Main Centers
International Centers
India
USA
Wisdom
FILTERS:
SORT BY:
ಮನಸ್ಸು ಎಂಬುದು ಗತಕಾಲದ ಒಂದು ಶೇಖರಣೆ. ನೀವು ಮನಸ್ಸನ್ನು ಮೀರಿ ಹೋದಿರೆಂದರೆ, ಗತಕಾಲವು ನಿಮ್ಮ ಮೇಲೆ ಪ್ರಭಾವ ಬೀರದು.
ಅಧಿಕಾರವೇ ಭ್ರಷ್ಟಾಚಾರವಲ್ಲ. ಆದರೆ ಯಾವಾಗ ಪ್ರಾಬಲ್ಯ ಮೆರೆಯಲು ಹಪಹಪಿಸುವ ಮನುಷ್ಯರಿಗೆ ಅಧಿಕಾರ ಸಿಕ್ಕುವುದೋ, ಆಗ ಅದು ಭ್ರಷ್ಟಾಚಾರದ ಮೂಲವಾಗುತ್ತದೆ.
ನಿಮಗೆ ಗೊತ್ತಿಲ್ಲ ಎಂದು ನಿಮಗೆ ನಿಜವಾಗಿಯೂ ಮನವರಿಕೆಯಾದಾಗ, ನಿಮ್ಮಲ್ಲಿ ಪೂರ್ವಗ್ರಹ ಮತ್ತು ಅಭಿಪ್ರಾಯಗಳಿರುವುದಿಲ್ಲ. ಆಗ ನೀವು ಕೇವಲ ಒಂದು ‘ಇರುವಿಕೆ’ಯಾಗುತ್ತೀರಿ, ಒಂದು ಚೇತನವಾಗುತ್ತೀರಿ.
ಮಾನವರಾಗಿರುವುದು ಎಂದರೆ ನೀವು ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ಪ್ರಜ್ಞಾಪೂರ್ವಕರಾಗಿರುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮ್ಮ ಸುತ್ತ ಅದೇನೇ ನಡೆಯುತ್ತಿದ್ದರೂ ನಿಮ್ಮ ಅಂತರಂಗವನ್ನು ಸವಿಯಾಗಿಟ್ಟುಕೊಳ್ಳುವುದು ಹೇಗೆ ಎಂದು ನಿಮಗೆ ಗೊತ್ತಿದ್ದರೆ, ಪರಮಮುಕ್ತಿಯನ್ನು ನಿಮಗೆ ನಿರಾಕರಿಸಲಾಗದು.
ನಮ್ಮ ದಾರಿಯಲ್ಲಿ ಅದೇನೇ ಬರಲಿ, ನಾವು ಅದಕ್ಕೆ ಹೇಗೆ ಸ್ಪಂದಿಸುತ್ತೇವೆ ಮತ್ತು ಅದರಿಂದ ಏನನ್ನು ಮಾಡಿಕೊಳ್ಳುತ್ತೇವೆ ಎಂಬುದು 100% ನಮಗೆ ಬಿಟ್ಟಿದ್ದು.
ನಿಮ್ಮ ಅಂತರಾಳದ ಸ್ವರೂಪ ನಿಮ್ಮ ಅನುಭವಕ್ಕೆ ಬರಬೇಕು ಎಂಬುದು ನನ್ನ ಹಾರೈಕೆ ಮತ್ತು ಆಶೀರ್ವಾದ. ನೀವು ಎಲ್ಲೇ ಹೋದರೂ ಅದು ನಿಮ್ಮ ಜೊತೆಯಲ್ಲಿರುತ್ತದೆ.
ನಿಮ್ಮ ಆಸೆಗಳನ್ನು ಹೆಚ್ಚಿಸಿಕೊಳ್ಳುವುದರ ಬದಲಿಗೆ ನಿಮ್ಮ ಸಾಮರ್ಥ್ಯಗಳನ್ನು ವರ್ಧಿಸಿಕೊಂಡರೆ ನೀವು ಜೀವನದ ಮೂಲಕ ಅನಾಯಾಸವಾಗಿ, ಸಲಿಲತೆಯೊಂದಿಗೆ ಸಾಗುವಿರಿ, ಮತ್ತು ಯಶಸ್ವಿಯಾಗುವಿರಿ.
ಸಾಮಾನ್ಯವಾಗಿ ಯಾವುದನ್ನು ಸೋಲು ಎನ್ನಲಾಗುತ್ತದೆಯೋ ಅದು ನಿಮ್ಮ ಜೀವನದ ಅನುಭವವನ್ನು ಹೆಚ್ಚು ಆಳವಾಗಿಸುತ್ತದೆ – ನೀವು ಗೆಲುವು ಎಂದುಕೊಳ್ಳುವ ವಿಷಯಗಳಿಗಿಂತ ಅದೆಷ್ಟೋ ಹೆಚ್ಚು.
ಬಾಹ್ಯ ವಿಷಯಗಳು ನಿಮಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಬಹುದು, ಆದರೆ ಆತ್ಮಜ್ಞಾನ ಆಗಬೇಕಾದ್ದು ಒಳಗಿನಿಂದಲೇ.
ತಾಯ್ತನದ ಸೊಬಗು ಇರುವುದು ಸಂತಾನೋತ್ಪತ್ತಿಯಲ್ಲಿ ಅಲ್ಲ, ಬದಲಿಗೆ ಒಳಗೂಡಿಸಿಕೊಳ್ಳುವಿಕೆಯಲ್ಲಿ – ಇನ್ನೊಂದು ಜೀವವನ್ನು ನಿಮ್ಮದೇ ಭಾಗವಾಗಿ ಅನುಭವಿಸುವುದರಲ್ಲಿ.
ನಿಮ್ಮ ಬದುಕು ನಿಮ್ಮದೇ ಸ್ಪಷ್ಟತೆ ಮತ್ತು ಸಾಮರ್ಥ್ಯಗಳಿಂದ ನಡೆಯಲಿ, ಆಕಸ್ಮಿಕವಾಗಿ ಅಥವಾ ಇತರರ ದಯೆ-ಕರುಣೆಗಳಿಂದ ಅಲ್ಲ.