Main Centers
International Centers
India
USA
Sadhguru Quotes
FILTERS:
SORT BY:
Clear All
ಈ ದೇಹವು ಭೂಮಿತಾಯಿಯಿಂದ ಪಡೆದ ಒಂದು ಸಾಲವಷ್ಟೆ. ಒಂದು ದಿನ ಈ ಸಾಲವನ್ನು ಮರುಪಾವತಿಸಬೇಕಾಗುತ್ತದೆ.
ಅಜ್ಞಾನವೇ ಆನಂದ ಎಂದಾದರೆ, ಇಷ್ಟು ಹೊತ್ತಿಗೆ ಇಡೀ ಪ್ರಪಂಚ ಆನಂದದಲ್ಲಿ ತೇಲಾಡುತ್ತಾ ಇರಬೇಕಾಗಿತ್ತು.
ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಲು ಬಯಸುವವರು ಎಂದಿಗೂ ಹಾರುವುದಿಲ್ಲ.
ಏನನ್ನಾದರೂ ನೀವು ಇಷ್ಟಪಟ್ಟಾಗ ಅಥವಾ ದ್ವೇಷಿಸಿದಾಗ, ನೀವದನ್ನು ಅದಿರುವಂತೆಯೇ ನೋಡಲಾರಿರಿ.
ನೀವು ಯೋಗವನ್ನು ನಿಮ್ಮ ಬೆನ್ನುನೋವನ್ನು ಗುಣಪಡಿಸಲು ಬಳಸಬಹುದು, ಅಥವಾ ನಿಮ್ಮ ಏಕಾಗ್ರತೆ ಮತ್ತು ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸಲು ಬಳಸಬಹುದು – ಅಥವಾ ನೀವದನ್ನು ದೈವಿಕತೆಗೆ ಒಂದು ಏಣಿಯಾಗಿ ಬಳಸಬಹುದು.
ಪ್ರೀತಿ ಎಂಬುದು ನೀವು ‘ಮಾಡು’ವ ವಿಷಯವಲ್ಲ – ಆದರೆ ನೀವು ಪ್ರೀತಿಯೇ ‘ಆಗ’ಬಲ್ಲಿರಿ.
ಭಾವನೆ ಎಂಬುದು ಜೀವನದ ರಸ. ನಿಯಂತ್ರಣ ತಪ್ಪಿದಾಗ, ಅದು ಹುಚ್ಚಾಗುತ್ತದೆ.
ನಿಮ್ಮ ವಿಧಿಯನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಕೆಂದಿದ್ದರೆ, ಮೊಟ್ಟಮೊದಲು ನಿಮ್ಮ ದೇಹ-ಮನಸ್ಸುಗಳನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಕು.
ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಒಂದು ಪಯಣದಂತೆ – ನಿರಂತರ ಬದಲಾವಣೆ, ಯಾವಾಗಲೂ ಹೊಚ್ಚಹೊಸ ಪ್ರದೇಶ.
ಗುರು ಪೂರ್ಣಿಮೆಯು ಕೇವಲ ಒಂದು ಹಬ್ಬವಲ್ಲ – ಅದು ವಿಕಾಸ ಹೊಂದುವತ್ತ ನಿಮ್ಮ ಬಾಧ್ಯತೆಯ ಸಂಕೇತ. ನಿಮ್ಮ ಜೀವನವನ್ನು ನೀವು ಹೇಗೆ ಅನುಭವಿಸುತ್ತೀರಿ ಎಂಬುದು ನಿರ್ಧರಿತವಾಗುವುದು ನಿಮ್ಮಿಂದಲೇ.ನೀವು ಪರಮಮುಕ್ತಿಯನ್ನು ಅರಿಯುವಂತಾಗಲಿ. ಗುರು ಅನುಗ್ರಹವು ನಿಮ್ಮ ಮೇಲಿದೆ.ಪ್ರೀತಿ ಮತ್ತು ಆಶೀರ್ವಾದಗಳು,
ಸಾಧ್ಯತೆ ಮತ್ತು ವಾಸ್ತವತೆಗಳ ನಡುವೆ ಒಂದು ಅಂತರವಿದೆ. ಈ ಅಂತರವನ್ನು ಕ್ರಮಿಸುವ ಧೈರ್ಯ ಮತ್ತು ಬದ್ಧತೆ ನಿಮ್ಮಲ್ಲಿದೆಯೇ?
ಅಸ್ತಿತ್ವದಲ್ಲಿ ಏಕತೆಯೂ, ಮತ್ತು ಎಲ್ಲ ಜೀವಿಗಳಲ್ಲಿ ಅನನ್ಯತೆಯೂ ಇದೆ. ಇದನ್ನು ಗುರುತಿಸಿ ಆನಂದಿಸುವುದೇ ಅಧ್ಯಾತ್ಮದ ಸಾರಸತ್ತ್ವ.