Main Centers
International Centers
India
USA
Wisdom
FILTERS:
SORT BY:
ನಿಯಂತ್ರಣ ಎಂದರೆ ನಿರ್ದಿಷ್ಟ ಮಿತಿಗಳೊಳಗೆ ಹಿಡಿದಿಡುವುದು. ನಿಮ್ಮ ಮನಸ್ಸನ್ನು ನಿಯಂತ್ರಿಸಬೇಡಿ – ಅದನ್ನು ಮುಕ್ತಗೊಳಿಸಿ.
ಇನ್ನೊಬ್ಬರು ಏನು ಮಾಡಬೇಕು ಎಂಬ ಬಗ್ಗೆ ನಿಮಗೆ ಯಾವುದೇ ನಿರೀಕ್ಷೆಗಳಿಲ್ಲದೇ ಹೋದಾಗ, ನೀವು ಯಶಸ್ವಿ ಸಂಬಂಧವನ್ನು ಹೊಂದುವಿರಿ.
ನಿಮಗೆ ಇತರರ ಅಕ್ಕರೆ-ಆದರದ ಅಗತ್ಯವಿಲ್ಲದೆಯೇ ಎಲ್ಲರ ಮೇಲೂ ನೀವು ಅಕ್ಕರೆಯನ್ನು ಎರೆಯಲು ಸಮರ್ಥರಾಗುವುದು – ಇದುವೇ ಸ್ವಾತಂತ್ರ್ಯ.
ಅಧ್ಯಾತ್ಮ ಎಂದರೆ ಆರಾಮ-ನೆಮ್ಮದಿಯ ಬದುಕನ್ನು ಹೊಂದುವುದು ಎಂದುಕೊಳ್ಳಬೇಡಿ. ಅಧ್ಯಾತ್ಮ ಎಂದರೆ ಕಿಚ್ಚೆಬ್ಬಿರುವುದು.
ನಿಜವಾದ ಕರುಣೆಯಲ್ಲಿ ಕೊಡು-ಕೊಳ್ಳುವಿಕೆಯಿರದು. ಅದು ಏನು ಅಗತ್ಯವೋ ಅದನ್ನು ಮಾಡುವ ಬಗ್ಗೆಯಾಗಿರುತ್ತದೆ.
ಬೋರ್ ಹೊಡೆಯುವುದು ಜೀವನದಲ್ಲಿ ತೊಡಗುವಿಕೆಯ ಕೊರತೆಯಿಂದ. ನೀವು ನಿಮ್ಮದೇ ಯೋಚನೆ-ಭಾವನೆಗಳಲ್ಲಿ ಕಳೆದುಹೋಗಿದ್ದೀರಿ.
ನೀವು ನಿಮ್ಮ ಬಗ್ಗೆ ಏನು ಯೋಚಿಸುತ್ತೀರಿ, ಮತ್ತು ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ಮೂಲಭೂತವಾಗಿ ಯಾವುದೇ ಮಹತ್ವವಿಲ್ಲ.
ಸಾವಿರಾರು ವರ್ಷಗಳಿಂದ ನಮ್ಮ ನದಿಗಳು ನಮ್ಮನ್ನು ನಮ್ಮ ತಾಯಂದಿರಂತೆ ಸಲಹಿ ಪೋಷಿಸಿವೆ. ಈಗ ನಾವು ನಮ್ಮ ನದಿಗಳನ್ನು ಸಲಹಿ ಪೋಷಿಸುವ ಸಮಯ ಬಂದಿದೆ.
ನೀವು ಬೇರೆಲ್ಲರಿಗಿಂತಲೂ ಉತ್ತಮರಾಗಿರಬೇಕಾಗಿಲ್ಲ. ಆದರೆ ನೀವು ನಿಮ್ಮ ಅತ್ಯುತ್ತಮ ಮಟ್ಟದಲ್ಲಿರಬೇಕು.
ನಿಮ್ಮ ಬದುಕಿನ ಸನ್ನಿವೇಶಗಳಲ್ಲಿ ಅದೇನೇ ಬಿಕ್ಕಟ್ಟುಗಳು ಉಂಟಾಗುತ್ತಿರಲಿ, ನಿಮ್ಮನ್ನು ನೀವು ಒಂದು ಬಿಕ್ಕಟ್ಟಾಗಿಸಬೇಡಿ.
ಕಲಿಸುವುದು ಒಂದು ವೃತ್ತಿಯಾಗಿರಬಾರದು, ಅದೊಂದು ಆಳವಾದ ತುಡಿತವಾಗಿರಬೇಕು. ಆಗಷ್ಟೆ ಶಿಕ್ಷಣವು ಮಾಹಿತಿಯ ಹೇರುವಿಕೆಯಿಂದ ಸತ್ಯದ ಅನ್ವೇಷಣೆಯತ್ತ ಸಾಗಬಲ್ಲದು.
ಒತ್ತಡವು ಜೀವನದ ಸಹಜ ಭಾಗವಲ್ಲ. ಒತ್ತಡ ಉಂಟಾಗುವುದು ನಿಮ್ಮದೇ ಜೀವವ್ಯವಸ್ಥೆಯನ್ನು ನಿಭಾಯಿಸುವಲ್ಲಿನ ನಿಮ್ಮ ಅಸಾಮರ್ಥ್ಯದಿಂದ.