Main Centers
International Centers
India
USA
Wisdom
FILTERS:
SORT BY:
ಮನುಷ್ಯರು ತಮಗೆ ತಾವೇ ಅತಿಯಾದ ಪ್ರಾಮುಖ್ಯತೆ ಕೊಟ್ಟುಕೊಳ್ಳುತ್ತಿದ್ದಾರೆ. ನಾವು ಇಲ್ಲಿ ಘಟಿಸುತ್ತಿರುವುದರ ಒಂದು ಸಣ್ಣ ಭಾಗವಷ್ಟೆ.
ಜಗತ್ತು ನಿಮ್ಮತ್ತ ಏನನ್ನು ಎಸೆಯುತ್ತದೆ ಎಂಬುದನ್ನು ನೀವು ನಿಯಂತ್ರಿಸಲಾರಿರಿ. ಆದರೆ ಅದರಿಂದ ನೀವು ಏನನ್ನು ಮಾಡಿಕೊಳ್ಳುತ್ತೀರಿ ಎಂಬುದು ನೂರಕ್ಕೆ ನೂರು ನಿಮ್ಮ ಕೈಯಲ್ಲಿದೆ. ಶ್ರೀರಾಮನು ಇದಕ್ಕೊಂದು ರತ್ನಪ್ರಾಯ ನಿದರ್ಶನ.
ಜಗತ್ತಿನಲ್ಲಿ ದಕ್ಷತೆಯಿಂದ ಕಾರ್ಯಗೈಯಲು ಪ್ರಧಾನವಾದ ಅಂಶ ಪುಸ್ತಕಜ್ಞಾನವಲ್ಲ, ಬದಲಿಗೆ ಗ್ರಹಣಶೀಲತೆಯಲ್ಲಿನ ಸ್ಪಷ್ಟತೆ.
ಜೀವನ್ಮರಣಗಳ ಮೂಲಕ ನಿಮ್ಮನ್ನು ಸಾಗಿಸಬಲ್ಲ ಏಕೈಕ ನಿಜವಾದ ಐಶ್ವರ್ಯವೆಂದರೆ ಅನುಭವದ ಅಗಾಧತೆ.
ನಿಮ್ಮ ಜೀವನದ ಅನುಭವವು ಅವಲಂಬಿಸಿರುವುದು ನಿಮ್ಮ ಸುತ್ತ ಯಾರು ಅಥವಾ ಏನಿದೆ ಎಂಬುದನ್ನಲ್ಲ, ಬದಲಿಗೆ ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು.
ಈ ಜಗತ್ತಿಗಾಗಿ ನೀವು ಮಾಡಬಹುದಾದ ಅತ್ಯುತ್ತಮ ವಿಷಯವೆಂದರೆ ಸಂತೋಷಭರಿತ ಮತ್ತು ಆನಂದಭರಿತ ಮನುಷ್ಯರಾಗುವುದು.
ಒಮ್ಮೆ ನೀವು ನರಳಾಟದ ಭಯವನ್ನು ಮೀರಿ ಹೋದಿರೆಂದರೆ, ಸಹಜವಾಗಿಯೇ ನೀವು ಜೀವನವನ್ನು ಸಂಪೂರ್ಣವಾಗಿ ಪರಿಶೋಧಿಸುವಿರಿ.
ಚೈತನ್ಯ ಮತ್ತು ಅರಿವಿನ ಉನ್ನತ ಸ್ತರದೆಡೆಗೆ ಸಾಗುವುದೇ ಯೋಗಾಭ್ಯಾಸಗಳು ಮತ್ತು ಧ್ಯಾನದ ಮೂಲ ಉದ್ದೇಶ.
ನಿಮಗೆ ಯಶಸ್ಸು ಬೇಕಿದ್ದರೆ, ಮೊಟ್ಟಮೊದಲ ವಿಷಯವೆಂದರೆ ನೀವು ಸ್ವತಃ ಅದಕ್ಕೆ ಒಂದು ಅಡಚಣೆಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
ನಿಮಗೆ ಅರಿವಿಲ್ಲದೇ ಇರುವುದರ ಬಗ್ಗೆ ಏನೇನೋ ಊಹಿಸುತ್ತಾ, ‘ಅಂದುಕೊಳ್ಳು’ತ್ತಾ ಹೋದರೆ, ಖಂಡಿತವಾಗಿಯೂ ಅಜ್ಞಾನದಲ್ಲೇ ಇರುತ್ತೀರಿ.
ಮನುಷ್ಯರಾಗಿರುವುದು ಎಂದರೆ ಪ್ರತಿಯೊಂದು ಜೀವಿಯನ್ನೂ ಕೋಮಲವಾದ ದೃಷ್ಟಿಯಿಂದ ನೋಡುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮಗಿಷ್ಟವಿಲ್ಲದ ವಿಷಯಗಳೊಂದಿಗೆ ಸಂತೋಷದಿಂದ ಬದುಕಲು ಕಲಿಯುವುದು ಜೀವನದಲ್ಲೊಂದು ಮಹತ್ತಾದ ಪಾಠ.