Main Centers
International Centers
India
USA
Sadhguru Quotes
FILTERS:
SORT BY:
Clear All
ಕಣ್ಣು-ಮೂಗುಗಳ ಆಕಾರ ಹೇಗೇ ಇರಲಿ, ಸಂತೋಷಭರಿತ ಮುಖವು ಎಂದಿದ್ದರೂ ಅಂದವಾದ ಮುಖ. ಸಂತೋಷಭರಿತರಾಗಿ – ಸುಂದರರಾಗಿ.
ನಿಮ್ಮ ಅಭಿಪ್ರಾಯಗಳು ಒಂದು ಗೋಡೆ – ಬೇರೆಯವರಿಗೆ ಮಾತ್ರವಲ್ಲ, ಸ್ವಯಂ ನಿಮಗೇ ಕೂಡ. ಮುಚ್ಚಿದ ಮನಸ್ಸು ಎಂದರೆ ಮುಚ್ಚಿದ ಸಾಧ್ಯತೆಗಳು.
ಎರಡು ರೀತಿಯ ಜನರಿದ್ದಾರೆ. ಒಬ್ಬರು ಸಂಗತಿಗಳನ್ನು ಸಾಕಾರಗೊಳಿಸುತ್ತಾರೆ. ಇನ್ನೊಬ್ಬರು ಅದು ಚೆನ್ನಾಗಿ ನಡೆದಾಗ ಆನಂದಿಸುತ್ತಾರೆ, ಮತ್ತು ನಡೆಯದಿದ್ದಾಗ ದೂರುತ್ತಾರೆ.
ಏನನ್ನಾದರೂ ಅಭ್ಯಾಸಬಲದಿಂದ ಮಾಡುವುದು ಸುಲಭವೆನಿಸುತ್ತದೆ. ಆದರೆ ಪ್ರಜ್ಞಾಪೂರ್ವಕ ಕಾರ್ಯವಿಲ್ಲದೇ ಬೆಳವಣಿಗೆ ಸಾಧ್ಯವಿಲ್ಲ.
ನೀವು ಪರಿಪೂರ್ಣರಾಗಲು ಏನನ್ನೂ ಮಾಡಬೇಕಿಲ್ಲ, ಏನನ್ನೂ ಯೋಚಿಸಬೇಕಿಲ್ಲ, ಏನನ್ನೂ ಅನುಭವಿಸಬೇಕಿಲ್ಲ. ನೀವು ಹೇಗಿದ್ದೀರೋ ಹಾಗೆಯೇ ನೀವೊಂದು ಪರಿಪೂರ್ಣ ಜೀವ.
ಓರ್ವ ಮನುಷ್ಯರಾಗಿ, ಜೀವನವು ನಿಮ್ಮನ್ನು ಎಲ್ಲಿಗೆ ಒಯ್ಯುತ್ತದೆ ಎಂದು ಯೋಚಿಸಬೇಡಿ. ನೀವು ಅದನ್ನು ಎಲ್ಲಿಗೆ ಒಯ್ಯಲು ಬಯಸುತ್ತೀರಿ ಎಂದು ಯೋಚಿಸಿ.
ಹರಿತವಾದ ಬುದ್ಧಿಯೆಂದರೆ ಚತುರತೆಯಲ್ಲಿ ಇನ್ನೊಬ್ಬರನ್ನು ಮೀರುವುದಲ್ಲ, ಬದಲಿಗೆ ಜೀವನವನ್ನು ಅದು ಹೇಗಿದೆಯೋ ಹಾಗೇ ನೋಡುವುದು.
ನಿಮ್ಮ ಯೋಚನೆ-ಭಾವನೆಗಳು ನಿಮ್ಮದೇ ಸೃಷ್ಟಿಯಾಗಿವೆ. ಅವುಗಳೊಂದಿಗಿನ ನಿಮ್ಮ ಮೋಹ ಮತ್ತು ಬಂಧನ ಕೂಡ ನಿಮ್ಮದೇ ಸೃಷ್ಟಿಯಾಗಿವೆ.
ನೀವು ನಿಮ್ಮ ನಶ್ವರತೆಯ ಅರಿವಿನಲ್ಲಿದ್ದಾಗ ಮಾತ್ರ ಅದನ್ನು ಮೀರಿ ಹೋಗುವ ಹಾತೊರೆತವು ಒಂದು ನೈಜ ಶಕ್ತಿಯಾಗುತ್ತದೆ. ಇಲ್ಲದಿದ್ದರೆ ಅಧ್ಯಾತ್ಮವು ಬರೀ ಮನರಂಜನೆಯಾಗಿ ಉಳಿಯುತ್ತದೆ ಅಷ್ಟೆ.
ಗಣೇಶ ಅಥವಾ ಗಣಪತಿಯು ಕೇವಲ ಬುದ್ಧಿವಂತನಷ್ಟೆ ಅಲ್ಲ – ಅವನು ವಿಘ್ನಗಳ ನಿವಾರಕ. ಎಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ಜೀವನದಲ್ಲಿ ನೀವೇ ಒಂದು ವಿಘ್ನವಾಗಿರದಂತೆ ಖಚಿತಪಡಿಸಿಕೊಳ್ಳಿ.
ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕ್ಷಾತ್ಕಾರಿಸಿಕೊಳ್ಳುವುದು ಎಂಬಂಥದ್ದೇನಿಲ್ಲ. ಮನುಷ್ಯರೆಂದರೆ ನೀವೊಂದು ಮಿತಿಯಿಲ್ಲದ ಸಾಧ್ಯತೆ.
ನಿಮಗೆ ಎಲ್ಲರೂ ನಿಮ್ಮನ್ನು ಪ್ರೀತಿಸಬೇಕು ಎಂದಿದ್ದರೆ, ಮೊದಲು ನೀವು ಎಲ್ಲರನ್ನೂ ಪ್ರೀತಿಸಬೇಕು.