Main Centers
International Centers
India
USA
FILTERS:
SORT BY:
Clear All
ನಿಮ್ಮ ಬದುಕಿನಲ್ಲಿ ಕಹಿಯಾದ ಅನುಭವಗಳಾದರೆ, ನಿಮಗಿರುವ ಆಯ್ಕೆ ಇಷ್ಟೆ – ಒಂದೋ ನೀವು ವಿವೇಕಿಗಳಾಗಬಹುದು, ಅಥವಾ ಮನಸ್ಸನ್ನು ಹುಣ್ಣು ಮಾಡಿಕೊಳ್ಳಬಹುದು.
ಮೇಲೆದ್ದು ಮಿಂಚಿ. ನೀವು ಸಂತೋಷ ಮತ್ತು ಲವಲವಿಕೆಯಿಂದ ತುಂಬಿದ್ದಾಗ ಜನರು ಸಹಜವಾಗಿಯೇ ನಿಮ್ಮನ್ನು ಪ್ರೀತಿಸುತ್ತಾರೆ.
ಯೋಗ ಎಂದರೆ ಅನಂತ ಶಕ್ತಿಯ ಮೂಲದೊಂದಿಗೆ ತಡೆಯಿಲ್ಲದ ಸಂಪರ್ಕ ಹೊಂದುವುದು.
ನಿಮ್ಮನ್ನು ಬಸವಳಿಸುತ್ತಿರುವುದು ನಿಮ್ಮ ಕೆಲಸವಲ್ಲ, ಬದಲಿಗೆ ನಿಮ್ಮದೇ ಯೋಚನೆ-ಭಾವನೆಗಳ ಗಿಜಿಗುಟ್ಟುವಿಕೆ.
ಮನಸ್ಸು ಬಹಳ ಕೆಟ್ಟ ಯಜಮಾನ, ಆದರೆ ಅದ್ಭುತ ಗುಲಾಮ. ಅದನ್ನು ಹಾಗೆಯೇ ಇಟ್ಟುಕೊಳ್ಳಬೇಕು.
ಭಕ್ತಿ ಎಂದರೆ ಪೂಜೆ ಮಾಡುವುದಲ್ಲ. ಭಕ್ತಿ ಎಂದರೆ ನಿಮ್ಮನ್ನು ನೀವು ಕಳೆದುಕೊಳ್ಳುವುದು.
ತಾಯ್ತನದ ಸೊಬಗು ಇರುವುದು ಸಂತಾನೋತ್ಪತ್ತಿಯಲ್ಲಲ್ಲ, ಬದಲಿಗೆ ಇನ್ನೊಂದು ಜೀವವನ್ನು ತನ್ನದೇ ಭಾಗವಾಗಿ ಒಳಗೂಡಿಸಿಕೊಳ್ಳುವ ಹೃತ್ಪೂರ್ವಕತೆಯಲ್ಲಿ.
ಒಳ್ಳೆತನ ಎಂಬುದು ನೀವು ಭಾವಿಸಿಕೊಳ್ಳುವ ಸ್ಥಿತಿಯಷ್ಟೆ. ಸಂತೋಷವು ನಿಜವಾದ ಅನುಭವ.
ಜನರು ಇರುವುದು ಬಳಸಲ್ಪಡಲು ಅಲ್ಲ. ಜನರು ಇರುವುದು ಪ್ರೀತಿಸಲು ಮತ್ತು ನಿಮ್ಮ ಬಳಿಯಿರುವುದನ್ನು ಹಂಚಲು. ಬಳಸಬೇಕಿರುವುದು ವಸ್ತುಗಳನ್ನು, ಜನರನ್ನಲ್ಲ.
ಓರ್ವ ಮನುಷ್ಯರಾಗಿ, ನಿಮ್ಮ ಜೀವನದ ಅನುಭವವನ್ನು ಗ್ರಹ-ನಕ್ಷತ್ರಗಳು ನಿರ್ಧರಿಸಬೇಕಾಗಿಲ್ಲ. ನಿಮ್ಮ ಅಂತರಂಗದ ಅನುಭವವನ್ನು ನೀವಷ್ಟೆ ನಿರ್ಧರಿಸಬೇಕು.
ದೇಹ-ಮನಸ್ಸುಗಳು ಪವಾಡಮಯ ಸಾಧನಗಳು. ಆದರೆ ಅವು ಉತ್ಕೃಷ್ಟವಾಗಿ ಕಾರ್ಯಗೈಯಬೇಕೆಂದರೆ, ಅವನ್ನು ನೀವು ಸರಿಯಾಗಿ ಧರಿಸಲು ಕಲಿಯಬೇಕು.
ಮಾನವ ಬದುಕು ಹೊಟ್ಟೆಪಾಡಿನೊಂದಿಗೆ ಮುಕ್ತಾಯವಾಗುವುದಿಲ್ಲ. ಮಾನವ ಬದುಕು ಪ್ರಾರಂಭವಾಗುವುದೇ ಹೊಟ್ಟೆಪಾಡಿನ ಏರ್ಪಾಡಾದ ಮೇಲೆ.