Main Centers
International Centers
India
USA
Wisdom
FILTERS:
SORT BY:
ಜಗತ್ತಿನಲ್ಲಿ ದಕ್ಷತೆಯಿಂದ ಕಾರ್ಯಗೈಯಲು ಪ್ರಧಾನವಾದ ಅಂಶ ಪುಸ್ತಕಜ್ಞಾನವಲ್ಲ, ಬದಲಿಗೆ ಗ್ರಹಣಶೀಲತೆಯಲ್ಲಿನ ಸ್ಪಷ್ಟತೆ.
ಚೈತನ್ಯ ಮತ್ತು ಅರಿವಿನ ಉನ್ನತ ಸ್ತರದೆಡೆಗೆ ಸಾಗುವುದೇ ಯೋಗಾಭ್ಯಾಸಗಳು ಮತ್ತು ಧ್ಯಾನದ ಮೂಲ ಉದ್ದೇಶ.
ಆರೋಗ್ಯ ಎಂದರೆ ಬರೀ ರೋಗದ ಅಭಾವವಲ್ಲ, ಬದಲಿಗೆ ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಒಳಿತನ್ನು ಒಳಗೊಂಡಿರುವ ಒಂದು ಸಮಗ್ರ ಸ್ಥಿತಿ.
ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ಇತರರ ಅಭಿಪ್ರಾಯಗಳು ಮತ್ತು ಉಪಸ್ಥಿತಿಯು ನಿರ್ಧರಿಸಬಾರದು. ಅದುವೇ ರೂಪಾಂತರಣೆ.
ಮನುಷ್ಯರಾಗಿರುವುದು ಎಂದರೆ ಪ್ರತಿಯೊಂದು ಜೀವಿಯನ್ನೂ ಕೋಮಲವಾದ ದೃಷ್ಟಿಯಿಂದ ನೋಡುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮಗಿಷ್ಟವಿಲ್ಲದ ವಿಷಯಗಳೊಂದಿಗೆ ಸಂತೋಷದಿಂದ ಬದುಕಲು ಕಲಿಯುವುದು ಜೀವನದಲ್ಲೊಂದು ಮಹತ್ತಾದ ಪಾಠ.
ಅಪರಾಧಿ ಪ್ರಜ್ಞೆ, ಭಯ, ಸಿಟ್ಟು, ಅಥವಾ ದ್ವೇಷ – ಅದನ್ನು ನೀವು ಏನಾದರೂ ಕರೆಯಿರಿ. ಮೂಲತಃ ಅದರರ್ಥ ಇಷ್ಟೆ – ನಿಮ್ಮ ಯೋಚನೆ ಮತ್ತು ಭಾವನೆಗಳು ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿವೆ.
ನಿಮ್ಮ ಒಳಿತಿಗಿಂತಲೂ ಇತರರ ಒಳಿತು ನಿಮಗೆ ಹೆಚ್ಚು ಮುಖ್ಯವಾದಾಗ ಒಂದು ಬೇರೆಯೇ ರೀತಿಯ ಶಕ್ತಿಯು ನಿಮಗೆ ತೆರೆದುಕೊಳ್ಳುವುದು. ಆ ಶಕ್ತಿಯು ಬದುಕಿನುದ್ದಕ್ಕೂ ಮತ್ತು ನಂತರವೂ ನಿಮ್ಮನ್ನು ಅನಾಯಾಸವಾಗಿ ಸಾಗಿಸುತ್ತದೆ.
ಜೀವನ್ಮರಣಗಳ ಮೂಲಕ ನಿಮ್ಮನ್ನು ಸಾಗಿಸಬಲ್ಲ ಏಕೈಕ ನಿಜವಾದ ಐಶ್ವರ್ಯವೆಂದರೆ ಅನುಭವದ ಅಗಾಧತೆ.
ಜನರನ್ನು ಬಳಸುವುದು ಮತ್ತು ವಸ್ತುಗಳನ್ನು ಪ್ರೀತಿಸುವುದು – ಇದು ಜೀವನದ ಸಂಪೂರ್ಣವಾದ ತಪ್ಪು ತಿಳುವಳಿಕೆ. ವಸ್ತುಗಳಿರುವುದು ಬಳಸಲು. ಜನರಿರುವುದು ಪ್ರೀತಿಸಲು.
ಜೀವನವನ್ನು ಸವಿಯಲು ಇರುವ ಏಕೈಕ ದಾರಿಯೆಂದರೆ ತೊಡಗುವಿಕೆ.
ಹೊಸ ಮತ್ತು ಸವಾಲಿನ ಸನ್ನಿವೇಶಗಳು ಸಾಧ್ಯತೆಗಳು, ಸಮಸ್ಯೆಗಳಲ್ಲ.