FILTERS:
SORT BY:
Clear All
ನಿಮ್ಮ ಮತ, ಜನಾಂಗ, ಅಥವಾ ಜಾತಿ ಅದೇನೇ ಆಗಿರಲಿ – ನೀವು ಮಾನವರಾಗಿದ್ದರೆ, ಮಹಾಶಿವರಾತ್ರಿಯು ನಿಮಗೆ ಪ್ರಸ್ತುತವಾದುದು. ಅಂತರ್ಮುಖರಾಗುವ ವಿಜ್ಞಾನವು ನಿಮಗೆ ಪ್ರಸ್ತುತವಾದುದು, ಏಕೆಂದರೆ ಮಾನವರ ಒಳಿತು ಸೃಷ್ಟಿಸಲ್ಪಡುವುದು ಒಳಗಿನಿಂದಲೇ.
ಸಂಗೀತವು ಒಂದು ಪರಿಶೋಧನೆಯಾಗಬೇಕು, ಜೀವನವನ್ನು ಶ್ರೀಮಂತವಾಗಿಸಬೇಕು. ಅದು ಯಾಂತ್ರಿಕವಾದರೆ, ಯಂತ್ರಗಳೇ ಅದನ್ನು ಮಾಡುವುವು – ಅವು ಯಾವತ್ತಿದ್ದರೂ ಯಾಂತ್ರಿಕವಾದುದನ್ನು ನಮಗಿಂತ ಚೆನ್ನಾಗಿ ಮಾಡಬಲ್ಲವು.
ನೀವು ಎಷ್ಟು ಕಾಲ ಬದುಕಿದಿರಿ ಎಂಬುದಕ್ಕಿಂತ ಜೀವನದ ಸಂಪೂರ್ಣ ಅಂತಸ್ಸತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹೆಚ್ಚು ಮುಖ್ಯ.
ಎಲ್ಲರಿಗೂ ಮಾಹಿತಿಯು ಲಭ್ಯವಿರುವ ಈ ಜಗತ್ತಿನಲ್ಲಿ, ಶಿಕ್ಷಣವು ಸ್ಫೂರ್ತಿಯ ಮೂಲವಾಗಬೇಕೇ ಹೊರತು ಮಾಹಿತಿಯ ಶೇಖರಣೆಯಲ್ಲ.
ನೀವು ನರಳುತ್ತಿರುವುದು ಜೀವನವನ್ನಲ್ಲ. ನೀವು ನರಳುತ್ತಿರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು.
ನಿಮಗೆ ಕಾಳಜಿಯಿರುವುದನ್ನು ಮಾಡಲು ನೀವು ನಿಜವಾಗಿಯೂ ಬದ್ಧರಾಗಿದ್ದರೆ, ಇಡೀ ಜಗತ್ತು ನಿಮಗೆ ಬೆಂಬಲವನ್ನು ನೀಡುವುದು.
ಜಗತ್ತಿನಲ್ಲಿ ನಾವು ಏನಾಗಿದ್ದೇವೆ ಎಂಬುದು ನಾವಿರುವ ಕಾಲಮಾನ ಮತ್ತು ಸನ್ನಿವೇಶಗಳಿಂದ ರೂಪಿಸಲ್ಪಡುತ್ತದೆ. ಆದರೆ ನಮ್ಮ ಅಂತರಂಗದಲ್ಲಿ ನಾವು ಏನಾಗಿದ್ದೇವೆ ಎಂಬುದು ಎಂದಿಗೂ ಈ ವಿಷಯಗಳಿಂದ ರೂಪಿಸಲ್ಪಡಬಾರದು.
ಜೀವನಕ್ಕಿಂತ ಮಿಗಿಲಾದ ಧ್ಯೇಯವಿಲ್ಲ.
ಹತ್ತಲು ಯಾವಾಗಲೂ ಇನ್ನೊಂದು ಮೆಟ್ಟಿಲು ಇದ್ದೇ ಇದೆ. ಜೀವನವು ಜೀವಿಸಲು ಅರ್ಹವಾಗಿರುವುದು ಅದಕ್ಕೇ.
ನಿಮ್ಮ ಪ್ರಜ್ಞಾಶಕ್ತಿಯು ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದರೆ, ನೀವು ನಿಮ್ಮೊಳಗೆ ತೊಳಲಾಟವನ್ನು ಉಂಟುಮಾಡಿಕೊಳ್ಳುತ್ತಿರಲಿಲ್ಲ. ನಿಮ್ಮೊಳಗೆ ನೀವು ಅತ್ಯುತ್ತಮವಾದ ಸ್ಥಿತಿಯನ್ನು ಉಂಟುಮಾಡಿಕೊಳ್ಳುತ್ತಿದ್ದಿರಿ, ಮತ್ತು ಹೊರಗಡೆ ನಿಮ್ಮ ಕೈಲಾದಷ್ಟನ್ನು ಮಾಡುತ್ತಿದ್ದಿರಿ.
ಜೀವನದಲ್ಲಿ ನೀವು ಎಷ್ಟು ಗಾಢವಾಗಿ ತೊಡಗಿದ್ದೀರೋ ಜೀವನದ ನಿಮ್ಮ ಅನುಭವವು ಅಷ್ಟೇ ಗಾಢವಾಗಿರುತ್ತದೆ.
ಇಂದು ನೀವು ಹೇಗೆ ಯೋಚಿಸುತ್ತಿದ್ದೀರಿ, ಹೇಗೆ ಭಾವಿಸುತ್ತಿದ್ದೀರಿ, ಮತ್ತು ಜೀವನವನ್ನು ಹೇಗೆ ಗ್ರಹಿಸುತ್ತಿದ್ದೀರಿ ಎಂಬುದು ನಿಮ್ಮ ನಾಳೆಯನ್ನು ನಿರ್ಧರಿಸುತ್ತದೆ.