Main Centers
International Centers
India
USA
Wisdom
FILTERS:
SORT BY:
ನಿಮಗೆ ಪ್ರೇರಣೆ ಬೇಕಿದ್ದರೆ ಪುಸ್ತಕಗಳನ್ನು ಓದಿ. ಆದರೆ ನಿಮಗೆ ನಿಜವಾಗಿಯೂ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಬೇಕೆಂದಿದ್ದರೆ, ಅದಕ್ಕಿರುವ ಏಕೈಕ ಮಾರ್ಗವೆಂದರೆ ಅಂತರ್ಮುಖರಾಗುವುದು.
ಒಬ್ಬೊಬ್ಬ ಮನುಷ್ಯರಲ್ಲೂ ರೂಪಾಂತರಣೆಯನ್ನು ತಂದ ಹೊರತು ಜಗತ್ತಿನಲ್ಲಿ ರೂಪಾಂತರಣೆ ಉಂಟಾಗದು.
ನೀವು ಯಾರನ್ನೇ ಭೇಟಿಯಾದರೂ, ಅದು ನಿಮಗೆ ಅವರೊಂದಿಗೆ ಸಿಗುತ್ತಿರುವ ಕೊನೆಯ ಅವಕಾಶ ಎಂಬಂತೆ ಮಾತನಾಡಿ. ಅದು ನಿಮ್ಮ ಬದುಕನ್ನು ರೂಪಾಂತರಿಸುತ್ತದೆ.
ಶಿಸ್ತು ಎಂದರೆ ನಿಯಂತ್ರಣವಲ್ಲ. ಶಿಸ್ತು ಎಂದರೆ ಏನು ಅಗತ್ಯವಿದೆಯೋ ಅದನ್ನು ಮಾಡುವ ವಿವೇಚನೆಯನ್ನು ಹೊಂದಿರುವುದು.
ಮನುಷ್ಯರಾಗಿರುವುದು ಎಂದರೆ ನೀವು ಸಂಪರ್ಕಕ್ಕೆ ಬರುವ ಎಲ್ಲರಿಗೂ ಮತ್ತು ಎಲ್ಲದಕ್ಕೂ ಪ್ರಜ್ಞಾಪೂರ್ವಕವಾಗಿ ನಿಮ್ಮ ಕೈಲಾದಷ್ಟು ಉತ್ತಮವಾದುದನ್ನು ಮಾಡುವುದು.
ನೀವು ನಶ್ವರರು ಎಂಬ ಅರಿವು ನಿಮ್ಮಲ್ಲಿ ಮೂಡಿದಾಗ, ನೀವು ಯಾವುದರ ಬಗ್ಗೆಯೂ ಸೀರಿಯಸ್ ಆಗಿರುವುದಿಲ್ಲ, ಬದಲಿಗೆ ಆದಷ್ಟು ತೀವ್ರವಾಗಿ ಜೀವಿಸಲು ಹಾತೊರೆಯುತ್ತೀರಿ.
ಪ್ರಶ್ನಿಸುವುದು ಒಳ್ಳೆಯದು – ಅದರರ್ಥ ನೀವು ಸತ್ಯವನ್ನು ಅರಸುತ್ತಿದ್ದೀರಿ. ಆದರೆ ಸಂಶಯ ಎಂಬುದೊಂದು ರೋಗ.
ಮಹಿಳೆಯು ಪುರುಷನ ಜಗತ್ತಿಗೆ ಹೊಂದಿಕೊಳ್ಳುವ ಅಗತ್ಯ ಬೀಳಬಾರದು. ಅರ್ಧ ಜಗತ್ತು ಹೇಗಿದ್ದರೂ ಅವಳದ್ದೇ ಆಗಿರಬೇಕು.
ನಾವು 'ಜೀವನ'ಕ್ಕೆ ಸಂವೇದನಾಶೀಲರಾಗಬೇಕು – ನಮ್ಮದೇ ಯೋಚನೆಗಳು, ಭಾವನೆಗಳು, ಅಹಂ, ಸಿದ್ಧಾಂತಗಳು, ಅಥವಾ ನಂಬಿಕೆಗಳಿಗಲ್ಲ. ಏಕೆಂದರೆ ಅತ್ಯುನ್ನತವಾದ ಮೌಲ್ಯ ಜೀವನವೇ ಆಗಿದೆ.
ಹೋಳಿಯು ಮೂಲಭೂತವಾಗಿ ಬದುಕು ಒಂದು ಲವಲವಿಕೆಯುತ ಪ್ರಕ್ರಿಯೆ ಎಂದು ಗುರುತಿಸುವ ಬಗ್ಗೆಯಾಗಿದೆ. ಈ ದಿನದಂದು ನೀವು ಅತ್ಯಂತ ಹೆಚ್ಚು ಜೀವಂತಿಕೆಯಿಂದಿರಬೇಕು, ಏಕೆಂದರೆ ಜೀವಂತವಾಗಿರುವುದೇ ಅತ್ಯಮೂಲ್ಯವಾದದ್ದು.
ಮನುಷ್ಯರು ನರಳುವುದು ತಮ್ಮದೇ ನೆನಪು ಮತ್ತು ಕಲ್ಪನೆಗಳನ್ನು; ಅಂದರೆ, ಅವರು ನರಳುವುದು ಅಸ್ತಿತ್ವದಲ್ಲಿ ಇಲ್ಲದೇ ಇರುವುದನ್ನು.
ನಿಮ್ಮ ಗಮನಶೀಲತೆಯು ಎಷ್ಟು ಆಳವಾಗಿದೆ ಎಂಬುದು ನಿಮ್ಮ ಅನುಭವವು ಎಷ್ಟು ಆಳವಾಗಿದೆ ಎಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಗಮನಶೀಲತೆಯು ಪ್ರಬುದ್ಧವಾಗಿದ್ದರೆ, ಜೀವನದ ನಿಮ್ಮ ಅನುಭವವೂ ಪ್ರಬುದ್ಧವಾಗಿರುತ್ತದೆ.