ಅಪೋಲೋ ಆಸ್ಪತ್ರೆಗಳ ಸಂಸ್ಥಾಪಕರಾದ ಪಿ ಸಿ ರೆಡ್ಡಿಯವರು ಸದ್ಗುರುಗಳನ್ನು ಒಳ್ಳೆ ಆರೋಗ್ಯದ ಸೂತ್ರವೇನು ಎಂದು ಕೇಳುತ್ತಾರೆ. ಉತ್ತರವಾಗಿ ಸದ್ಗುರು, ರೋಗಗಳನ್ನು ಸಾಂಕ್ರಾಮಿಕ ಮತ್ತು ದೀರ್ಘಕಾಲಿಕ ಎಂದು ವಿಂಗಡನೆ ಮಾಡುತ್ತಾರೆ. ಹೊರಗಿನಿಂದ ಬರುವಂತಹ ಸಾಂಕ್ರಾಮಿಕ ರೋಗಗಳನ್ನು ನಿವಾರಿಸಲು ನಾವು ವೈದ್ಯಕೀಯ ವಿಜ್ಞಾನದ ಸಹಾಯವನ್ನು ಪಡೆಯಬೇಕು. ಆದರೆ ದೀರ್ಘಕಾಲಿಕ (ಕ್ರಾನಿಕ್) ಖಾಯಿಲೆಗಳು ಉಂಟಾಗುವುದು ನಮ್ಮೊಳಗಿನಿಂದಲೇ. ಆದ್ದರಿಂದ, ಅವುಗಳನ್ನು ಸರಿಪಡಿಸಲು ನಾವು ಹೋಗಬೇಕಾಗಿರುವುದು ನಮ್ಮ ದೇಹವನ್ನು ನಿರ್ಮಿಸುವ ನಮ್ಮೊಳಗಿನ manufacturer ಹತ್ತಿರ, ಯಾವುದೋ ಲೋಕಲ್ ಮೆಕ್ಯಾನಿಕ್ ಹತ್ತಿರ ಅಲ್ಲ ಎಂದು ಹಾಸ್ಯಪೂರ್ವಕವಾಗಿ ಮನವರಿಕೆ ಮಾಡುತ್ತಾರೆ.