Main Centers
International Centers
India
USA
Sadhguru Quotes
FILTERS:
SORT BY:
Clear All
ಜೀವನವು ಸುಂದರವಾಗಿರುವುದು ಅದು ಸಮತೋಲನವನ್ನು ಹೊಂದಿದ್ದಾಗ ಮಾತ್ರ.
ಸಾಧನಗಳಲ್ಲಿ ಅತ್ಯಂತ ಪವಾಡಸದೃಶವಾದುದು ಕಂಪ್ಯೂಟರೋ, ಕಾರೋ, ಅಥವಾ ಗಗನನೌಕೆಯೋ ಅಲ್ಲ, ಬದಲಿಗೆ ಮಾನವನ ಮನಸ್ಸು. ಆದರೆ ನೀವದನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕಷ್ಟೆ.
ದಾರಿಯಲ್ಲಿ ಮುನ್ನಡೆಯಲು, ನೀವು ಗಮನ ಹರಿಸಬೇಕಿರುವುದು ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದರ ಮೇಲಷ್ಟೆ, ನೀವು ಎಲ್ಲಿಂದ ಬಂದಿರಿ ಎಂಬುದರ ಮೇಲೆಯಲ್ಲ.
ನಿಮಗೆ ಯಶಸ್ಸು ಬೇಕಿದ್ದರೆ, ಮೊಟ್ಟಮೊದಲ ವಿಷಯವೆಂದರೆ ನೀವು ಸ್ವತಃ ಅದಕ್ಕೆ ಒಂದು ಅಡಚಣೆಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
ನಿಮ್ಮ ಮಾನವೀಯತೆಯು ಉಕ್ಕಿ ಹರಿಯುತ್ತಿದ್ದರೆ, ನೀವು ಸುತ್ತಲಿನ ಜೀವಗಳಿಗಾಗಿ ಸಹಜವಾಗಿಯೇ ಮಿಡಿಯುತ್ತೀರಿ. ಇದು ನೈತಿಕತೆಯಲ್ಲ. ಇದು ಮನುಷ್ಯ ಹೃದಯದ ಸ್ವಭಾವವೇ ಆಗಿದೆ.
‘ಕರ್ಮ’ ಎಂದರೆ ನೀವೇ ನಿಮ್ಮ ಬದುಕಿನ ನಿರ್ಮಾತೃ ಎಂದರ್ಥ.
ಮನುಷ್ಯರು ತಮಗೆ ತಾವೇ ಅತಿಯಾದ ಪ್ರಾಮುಖ್ಯತೆ ಕೊಟ್ಟುಕೊಳ್ಳುತ್ತಿದ್ದಾರೆ. ನಾವು ಇಲ್ಲಿ ಘಟಿಸುತ್ತಿರುವುದರ ಒಂದು ಸಣ್ಣ ಭಾಗವಷ್ಟೆ.
ಜಗತ್ತು ನಿಮ್ಮತ್ತ ಏನನ್ನು ಎಸೆಯುತ್ತದೆ ಎಂಬುದನ್ನು ನೀವು ನಿಯಂತ್ರಿಸಲಾರಿರಿ. ಆದರೆ ಅದರಿಂದ ನೀವು ಏನನ್ನು ಮಾಡಿಕೊಳ್ಳುತ್ತೀರಿ ಎಂಬುದು ನೂರಕ್ಕೆ ನೂರು ನಿಮ್ಮ ಕೈಯಲ್ಲಿದೆ. ಶ್ರೀರಾಮನು ಇದಕ್ಕೊಂದು ರತ್ನಪ್ರಾಯ ನಿದರ್ಶನ.
ವ್ಯಕ್ತಿಗತ ಗಡಿಗಳು ಬೇಕಿರುವುದು ನಿಮ್ಮ ದೇಹಕ್ಕೆ ಮಾತ್ರ. ನಿಮ್ಮ ಕುರಿತಾದ ಬೇರೆಲ್ಲಾ ವಿಷಯಗಳೂ ‘ವಿಶ್ವಗತ’ವಾಗಿರಬಹುದು.
ಬೇರೆಲ್ಲಾ ಜೀವಿಗಳೂ ಭೂಮಿತಾಯಿಯ ಒಳಿತಿಗಾಗಿ ಕಾರ್ಯಗೈಯುತ್ತಿವೆ. ಪರಿವರ್ತನೆ ಹೊಂದಬೇಕಿರುವುದು ನಾವು ಮನುಷ್ಯರಷ್ಟೆ.
ನಿಮ್ಮ ಜೀವನದ ಅನುಭವವು ಅವಲಂಬಿಸಿರುವುದು ನಿಮ್ಮ ಸುತ್ತ ಯಾರು ಅಥವಾ ಏನಿದೆ ಎಂಬುದನ್ನಲ್ಲ, ಬದಲಿಗೆ ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು.
ಈ ಜಗತ್ತಿಗಾಗಿ ನೀವು ಮಾಡಬಹುದಾದ ಅತ್ಯುತ್ತಮ ವಿಷಯವೆಂದರೆ ಸಂತೋಷಭರಿತ ಮತ್ತು ಆನಂದಭರಿತ ಮನುಷ್ಯರಾಗುವುದು.