ಇತ್ತೀಚಿಗೆ ಹೈದರಾಬಾದ್ ನಲ್ಲಿ ಘೋರ ಕೃತ್ಯವೊಂದು ನಡೆಯಿತು. ಮಹಿಳೆಯೊಬ್ಬರನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು. ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇವೆ. ದೇಶ ಮತ್ತು ವಿಶ್ವದ ಅನೇಕ ಕಡೆಗಳಿಂದ ಇಂತಹ ಸುದ್ದಿಗಳು ಬರುತ್ತಿರುತ್ತವೆ. ಹೈದರಾಬಾದ್ ಪ್ರಕರಣದ ಆರೋಪಿಗಳನ್ನು ಪೋಲಿಸರು ಎನ್ಕೌಂಟರ್ ಮಾಡಿದ್ದಾರೆ. ಹಾಗಿದ್ದರೆ ಅತ್ಯಾಚಾರಿಗಳಿಗೆ ಅದು ತಕ್ಕ ಶಿಕ್ಷೆಯೇ? ಇದು ಆ ಮಹಿಳೆಗೆ ನ್ಯಾಯ ಒದಗಿಸಿದಂತೆಯೇ? ಇಂತಹ ಪ್ರಕರಣಗಳಲ್ಲಿ ನ್ಯಾಯ ಒದಗಿಸುವುದು ಹೇಗೆ? ಒಂದು ದೇಶವಾಗಿ ಇಂತಹ ಘಟನೆಗಳನ್ನು ನಾವು ಹೇಗೆ ನಿಭಾಯಿಸಬೇಕು? ಎಂಬುದು ಅನೇಕರ ಪ್ರಶ್ನೆ. ಕೇಳಿ ಸದ್ಗುರುಗಳ ಅದ್ಭುತ ಉತ್ತರವನ್ನು.