Main Centers
International Centers
India
USA
Wisdom
FILTERS:
SORT BY:
ಮಣ್ಣು ಜೀವಂತವಾದ ಪದಾರ್ಥ – ಅದು ನಮ್ಮ ಸೊತ್ತಲ್ಲ. ಅದು ನಮಗೆ ಬಂದಿರುವ ಬಳುವಳಿ. ಅದನ್ನು ನಾವು ಮುಂದಿನ ಪೀಳಿಗೆಗಳಿಗೆ ಜೀವಂತ ಮಣ್ಣಾಗಿಯೇ ಹಸ್ತಾಂತರಿಸಬೇಕು.
ಯಾರು ತಮ್ಮೊಳಗೆ ಸತತವಾದ ವಿಶ್ರಾಂತಿಯಲ್ಲಿದ್ದಾರೋ, ಅವರು ಕೊನೆಯಿಲ್ಲದಂತೆ ಕಾರ್ಯಗೈಯಲು ಸಮರ್ಥರಾಗುತ್ತಾರೆ.
ನಿಮ್ಮ ಹಣ, ಸಂಬಂಧಗಳು, ಅಥವಾ ಕುಟುಂಬವು ನಿಮ್ಮ ಭದ್ರತೆ ಎಂದು ಭಾವಿಸಬೇಡಿ. ನಿಮ್ಮನ್ನು ನೀವು ಎಲ್ಲಾ ಸ್ತರಗಳಲ್ಲೂ ಚೆನ್ನಾಗಿ ಇಟ್ಟುಕೊಳ್ಳುವುದು ಹೇಗೆಂದು ತಿಳಿದುಕೊಳ್ಳುವುದೇ ನಿಜವಾದ ಭದ್ರತೆ. ಅದುವೇ ಯೋಗ.
ಎಲ್ಲರೂ ನಿಮಗೆ ಮೋಸ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂದು ಭಾವಿಸಿದರೆ, ನೀವು ಅಲ್ಪರಾಗುತ್ತೀರಿ. ವಿಶ್ವಾಸ ಎಂಬುದು ಮುಖ್ಯ.
ನಿಮ್ಮಲ್ಲಿ ಪ್ರತಿಯೊಬ್ಬರೂ ಧ್ಯಾನಲಿಂಗವನ್ನು ಅನುಭವಿಸಬೇಕೆಂಬುದು ನನ್ನ ಹಾರೈಕೆ ಮತ್ತು ಆಶೀರ್ವಾದ. ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ, ಈ ಸಾಧ್ಯತೆಗೆ ನಿಮ್ಮನ್ನು ನೀವು ತೆರೆದುಕೊಂಡಿದ್ದರೆ, ಆಧ್ಯಾತ್ಮಿಕ ಮುಕ್ತಿಯ ಬೀಜವು ನಿಮ್ಮದಾಗುತ್ತದೆ.
ಅಜ್ಞಾನವು ಆನಂದಮಯವಾಗಿರುವುದು ವಾಸ್ತವವು ನಿಮ್ಮನ್ನು ಬಡಿದೆಬ್ಬಿಸುವವರೆಗಷ್ಟೆ.
ನಿಮ್ಮದೇ ಮನಸ್ಸು ನಿಮ್ಮನ್ನು ದಿನಕ್ಕೆ ಸಾವಿರ ಸಲ ಒಳಗಿನಿಂದ ತಿವಿಯಬಹುದು. ಅದು ತೊಳಲಾಟವನ್ನು ಉತ್ಪಾದಿಸುವ ಯಂತ್ರವಾಗಬಲ್ಲದು, ಅಥವಾ ಒಂದು ಚಮತ್ಕಾರವಾಗಬಲ್ಲದು – ಆಯ್ಕೆ ನಿಮ್ಮದೇ.
ನೀವು ತೆಗೆದುಕೊಳ್ಳಬೇಕಾದ ಮೊಟ್ಟಮೊದಲ ಹೆಜ್ಜೆಯೆಂದರೆ, ನಿಮ್ಮ ಬದುಕಿನಲ್ಲಿ ಅದೇನೇ ನಡೆದರೂ, ನಿಮ್ಮ ಬದುಕು ನಿಮ್ಮ ಜವಾಬ್ದಾರಿ ಎಂದು ಗುರುತಿಸುವುದು.
ನೀಡುವುದರಲ್ಲಿ ಧನ್ಯತೆಯಿದೆ.
ಜೀವನದ ನಿಮ್ಮ ಅನುಭವವು ಎಷ್ಟು ಅಗಾಧವಾಗಿದೆ, ಮತ್ತು ನೀವು ಮಾಡುವ ಕೆಲಸದಲ್ಲಿ ನೀವೆಷ್ಟು ಪರಿಣಾಮಕಾರಿಯಾಗಿದ್ದೀರಿ – ಜೀವನದಲ್ಲಿ ಮುಖ್ಯವಾಗುವುದು ಇದಿಷ್ಟೆ.
ಸತ್ಯನಿಷ್ಠತೆ ಎಂಬುದು ಮೌಲ್ಯಗಳ ಅಥವಾ ಸದಾಚಾರಗಳ ಕಂತೆಯಲ್ಲ. ನೀವು ಹೇಗಿದ್ದೀರಿ, ಹೇಗೆ ಯೋಚಿಸುತ್ತೀರಿ, ಮತ್ತು ಹೇಗೆ ಕಾರ್ಯಗೈಯುತ್ತೀರಿ ಎಂಬುದರ ನಡುವಿನ ಸಾಮರಸ್ಯವೇ ಸತ್ಯನಿಷ್ಠತೆ.
ಹೋಲಿಕೆಯ ಆಧಾರದಲ್ಲಿ ಮಾಡಿದ ಗ್ರಹಿಕೆಯು ಎಂದಿಗೂ ನಿಚ್ಚಳವಲ್ಲ – ಅದು ವಾಸ್ತವತೆಯನ್ನು ತಿರುಚುತ್ತದೆ.