Main Centers
International Centers
India
USA
Wisdom
FILTERS:
SORT BY:
ಜೀವನವು ಒಂದು ಸ್ಪರ್ಧೆಯಲ್ಲ. ಅದೊಂದು ಅಪೂರ್ವ ವಿದ್ಯಮಾನ.
ದಾರಿಯೇ ಗುರಿ, ಮತ್ತು ಗುರಿಯು ದಾರಿಯಲ್ಲೇ ಅಡಕವಾಗಿದೆ – ಸೃಷ್ಟಿಕರ್ತನು ಸೃಷ್ಟಿಯಲ್ಲಿ ಅಡಕವಾಗಿರುವಂತೆ.
ಎಲ್ಲರೂ ನಿಮ್ಮನ್ನು ವಂಚಿಸಲು ಕಾಯುತ್ತಿದ್ದಾರೆ ಎಂದು ಯೋಚಿಸುತ್ತಾ ಸಂಶಯದಲ್ಲೇ ಬದುಕುತ್ತಿದ್ದರೆ, ನೀವು ಬಾಳಿನಲ್ಲಿ ಬಹಳ ಸಣ್ಣಪುಟ್ಟ ವಿಷಯಗಳನ್ನಷ್ಟೆ ಮಾಡುತ್ತೀರಿ. ವಿಶ್ವಾಸ ಎನ್ನುವುದು ಬಹಳ ಮುಖ್ಯ.
ಅದೇ ಶಕ್ತಿಯು ಕೋಟ್ಯಾನುಗಟ್ಟಲೆ ರೂಪಗಳಲ್ಲಿ ವ್ಯಕ್ತವಾಗುತ್ತಿದೆ: ಒಂದು ಕಲ್ಲಾಗಿ, ಒಂದು ಮರವಾಗಿ, ಒಂದು ಪ್ರಾಣಿಯಾಗಿ, ಓರ್ವ ಮನುಷ್ಯನಾಗಿ, ಮತ್ತು ತನ್ನ ಅತ್ಯಂತ ಸೂಕ್ಷ್ಮ ರೂಪದಲ್ಲಿ, ‘ದೈವ’ವಾಗಿ.
ಪ್ರತಿಯೊಂದು ಸನ್ನಿವೇಶವೂ ಒಂದು ಅವಕಾಶ. ನೀವದರಿಂದ ಒಳಿತನ್ನು ಮಾಡಿಕೊಳ್ಳುತ್ತೀರೋ, ಅಥವಾ ತೊಳಲಾಟವನ್ನೋ ಎಂಬುದು ನಿಮ್ಮದೇ ಆಯ್ಕೆ.
ನಿಮ್ಮ ಪ್ರೀತಿ, ಸಂತೋಷ, ಮತ್ತು ಲವಲವಿಕೆಗಳನ್ನು ಹಿಡಿದಿಟ್ಟುಕೊಳ್ಳಬೇಡಿ. ನೀವು ಏನನ್ನು ಹೊರಹೊಮ್ಮಿಸುತ್ತೀರೋ ಅದುವೇ ನಿಮ್ಮ ಗುಣವಾಗುವುದು, ನೀವು ಹಿಡಿದಿಟ್ಟುಕೊಳ್ಳುವುದಲ್ಲ.
ಈ ವಿಶ್ವದಲ್ಲಿ ನೀವೊಂದು ಧೂಳಿನ ಕಣವಷ್ಟೆ. ನೀವು ನಿಮ್ಮ ಅಸ್ತಿತ್ವದ ಈ ವಾಸ್ತವತೆಯ ಅರಿವಿನಲ್ಲಿದ್ದರೆ, ನೀವು ಸಹಜವಾಗಿಯೇ ಮೌನವಾಗುವಿರಿ.
ಜೀವನ ಎನ್ನುವುದು ನಿಮ್ಮ ಸುತ್ತ ನಡೆಯುತ್ತಿರುವ ನಾಟಕವಲ್ಲ. ಜೀವನ ಎನ್ನುವುದು ‘ನೀವು’ ಎಂಬ ಆ ಮೂಲಭೂತ ಆಯಾಮವೇ ಆಗಿದೆ.
ನೀವು ಹೆಚ್ಚು ಭದ್ರತೆಯನ್ನು ಹಂಬಲಿಸಿದಷ್ಟೂ, ನಿಮ್ಮ ಬಾಳಿನಲ್ಲಾಗುವ ಪ್ರತಿಯೊಂದು ಬದಲಾವಣೆಯಿಂದಲೂ ಹೆಚ್ಚು ವಿಚಲಿತರಾಗುವಿರಿ.
ನಿಮ್ಮ ಧ್ಯಾನವು ಕೇವಲ ನಿಮ್ಮ ಬಗ್ಗೆಯಷ್ಟೆ ಆಗಿಲ್ಲ. ನೀವು ನಿಜವಾಗಿಯೂ ಧ್ಯಾನಸ್ಥರಾದರೆ, ಅದೇಕೆಂದು ಗೊತ್ತಿಲ್ಲದೆಯೇ, ನಿಮ್ಮ ಸುತ್ತಲಿರುವುದೆಲ್ಲವೂ ಶಾಂತಿಯಿಂದ ತುಂಬಿ ಹೋಗುವುದು.
ಆತ್ಮವಿಶ್ವಾಸವು ಸ್ಪಷ್ಟತೆಗೆ ಎಂದೂ ಪರ್ಯಾಯವಾಗಲಾರದು. ಯಶಸ್ವಿಯಾಗಬೇಕಾದರೆ, ನಿಮಗೆ ಬೇಕಿರುವುದು ಸ್ಪಷ್ಟತೆ, ಆತ್ಮವಿಶ್ವಾಸವಲ್ಲ.
ಈ ಹುಣ್ಣಿಮೆಯಂದು ಗೌತಮ ಬುದ್ಧನು ಪರಿಪೂರ್ಣ ಜ್ಞಾನೋದಯವನ್ನು ಹೊಂದಿದನು, ಮತ್ತು ಒಂದು ಆಧ್ಯಾತ್ಮಿಕ ಅಲೆಯನ್ನೇ ಹುಟ್ಟುಹಾಕಿದನು. ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು ಇದು ನಿಮಗೊಂದು ಪ್ರೇರಣೆಯಾಗಲಿ.