Wisdom
FILTERS:
SORT BY:
ಧನ್ಯತೆಯನ್ನು ಹೊಂದಲು ಎಲ್ಲ ವಿಧಾನಗಳನ್ನೂ ಪ್ರಯತ್ನಿಸಿ, ಯಾವುದೂ ಕೆಲಸ ಮಾಡುವುದಿಲ್ಲ ಎಂದು ನಿಮಗೆ ಮನವರಿಕೆಯಾಗಿದ್ದರೆ, ಅದರರ್ಥ ನೀವು ‘ಮತ್ತೀಗ, ಯೋಗ’ ಎಂಬ ಹಂತವನ್ನು ತಲುಪಿದ್ದೀರಿ.
ಯೋಚನೆಗಳು ಮತ್ತು ಭಾವನೆಗಳು ಪ್ರತ್ಯೇಕ ವಿಷಯಗಳಲ್ಲ. ನೀವು ಹೇಗೆ ಯೋಚಿಸುತ್ತೀರೋ ಹಾಗೇ ಭಾವಿಸುತ್ತೀರಿ.
ಎಲ್ಲಿಯವರೆಗೆ ನಾವು ಮತ, ಜನಾಂಗ, ಜಾತಿ, ಲಿಂಗ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ವಿಭಜಿತರಾಗಿರುತ್ತೇವೋ ಅಲ್ಲಿಯವರೆಗೆ ಮಾನವತೆಗೆ ನಿಜವಾದ ಯಶಸ್ಸು ಎಂಬುದು ಇರುವುದಿಲ್ಲ.
ಸಂಪ್ರದಾಯ ಎಂದರೆ ಹಿಂದಿನ ಪೀಳಿಗೆಗಳನ್ನು ಸುಮ್ಮನೆ ಅನುಕರಿಸುವುದಲ್ಲ. ಅದು ಅವರ ಅನುಭವಗಳಿಂದ ಕಲಿಯುವ ಬಗ್ಗೆಯಾಗಿದೆ.
Every Human Being has a certain Genius within them; but they often destroy it by trying to be like someone else.
ನೀವು ಪ್ರೀತಿಯಲ್ಲಿ ನಿಲ್ಲಲಾರಿರಿ, ಪ್ರೀತಿಯಲ್ಲಿ ಹತ್ತಲಾರಿರಿ, ಪ್ರೀತಿಯಲ್ಲಿ ಹಾರಲಾರಿರಿ. ನೀವು ಪ್ರೀತಿಯಲ್ಲಿ ‘ಬೀಳ’ಬಹುದು ಅಷ್ಟೆ. ಅದು ಮೇಲ್ಮುಖವಾಗಿ ಬೀಳುವ ಒಂದು ಪ್ರಕ್ರಿಯೆ.
ನೀವು ಹೆಚ್ಚು ಭದ್ರತೆಯನ್ನು ಹಂಬಲಿಸಿದಷ್ಟೂ ಹೆಚ್ಚು ಅಭದ್ರತೆಯ ಭಾವನೆಯನ್ನು ಹೊಂದುವಿರಿ. ನಿಜವಾದ ಭದ್ರತೆಯಿರುವುದು ನೀವು ನಿಮ್ಮೊಳಗೆ ಅನಿರ್ಬಂಧಿತವಾದ ನಿರಾಳತೆಯ ಸ್ಥಿತಿಯಲ್ಲಿದ್ದಾಗ ಮಾತ್ರ.
ಜ್ಞಾನ, ಅರಿವು ಮತ್ತು ವಿವೇಕಗಳ ನಡುವೆ ವ್ಯತ್ಯಾಸವಿದೆ. ಜ್ಞಾನವನ್ನು ಶೇಖರಿಸಬಹುದು, ಅರಿವು ಎಂಬುದು ಒಂದು ಸಾಕ್ಷಾತ್ಕಾರ, ಮತ್ತು ವಿವೇಕವು ನೀವು ಸಂಪಾದಿಸುವಂತದ್ದು.
ಎಲ್ಲರೂ ಆಧ್ಯಾತ್ಮಿಕ ಜಿಜ್ಞಾಸುಗಳೇ. ಕೆಲವರು ಬೇಗನೇ ರಾಜಿಯಾದರೆ ಇನ್ನು ಕೆಲವರು ಪಟ್ಟು ಬಿಡುವುದಿಲ್ಲ ಅಷ್ಟೆ.