4 ನೇ ದಿನ ಮುಂಜಾನೆ ಮೈಸೂರಿನಿಂದ ಹೊರಟ ಬೈಕ್ ಸವಾರರು, ಚಾಮುಂಡಿ ಬೆಟ್ಟದಲ್ಲಿರುವ ಸದ್ಗುರುಗಳ ಜ್ಞಾನೋದಯ ಹೊಂದಿದ ಸ್ಥಳದಲ್ಲಿ ಒಂದು ಆತ್ಮೀಯ ಸತ್ಸಂಗವನ್ನು ಆನಂದಿಸಿದರು. ಮುಂದಿನ ಕಾವೇರಿ ಕೂಗು ಕಾರ್ಯಕ್ರಮಕ್ಕಾಗಿ ಮಂಡ್ಯದ ಕಡೆಗೆ ಹೊರಟ ಸವಾರರಿಗೆ, ಸಮಾಜದ ಎಲ್ಲಾ ವರ್ಗಗಳ ಭಾವಪೂರಿತ ಜನರ ಬೆಂಬಲವು ಹೃದಯಸ್ಪರ್ಶಿಯಾಗಿತ್ತು. ನಂತರ ಸದ್ಗುರುಗಳು ಮತ್ತು ಬೈಕ್ ಸವಾರರು ಶಿವನಸಮುದ್ರದ ಕಡೆಗೆ ಸಾಗಿದರು.

video
Jul 2, 2022
Subscribe