ, ನೀವು ನಿರ್ಗಮಿಸುವಿರಿ.
ನಿಜವಾದ ಕರುಣೆಯಲ್ಲಿ ಕೊಡು-ಕೊಳ್ಳುವಿಕೆಯಿರದು. ಅದು ಏನು ಅಗತ್ಯವೋ ಅದನ್ನು ಮಾಡುವ ಬಗ್ಗೆಯಾಗಿರುತ್ತದೆ.
ಬೋರ್ ಹೊಡೆಯುವುದು ಜೀವನದಲ್ಲಿ ತೊಡಗುವಿಕೆಯ ಕೊರತೆಯಿಂದ. ನೀವು ನಿಮ್ಮದೇ ಯೋಚನೆ-ಭಾವನೆಗಳಲ್ಲಿ ಕಳೆದುಹೋಗಿದ್ದೀರಿ.
ಶಾಂತಿ-ಸಂತೋಷಗಳ ನೆಲೆ ಇರುವುದು ಮಾರುಕಟ್ಟೆಯಲ್ಲೂ ಅಲ್ಲ, ಕಾಡಿನಲ್ಲೂ ಅಲ್ಲ, ಬದಲಿಗೆ ನಿಮ್ಮೊಳಗೆ.
ನಿಮ್ಮ ಮಗುವು ಚೆನ್ನಾಗಿ ಬೆಳೆಯಲು ನೀವೇನೂ ಅತಿ ಬುದ್ಧಿವಂತರಾಗಿರಬೇಕಿಲ್ಲ. ಅದಕ್ಕೆ ನೀವು ಸಂತೋಷ, ಪ್ರೀತಿ, ಮತ್ತು ನೇರ ನಡೆ-ನುಡಿಗಳಿಂದ ತುಂಬಿರಬೇಕಷ್ಟೆ.
ನೀವು ಬೇರೆಲ್ಲರಿಗಿಂತಲೂ ಉತ್ತಮರಾಗಿರಬೇಕಾಗಿಲ್ಲ. ಆದರೆ ನೀವು ನಿಮ್ಮ ಅತ್ಯುತ್ತಮ ಮಟ್ಟದಲ್ಲಿರಬೇಕು.
ನಿಮ್ಮ ಬದುಕಿನ ಸನ್ನಿವೇಶಗಳಲ್ಲಿ ಅದೇನೇ ಬಿಕ್ಕಟ್ಟುಗಳು ಉಂಟಾಗುತ್ತಿರಲಿ, ನಿಮ್ಮನ್ನು ನೀವು ಒಂದು ಬಿಕ್ಕಟ್ಟಾಗಿಸಬೇಡಿ.
ಅದು ಸುಲಭವಿರಲಿ ಕಷ್ಟವಿರಲಿ, ನಿಮಗೆ ಎಲ್ಲಿಗೆ ಹೋಗಬೇಕಿದೆಯೋ ಅದರ ಮೇಲಿಂದ ನಿಮ್ಮ ದೃಷ್ಟಿಯನ್ನು ಎಂದೂ ತೆಗೆಯಬೇಡಿ.
ನಿಯಂತ್ರಣ ಎಂದರೆ ನಿರ್ದಿಷ್ಟ ಮಿತಿಗಳೊಳಗೆ ಹಿಡಿದಿಡುವುದು. ನಿಮ್ಮ ಮನಸ್ಸನ್ನು ನಿಯಂತ್ರಿಸಬೇಡಿ – ಅದನ್ನು ಮುಕ್ತಗೊಳಿಸಿ.
ಇನ್ನೊಬ್ಬರು ಏನು ಮಾಡಬೇಕು ಎಂಬ ಬಗ್ಗೆ ನಿಮಗೆ ಯಾವುದೇ ನಿರೀಕ್ಷೆಗಳಿಲ್ಲದೇ ಹೋದಾಗ, ನೀವು ಯಶಸ್ವಿ ಸಂಬಂಧವನ್ನು ಹೊಂದುವಿರಿ.
ನಿಮಗೆ ಇತರರ ಅಕ್ಕರೆ-ಆದರದ ಅಗತ್ಯವಿಲ್ಲದೆಯೇ ಎಲ್ಲರ ಮೇಲೂ ನೀವು ಅಕ್ಕರೆಯನ್ನು ಎರೆಯಲು ಸಮರ್ಥರಾಗುವುದು – ಇದುವೇ ಸ್ವಾತಂತ್ರ್ಯ.