Wisdom
FILTERS:
SORT BY:
ಮನುಷ್ಯರಾಗಿರುವುದರ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ನಾವು ತೆಗೆದುಕೊಳ್ಳಬೇಕಾದ ಅತ್ಯಗತ್ಯವಾದ ಹೆಜ್ಜೆಯೆಂದರೆ, ಕೊಡುಕೊಳ್ಳುವಿಕೆಯ ಸ್ತರವನ್ನು ಮೀರಿಹೋಗಿ ಅತೀತವಾದುದರೆಡೆಗೆ ಸಾಗುವುದು.
ನಿಮಗೆ ಪರಿವರ್ತನೆ ಬೇಕಿದ್ದರೆ, ಅದರ ಹೆಚ್ಚಿನ ಭಾಗ ಆಗಬೇಕಾದುದು ದೇಹದಲ್ಲಿ. ಏಕೆಂದರೆ ದೇಹವು ಮನಸ್ಸಿಗಿಂತ ಅದೆಷ್ಟೋ ಪಟ್ಟು ಹೆಚ್ಚು ನೆನಪುಗಳನ್ನು ಹೊತ್ತಿದೆ.
ನಿಮಗೆ ನಿಮ್ಮ ಸ್ವರೂಪದ ಅರಿವಿಲ್ಲದಿದ್ದಾಗ ಮಾತ್ರ ನಿಮ್ಮ ಕುರಿತಾದ ಇತರರ ಅಭಿಪ್ರಾಯಗಳು ನಿಮಗೆ ಮುಖ್ಯವಾಗುತ್ತದೆ.
ಧನ್ಯತೆಯನ್ನು ಹೊಂದಲು ಎಲ್ಲ ವಿಧಾನಗಳನ್ನೂ ಪ್ರಯತ್ನಿಸಿ, ಯಾವುದೂ ಕೆಲಸ ಮಾಡುವುದಿಲ್ಲ ಎಂದು ನಿಮಗೆ ಮನವರಿಕೆಯಾಗಿದ್ದರೆ, ಅದರರ್ಥ ನೀವು ‘ಮತ್ತೀಗ, ಯೋಗ’ ಎಂಬ ಹಂತವನ್ನು ತಲುಪಿದ್ದೀರಿ.
‘ಯೂಸ್ ಅಂಡ್ ತ್ರೋ’ ಮನೋಭಾವವನ್ನು ತೊಡೆದುಹಾಕುವುದು ಕೇವಲ ಮಾಲಿನ್ಯವನ್ನು ಕಡಿಮೆ ಮಾಡುವ ಬಗ್ಗೆಯಲ್ಲ – ಅದು ಸಕಲ ಸೃಷ್ಟಿಯೆಡೆಗೆ ಆದರವನ್ನು ಹೊಂದುವ ಬಗ್ಗೆಯಾಗಿದೆ. ಎಲ್ಲವೂ ಬರುವುದು ಈ ಜೀವಂತ ಭೂಮಿಯಿಂದ. ಅದನ್ನು ಜವಾಬ್ದಾರಿಯಿಂದ ಬಳಸೋಣ.
ದೈವೀಕತೆ ಎಂಬುದು ಸ್ವರ್ಗದಿಂದ ಇಳಿದು ಬಂದ ವಿಷಯವಲ್ಲ. ಅದು ನೀವು ಉನ್ನತ ಸಾಧ್ಯತೆಯಾಗಿ ವಿಕಾಸಹೊಂದುವತ್ತ ಏರಬಹುದಾದ ಒಂದು ಏಣಿ.
ಜೀವನವು ಒಂದು ವರವೂ ಅಲ್ಲ, ಶಾಪವೂ ಅಲ್ಲ. ಅದೊಂದು ವಿದ್ಯಮಾನ ಅಷ್ಟೆ. ನೀವು ಅದನ್ನು ಚೆನ್ನಾಗಿ ನಿಭಾಯಿಸಿದರೆ, ಅದು ಸುಂದರವೂ ಅದ್ಭುತವೂ ಆಗುತ್ತದೆ. ಕೆಟ್ಟದಾಗಿ ನಿಭಾಯಿಸಿದರೆ ಅದು ವಿರೂಪಗೊಂಡು ಒಂದು ಯಾತನೆಯಾಗುತ್ತದೆ.
ಸಂಪ್ರದಾಯ ಎಂದರೆ ಹಿಂದಿನ ಪೀಳಿಗೆಗಳನ್ನು ಸುಮ್ಮನೆ ಅನುಕರಿಸುವುದಲ್ಲ. ಅದು ಅವರ ಅನುಭವಗಳಿಂದ ಕಲಿಯುವ ಬಗ್ಗೆಯಾಗಿದೆ.
ಪ್ರತಿಕ್ರಿಯೆಯು ನಿಮ್ಮ ಹಿಂದಿನ ನೆನಪುಗಳು ಮತ್ತು ತೀರ್ಮಾನಗಳಿಂದ ಹೊಮ್ಮುವಂತದ್ದು. ಸ್ಪಂದನೆ ಎಂಬುದು ಈ ಕ್ಷಣದಲ್ಲಿ ನಡೆಯುವ ಪ್ರಜ್ಞಾಪೂರ್ವಕ ಪ್ರಕ್ರಿಯೆ.
ಎಲ್ಲ ಚಲನವಲನಗಳು ಇರುವುದು ಅಸ್ತಿತ್ವದ ಮೇಲ್ಮೈಯಲ್ಲಿ. ಅದರ ಅಂತರಾಳದಲ್ಲಿರುವ ಸತ್ಯವು ಯಾವಾಗಲೂ ಅಚಲವಾಗಿದೆ.
ಧ್ಯಾನದ ವಿಷಯಕ್ಕೆ ಬಂದಾಗ, ಪ್ರಶ್ನೆ ಸಾಮರ್ಥ್ಯದ್ದಲ್ಲ, ಬದಲಿಗೆ ಹೃತ್ಪೂರ್ವಕತೆಯದ್ದು.
ನೀವು ಹೆಚ್ಚು ಭದ್ರತೆಯನ್ನು ಹಂಬಲಿಸಿದಷ್ಟೂ ಹೆಚ್ಚು ಅಭದ್ರತೆಯ ಭಾವನೆಯನ್ನು ಹೊಂದುವಿರಿ. ನಿಜವಾದ ಭದ್ರತೆಯಿರುವುದು ನೀವು ನಿಮ್ಮೊಳಗೆ ಅನಿರ್ಬಂಧಿತವಾದ ನಿರಾಳತೆಯ ಸ್ಥಿತಿಯಲ್ಲಿದ್ದಾಗ ಮಾತ್ರ.