Wisdom
FILTERS:
SORT BY:
ಯಾವುದು ಮಣ್ಣಿಗೆ ಒಳ್ಳೆಯದೋ ಅದು ನಿಮ್ಮ ದೇಹಕ್ಕೂ ಒಳ್ಳೆಯದು, ಏಕೆಂದರೆ ನಿಮ್ಮ ದೇಹವು ಮಣ್ಣಿನದ್ದೇ ಸಾಕಾರರೂಪ.
ನಮ್ಮ ಸುತ್ತಲಿನ ಜನರು ಸನ್ನಿವೇಶಗಳನ್ನು ಉಂಟುಮಾಡಬಲ್ಲರು ಅಷ್ಟೆ. ಅವನ್ನು ನಾವು ಹೇಗೆ ಅನುಭವಿಸುತ್ತೇವೆ ಎಂಬುದು ಯಾವಾಗಲೂ ನಮ್ಮಿಂದಲೇ ಉಂಟಾಗುವಂತದ್ದು.
ನಿಮ್ಮ ಮನಸ್ಸು ಸಂತುಲಿತವಾಗಿರಬೇಕು, ಆದರೆ ಹೃದಯದಲ್ಲಿ ಹುಚ್ಚಿರಬೇಕು.
ಹೇಡಿತನ ಬರುವುದು ಪರಿಣಾಮಗಳ ಬಗ್ಗೆ ಚಿಂತಿಸುವುದರಿಂದ. ತಮ್ಮ ಕಾರ್ಯಗಳ ಸಂಭಾವ್ಯ ಫಲಿತಾಂಶಗಳ ಬಗ್ಗೆಯೇ ಮೆಲುಕು ಹಾಕುವವರು ತಾವು ಜೀವನದಲ್ಲಿ ಮಾಡಬೇಕಾದುದನ್ನು ಎಂದಿಗೂ ಮಾಡುವುದಿಲ್ಲ.
ಸ್ತ್ರೀಯು ಪುರುಷನಿಗಿಂತ ಕಡಿಮೆಯವಳು ಎಂಬ ವಿಚಾರವು ಅಸಂಬದ್ಧವಾದುದು. ಪುರುಷನು ಸ್ತ್ರೀಯಿಂದಲೇ ಹುಟ್ಟುವವನು. ಹೀಗಿರಬೇಕಾದರೆ ಅವನು ಮೇಲು ಅವಳು ಕೀಳು ಎಂಬುದು ಹೇಗಾಗುತ್ತದೆ.
ನಿಮ್ಮ ಮಕ್ಕಳು ನಿಮ್ಮನ್ನು ಗೌರವಿಸಬೇಕೆಂದು ನಿರೀಕ್ಷಿಸಬೇಡಿ. ನೀವು ಪ್ರೀತಿ ಮತ್ತು ಸ್ನೇಹದ ಬಾಂಧವ್ಯವನ್ನು ಬೆಳೆಸಬೇಕು, ಗೌರವ ಮತ್ತು ಅಧಿಕಾರದ್ದಲ್ಲ.
ನಮ್ಮ ಉದ್ದೇಶ ಈ ಭೂಮಿಯನ್ನೇ ಒಂದು ದೇವಾಲಯವಾಗಿಸುವುದು, ಎಲ್ಲರೂ ಜೀವನದೆಡೆಗೆ ಪೂಜ್ಯಭಾವವನ್ನು ಹೊಂದಿರುವಂತಹ ಸ್ಥಳವಾಗಿಸುವುದು.
ಹೋಳಿಯು ಸಂತಸ, ಉತ್ಸಾಹಗಳೊಂದಿಗೆ ವಸಂತದ ಆಗಮನವನ್ನು ಸಂಭ್ರಮಿಸುವ ಒಂದು ಅದ್ಭುತ ಹಬ್ಬ. ಮತ್ತು ನೀವು ನಿಮ್ಮೊಳಗೆ ಸರಿಯಾದ ರೀತಿಯ ರಾಸಾಯನಿಕ ವ್ಯವಸ್ಥೆಯನ್ನು ಹುಟ್ಟುಹಾಕಲು ಕಲಿತರೆ, ನಿಮ್ಮ ಇಡೀ ಬದುಕನ್ನೇ ನೀವೊಂದು ಸಂಭ್ರಮವಾಗಿಸಬಹುದು.
ನಿಮಗೆ ಒಂದು ವಿಷಯವು ಎಷ್ಟು ಸುಲಭ ಅಥವಾ ಕಷ್ಟವಾಗುತ್ತದೆ ಎಂಬುದು ನೀವು ಎಷ್ಟು ಸಿದ್ಧತೆ ಮಾಡಿಕೊಂಡಿದ್ದೀರಿ ಮತ್ತು ಎಷ್ಟು ಸಮರ್ಥರಾಗಿದ್ದೀರಿ ಎಂಬುದನ್ನು ಅವಲಂಬಿಸಿದೆ.