Main Centers
International Centers
India
USA
Sadhguru Quotes
FILTERS:
SORT BY:
Clear All
ನಿಮ್ಮ ಜೊತೆ ಏನೇ ನಡೆದರೂ, ಅದನ್ನು ನೀವೊಂದು ಶಾಪವಾಗಿ ನೋಡಿ ನರಳಬಹುದು, ಅಥವಾ ಒಂದು ವರವಾಗಿ ನೋಡಿ ಅದನ್ನು ಉಪಯೋಗಪಡಿಸಿಕೊಳ್ಳಬಹುದು.
ಬದುಕನ್ನು ಸಮೃದ್ಧವೂ, ಧನ್ಯವೂ ಆಗಿಸುವುದು ನೀವೆಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಬದುಕನ್ನು ಎಷ್ಟು ಆಳವಾಗಿ ಅನುಭವಿಸಿದಿರಿ ಎಂಬುದು.
ಮಾನವ ಪ್ರಜ್ಞೆಯನ್ನು ಮೇಲೇರಿಸುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಮುಖ್ಯವಾಗಿದೆ. ಆಗಷ್ಟೆ ತಂತ್ರಜ್ಞಾನವು ವಿನಾಶದ ಸಾಧನವಾಗದೆ, ಸಶಕ್ತತೆಯ ಸಾಧನವಾಗುವುದು.
ನಿಮಗೆ ನಿಜವಾಗಿಯೂ ಕಾಳಜಿಯಿರುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ, ನಿಮ್ಮ ಇಡೀ ಬದುಕೇ ರಜಾದಂತಿರುತ್ತದೆ.
ಯಾವ ಕೆಲಸವೂ ಒತ್ತಡದಿಂದ ಕೂಡಿಲ್ಲ. ಅದನ್ನು ಒತ್ತಡವಾಗಿಸುವುದು ನಿಮ್ಮ ದೇಹ, ಮನಸ್ಸು, ಮತ್ತು ಭಾವನೆಗಳನ್ನು ನಿಭಾಯಿಸುವಲ್ಲಿನ ನಿಮ್ಮ ಅಸಾಮರ್ಥ್ಯ.
ಜೀವನ್ಮರಣಗಳು ಉಚ್ಛ್ವಾಸ-ನಿಶ್ವಾಸಗಳಂತೆ. ಅವು ಸದಾ ಒಟ್ಟಾಗಿಯೇ ಇರುತ್ತವೆ.
ನೀವು ಸೃಷ್ಟಿಯ ತುಣುಕೆಂಬುದು ನಿಜವಾಗಿದ್ದರೆ, ಸೃಷ್ಟಿಕರ್ತನು ಖಂಡಿತವಾಗಿಯೂ ನಿಮ್ಮೊಳಗೆ ಅಂತರ್ಗತನಾಗಿದ್ದಾನೆ. ಅದನ್ನು ಅರಿಯಲು ನೀವು ಅಂತರ್ಮುಖರಾಗಬೇಕಷ್ಟೆ.
From amoeba to elephant, all creatures nourish the ecology. Only we humans are in destruction mode, and we think we are brilliant.
ಧ್ಯಾನ ಎಂಬುದು ನಿಮ್ಮ ಅಸ್ತಿತ್ವದ ಸೊಬಗನ್ನು ಅರಿಯಲು ಒಂದು ಸಾಧನ.
ನೀವು ಏನನ್ನೇ ಮಾಡಿದರೂ, ಅದನ್ನು ಮನಃಪೂರ್ವಕವಾಗಿ ಮಾಡಬಹುದು, ಅಥವಾ ಒಲ್ಲದ ಮನಸ್ಸಿನಿಂದ ಮಾಡಬಹುದು. ಮನಃಪೂರ್ವಕವಾಗಿ ಮಾಡಿದರೆ, ಅದು ಸ್ವರ್ಗವಾಗುವುದು. ಒಲ್ಲದ ಮನಸ್ಸಿನಿಂದ ಮಾಡಿದರೆ, ಅದು ನರಕವಾಗುವುದು.
ಇಂದ್ರಿಯಸುಖವು ಸಂತೋಷದ ನೆರಳಷ್ಟೆ. ನಿಮ್ಮೊಳಗೆ ಸಂತೋಷವು ಇಲ್ಲದಿದ್ದಾಗ, ನೀವು ಸುಖವನ್ನು ಅರಸುತ್ತೀರಿ.
ನಿಮ್ಮ ಬದುಕು ನಿಮ್ಮದೇ ರಚನೆ. ದೇವರು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.