Main Centers
International Centers
India
USA
Wisdom
FILTERS:
SORT BY:
ಪ್ರತಿದಿನ ಅಲ್ಲದಿದ್ದರೂ ತಿಂಗಳಿಗೆ ಒಮ್ಮೆಯಾದರೂ ಪರಿಶೀಲಿಸಿಕೊಳ್ಳಿ – ನಿಮ್ಮಲ್ಲಿ ರೂಪಾಂತರಣೆ ಆಗುತ್ತಿದೆಯೇ, ನೀವು ಉತ್ತಮ ಮನುಷ್ಯರಾಗುತ್ತಿದ್ದೀರಾ ಎಂದು.
ಧ್ಯಾನ ಎಂದರೆ, ಹೊರಗಿನ ಪರಿಸ್ಥಿತಿ ಏನೇ ಆಗಿರಲಿ, ನೀವು ನಿಮಗೆ ಬೇಕಿರುವ ಯಾವುದೇ ಅನುಭವವನ್ನು ಉಂಟುಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು. ಇಲ್ಲಿ ಕುಳಿತೇ ನೀವು ನಿಮ್ಮ ಜೀವವ್ಯವಸ್ಥೆಯನ್ನು ಆನಂದಭರಿತವಾಗಿಸಬಹುದು.
ನೀವು ಬದುಕನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತಿದ್ದೀರೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಎಂಬುದು ನಿಮ್ಮ ಜೀವನದ ಸ್ವರೂಪ, ಅನುಭವ, ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತದೆ.
ನಿಮ್ಮ ಸಿಟ್ಟು ನಿಮ್ಮದೇ ಸಮಸ್ಯೆ – ಅದನ್ನು ನಿಮ್ಮ ಸುತ್ತಲಿನ ಜಗತ್ತಿಗೆ ನೀಡಬೇಡಿ.
ಸದಾ ಯುವಕರಾಗಿರುವುದು ಎಂದರೆ ನೀವೆಂದಿಗೂ ‘ಜೀವನವೆಂದರೆ ಇಷ್ಟೆ’ ಎಂದು ನಿಮಗೆ ನೀವೇ ತೆರೆ ಎಳೆದುಕೊಳ್ಳುವುದಿಲ್ಲ – ನೀವೊಂದು ಮುಕ್ತ ಜೀವವಾಗಿರುತ್ತೀರಿ. ಸದಾ ಬೆಳೆಯಲು, ಕಲಿಯಲು, ಮತ್ತು ಜೀವನಕ್ಕೆ ಮುಕ್ತರಾಗಿರಲು ಸಿದ್ಧರಿರುತ್ತೀರಿ.
ಪರಸ್ಪರ ಕಾಳಜಿ ಮತ್ತು ಪೋಷಣೆಯ ಪರಿಸರವನ್ನು ನಿರ್ಮಿಸಿದರೆ ಮಾತ್ರ ಜನರು ಜೊತೆಯಲ್ಲಿ ಚೆನ್ನಾಗಿ ಬಾಳಬಲ್ಲರು, ಪರಸ್ಪರರ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದರಿಂದ ಅಲ್ಲ.
ಹೃದಯದಲ್ಲಿ ಒಳಗೂಡಿಸಿಕೊಳ್ಳುವ ಭಾವ ಇಲ್ಲದಿದ್ದರೆ, ಜೀವನದಲ್ಲಿ ಸಹಜವಾದ ಏಕತೆ ಇರುವುದಿಲ್ಲ. ಈ ಏಕತೆಯ ಕೊರತೆಯಿಂದಾಗಿ ಮನುಷ್ಯರು ಕೊನೆಯಿಲ್ಲದಂತೆ ನರಳುತ್ತಾರೆ.
ಜೀವ ಇರುವುದು ದೇಹ, ಮನಸ್ಸು, ಅಥವಾ ಭಾವನೆಗಳ ಸೇವೆ ಮಾಡಲು ಅಲ್ಲ. ದೇಹ, ಮನಸ್ಸು, ಮತ್ತು ಭಾವನೆಗಳು ಇರುವುದು ಜೀವದ ಸೇವೆ ಮಾಡಲು.
ಧ್ಯಾನಲಿಂಗವು ದೈವೀಕತೆಯ ಅತ್ಯುನ್ನತ ಸಾಕಾರರೂಪ. ಅದೊಂದು ಜೀವಂತ ಗುರು. ಬೇರೆ ಯಾರೂ ಅಥವಾ ಯಾವುದೂ ಸ್ಪರ್ಶಿಸಲಾರದ ಆಯಾಮಗಳಲ್ಲಿ ಅದು ನಿಮ್ಮನ್ನು ಸ್ಪರ್ಶಿಸುತ್ತದೆ.
ನಿಮ್ಮ ದೇಹ, ಮನಸ್ಸು, ಮತ್ತು ಪ್ರಾಣಶಕ್ತಿಗಳನ್ನು ಸೂಕ್ತವಾಗಿ ಸಿದ್ಧಗೊಳಿಸಿದರೆ, ಕ್ರಮಬದ್ಧವಾಗಿ ಮಾಡುವ ಉಪವಾಸವು ಅಗಾಧ ಪ್ರಯೋಜನಗಳನ್ನು ತರಬಲ್ಲದು.
ಮಕ್ಕಳಿಗೆ ಬೇಕಿರುವುದು ಅವರು ಜೀವನವನ್ನು ಅನುಭವಿಸಲು ಮತ್ತು ಗ್ರಹಿಸಲು ಅಗತ್ಯವಾದ ಪೋಷಣೆ, ಅವರ ಅಂತರ್ಗತ ಬುದ್ದಿಶಕ್ತಿಯನ್ನು ನಾಶಮಾಡುವ ಯಾಂತ್ರಿಕವಾದ ಶಿಕ್ಷಣ ವ್ಯವಸ್ಥೆಯಲ್ಲ.
ಘರ್ಷಣೆಗಳು ಆಗದಂತೆ ನೋಡಿಕೊಳ್ಳಲು ಇರುವ ಏಕೈಕ ದಾರಿಯೆಂದರೆ ಮನುಷ್ಯರು ತಮ್ಮನ್ನು ಮತ್ತು ತಮಗೆ ಸೇರಿದುದನ್ನು ಮೀರಿ ಯೋಚಿಸಲು ಕಲಿಯುವುದು. ನಮ್ಮ ಗಡಿಗಳ ಹೊರಗಿರುವುದು ನಮ್ಮ ಶತ್ರು ಅಥವಾ ಪೈಪೋಟಿ ಆಗಿರಲೇಬೇಕು ಎಂದೇನಿಲ್ಲ.