Main Centers
International Centers
India
USA
Sadhguru Quotes
FILTERS:
SORT BY:
Clear All
ನಿನ್ನೆ ಏನಾಯಿತೋ, ಅದನ್ನು ನೀವು ಬದಲಿಸಲಾರಿರಿ. ಇಂದು ಏನಾಗುತ್ತಿದೆಯೋ, ಅದನ್ನು ನೀವು ಅನುಭವಿಸಬಹುದಷ್ಟೆ. ನಾಳೆ ಏನಾಗಲಿದೆಯೋ, ಅದನ್ನು ನೀವು ಸೃಷ್ಟಿಸಬೇಕು.
ಯಾವಾಗ ‘ನಾನು ಸ್ಪೆಷಲ್ ಎನಿಸಿಕೊಳ್ಳಬೇಕು’ ಎಂಬ ತವಕ ಹೊರಟುಹೋಗುತ್ತದೆಯೋ, ಆಗಲೇ ನೀವು ಅನನ್ಯರಾಗುವುದು. ಜೀವನದ ಮಹತ್ವವಿರುವುದು ಅದರ ಅನನ್ಯತೆಯಲ್ಲಿ.
ಎಲ್ಲವೂ ಶೂನ್ಯದಿಂದ ಬಂದು ಶೂನ್ಯಕ್ಕೆ ಮರಳುತ್ತದೆ. ಇದುವೇ ವಿಶ್ವದ ಅತ್ಯಂತ ದೊಡ್ಡ ಪವಾಡ.
ನಿಮ್ಮ ದೇಹ-ಮನಸ್ಸುಗಳು ನಿಮ್ಮ ಸೂಚನೆಗಳನ್ನು ಪಾಲಿಸಿದರೆ, ಆರೋಗ್ಯ, ಶಾಂತಿ, ಮತ್ತು ಸಂತೋಷದಿಂದ ಇರುವುದು ಕೇವಲ ಒಂದು ಸಾಧ್ಯತೆಯಲ್ಲ – ಅದೊಂದು ಸಹಜ ಫಲಿತಾಂಶ.
ಮಾನವ ಚೇತನದಲ್ಲಿರುವ ಸಾಧ್ಯತೆಯು ನಿಜವಾಗಿಯೂ ಅರಳಬೇಕಾದರೆ, ನಿಮ್ಮ ಅಂತರಂಗವು ಬಾಹ್ಯ ಪರಿಸ್ಥಿತಿಗಳ ಕೈಗೊಂಬೆಯಾಗದೇ ಇರುವಂತೆ ನೀವು ನೆಲೆಗೊಳ್ಳಬೇಕು.
ನೀವು ಕಾರ್ಯದಲ್ಲಿ ತೊಡಗಿದ್ದಾಗ, ಹಿಂಜರಿಕೆ ಎಂಬುದು ಅತ್ಯಂತ ಹೀನಾಯವಾದ ಅಪರಾಧ.
ಜೀವನದ ಅತ್ಯಂತ ಸರಳ ಸಂಗತಿಗಳೊಂದಿಗೂ ನೀವು ಆಳವಾಗಿ ತನ್ಮಯರಾದರೆ, ಜೀವನದ ಪ್ರತಿಯೊಂದು ಅಂಶವೂ ಹೃದಯಂಗಮವಾಗಿರುವುದನ್ನು ನೋಡುವಿರಿ.
ನಿಮ್ಮ ಅಂತರಂಗವನ್ನು ಎಂಜಿನಿಯರಿಂಗ್ ಮಾಡಿ ಚೊಕ್ಕಟಗೊಳಿಸಿ, ಮತ್ತು ನಿಮ್ಮ ಚೇತನವು ಸಂಪೂರ್ಣವಾಗಿ ಅರಳುವಂತೆ ಮಾಡಿ.
When an individual is Committed to something beyond their own personal wellbeing, there will be a very powerful situation.
ಮನುಷ್ಯನ ನರಳಾಟ ಉತ್ಪತ್ತಿಯಾಗುವುದು ಮನುಷ್ಯನ ಮನಸ್ಸಿನಲ್ಲಿ. ಮನುಷ್ಯನ ಮಿತಿಗಳೂ ಕೂಡ.
ಯಶಸ್ಸು ಬರುವುದು ಗ್ರಹ-ನಕ್ಷತ್ರಗಳು ಕೂಡಿ ಬರುವುದರಿಂದ ಅಲ್ಲ, ಬದಲಿಗೆ ನಿಮ್ಮ ಸಂಕಲ್ಪವನ್ನು ಪೂರೈಸಲು ನಿಮಗಿರುವ ಬಾಧ್ಯತೆ ಮತ್ತು ಅದರತ್ತ ಸೂಕ್ತವಾಗಿ ಕಾರ್ಯಗೈಯುವುದರಿಂದ. ಎಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ಅಂತರಂಗವು ಕೂಡಿ ಬರುವಂತೆ ಮಾಡಬೇಕು.
ಜ್ಞಾನೋದಯ ಹೊಂದಿದವರನ್ನು ‘ದ್ವಿಜ’ ಎನ್ನುತ್ತಾರೆ. ಅದರರ್ಥ, ಎರಡು ಸಲ ಹುಟ್ಟಿದವರು. ನೀವು ಎಲ್ಲ ಮೃಗೀಯ ಗುಣಗಳನ್ನು ತೊಡೆದುಹಾಕಿ ಒಂದು ಚೇತನವಾಗಿ ಅರಳುವಂತಾಗಲಿ.