Main Centers
International Centers
India
USA
Wisdom
FILTERS:
SORT BY:
ಆನಂದ ಎಂಬುದು ಒಬ್ಬ ವ್ಯಕ್ತಿಯ ಗುಣವಷ್ಟೆ ಅಲ್ಲ. ಅದು ಪ್ರಕೃತಿಯ ಸ್ವರೂಪವೇ ಆಗಿದೆ. ಈ ಸಂಸ್ಕೃತಿಯಲ್ಲಿ ನಾವು ‘ಬ್ರಹ್ಮಾನಂದ’ ಎನ್ನುತ್ತೇವೆ. ಅದರರ್ಥ ಸಮಸ್ತ ಸೃಷ್ಟಿಯೇ ಆನಂದಮಯವಾಗಿದೆ.
ಈ ಗಣೇಶ ಚತುರ್ಥಿಯಂದು, ವಿಘ್ನನಿವಾರಕನು ನಿಮ್ಮ ಬೆಳವಣಿಗೆ ಮತ್ತು ಪರಮಮುಕ್ತಿಯೆಡೆಗಿನ ದಾರಿಯನ್ನು ತಿಳಿಗೊಳಿಸಲಿ.
ನೀವು ಯಾರೇ ಅಥವಾ ಏನೇ ಆಗಿರಿ, ಪ್ರತಿ ಮನುಷ್ಯನಲ್ಲೂ, ಅವರು ಈಗ ಏನಾಗಿರುವರೋ ಅದಕ್ಕಿಂತ ಹೆಚ್ಚಿನದ್ದೇನೋ ಆಗಲು ಸದಾ ಬಯಸುತ್ತಲೇ ಇರುವ ಏನೋ ಒಂದು ತುಡಿತವಿದೆ.
ನೀವು ಲಕ್ಷ ಸುಳ್ಳುಗಳನ್ನು ಹುಟ್ಟುಹಾಕಬಹುದು, ಆದರೆ ಇರುವುದು ಒಂದೇ ಪರಮಸತ್ಯ.
ನಿರಾಳತೆಯ ಭಾವವು ನಿಮ್ಮಲ್ಲಿ ಶಾಂತಿಯ ಶಕ್ತಿಯನ್ನು ತರುತ್ತದೆ.
ನಿಮ್ಮ ಸುತ್ತಲಿರುವ ಜನರಿಗೆ ನೀವು ಆದಷ್ಟು ಹೆಚ್ಚು ಉಪಯುಕ್ತರಾಗುವುದು ಹೇಗೆಂದು ನೋಡಿ – ಆಗ ನಿಮ್ಮ ಕಾರ್ಯಗಳು ಸಹಜವಾಗಿಯೇ ಸಮುಚಿತವಾಗಿರುವುವು.
ನಿಮ್ಮ ಸಂಬಂಧಗಳು ಇನ್ನೊಬ್ಬರಿಂದ ಸಂತೋಷವನ್ನು ಹಿಂಡುವ ಬಗ್ಗೆಯಾಗಿರಬಾರದು, ಬದಲಿಗೆ ನಿಮ್ಮ ಸಂತೋಷವನ್ನು ಹಂಚುವ ಬಗ್ಗೆಯಾಗಿರಬೇಕು. ಹೀಗಾಯಿತೆಂದರೆ, ಯಾರೊಂದಿಗೇ ಆದರೂ ನೀವು ಅದ್ಭುತ ಸಂಬಂಧಗಳನ್ನು ಹೊಂದುತ್ತೀರಿ.
ಯೋಗಾಭ್ಯಾಸಗಳು ಊಟವಿದ್ದಂತೆ. ಊಟ ಕೆಲಸ ಮಾಡುವುದು ಅದನ್ನು ತಿಂದವರಿಗೆ ಮಾತ್ರ. ಯೋಗಾಭ್ಯಾಸಗಳು ಕೆಲಸ ಮಾಡುವುದು ಅದನ್ನು ಅಭ್ಯಸಿಸಿದವರಿಗೆ ಮಾತ್ರ.
ಬೆಳಿಗ್ಗೆ ಎದ್ದಾಗ ನೀವು ಮಾಡಬೇಕಾದ ಮೊದಲ ವಿಷಯವೆಂದರೆ ಮುಗುಳ್ನಗುವುದು. ನೀವು ಜೀವಂತವಾಗಿದ್ದೀರಿ! ಅದು ಅತ್ಯಂತ ದೊಡ್ಡ ಆಶೀರ್ವಾದವಲ್ಲವೇ. ಮುಗುಳ್ನಗಲು ಇನ್ನೇನು ಬೇಕು.
ಕರ್ಮ ನಿಮ್ಮ ಬಂಧನವಾಗಿದ್ದರೂ, ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ, ಕರ್ಮವು ನಿಮ್ಮ ಮುಕ್ತಿಯ ಮೆಟ್ಟಿಲೂ ಆಗಬಹುದು.
ನೀವು ಎಲ್ಲವನ್ನೂ ನಿಮ್ಮಲ್ಲಿ ಒಳಗೂಡಿಸಿಕೊಂಡಿದ್ದರೆ, ‘ಜೀವನ’ ಎಂಬುದು ನಡೆಯುವುದು. ನೀವು ಪ್ರತ್ಯೇಕತೆಯ ಭಾವದಲ್ಲಿದ್ದರೆ, ಆಗ ನಡೆಯುವುದು ನಿಮ್ಮ ಮಾನಸಿಕ ನಾಟಕವಷ್ಟೆ.
ಮನುಷ್ಯನಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯವನ್ನು ಪರಿಗಣಿಸಿದರೆ, ಇದು ಬಹಳ ಚುಟುಕಾದ ಬದುಕು.