Main Centers
International Centers
India
USA
FILTERS:
SORT BY:
When activity is performed without Devotion, it leads to entanglement. When performed with deep Devotion, it leads to Liberation.
ತರ್ಕವನ್ನು ಮೀರಿ ಹೋಗುವುದು ನಿರಾಳತೆಯನ್ನು ತರುತ್ತದೆ, ಆದರೆ ತರ್ಕವನ್ನು ಬಿಟ್ಟುಬಿಡುವುದು ಮುಟ್ಠಾಳತನ.
ನಿಮ್ಮ ಸುತ್ತಲಿನ ಜನರನ್ನು ಹಿಡಿತದಲ್ಲಿರಿಸಲು ಪ್ರಯತ್ನಿಸಬೇಡಿ. ಅವರು ಅವರ ಸ್ವಭಾವಕ್ಕನುಗುಣವಾಗಿ ಇದ್ದಾರೆ. ನೀವು ಈ ಒಂದು ಜೀವವನ್ನು—ನಿಮ್ಮನ್ನು—ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ.
ಮಾನಸಿಕ ನೋವನ್ನು ನಿಮಗೆ ಬೇರೆ ಯಾರೂ ಉಂಟು ಮಾಡಲಾರರು. ಅದನ್ನು ಮಾಡಿಕೊಳ್ಳುವುದು ನೀವೇ – ನಿಮ್ಮ ಸುತ್ತ ನಡೆಯುವ ಏನಕ್ಕೋ ಅದು ನಿಮ್ಮದೇ ಪ್ರತಿಕ್ರಿಯೆ.
ಅಧ್ಯಾತ್ಮ ಎಂದರೆ ನಿಮ್ಮ ಅಂತರಂಗದ ಪ್ರಜ್ಞೆ ಎಚ್ಚರವಾಗಿದೆ ಎಂದರ್ಥ ಅಷ್ಟೆ. ಕಾಲ ಮಿತವಾದುದು. ಏನೇ ಆಗಬೇಕಿದ್ದರೂ ಅದು ಈಗಲೇ ಆಗಬೇಕು.
ನಿಮ್ಮೊಳಗೆ ಭಯವನ್ನು ಹುಟ್ಟಿಸಲು, ನೀವು ಆಗಿಲ್ಲದೇ ಇರುವುದನ್ನು ಕಲ್ಪಿಸಿಕೊಳ್ಳಬೇಕು. ಭಯದಿಂದ ಮುಕ್ತರಾಗಲು, ನೀವೇನನ್ನೂ ಮಾಡಬೇಕಿಲ್ಲ.
ನಿಜಕ್ಕೂ ಮುಖ್ಯವಾಗುವುದು ಜನರು ನಿಮ್ಮನ್ನು ಪ್ರೀತಿಸುತ್ತಾರೆಯೇ ಎಂಬುದಲ್ಲ, ಬದಲಿಗೆ ನೀವು ಪ್ರೀತಿಯಿಂದ ತುಂಬಿದ್ದೀರಾ ಎಂಬುದು.
ನೀವು ಬಂಧಿಸಲ್ಪಟ್ಟಿರುವುದು ನೀವು ಇಷ್ಟಪಡುವ ಅಥವಾ ಪ್ರೀತಿಸುವ ವ್ಯಕ್ತಿಗಳೊಂದಿಗೆ ಮಾತ್ರವಲ್ಲ. ನೀವು ಇಷ್ಟ ಪಡದಿರುವ ಅಥವಾ ದ್ವೇಷಿಸುವ ವ್ಯಕ್ತಿಗಳೊಂದಿಗೆ ನೀವು ಇನ್ನೂ ಹೆಚ್ಚು ಆಳವಾಗಿ ಬಂಧಿತರಾಗಿದ್ದೀರಿ.
Become Love. It is an intelligent way to exist.
ಗುರುಗಳು ನಿಮ್ಮಲ್ಲಿರುವ ಅಂಧಕಾರವನ್ನು ತೊಡೆದುಹಾಕುತ್ತಾರೆ. ಅವರು ಒಂದು ಜ್ವಾಲೆಯಿದ್ದಂತೆ. ನೀವೂ ಆ ಜ್ವಾಲೆಯೊಂದಿಗೆ ಉರಿದು ನಿಮ್ಮನ್ನು ಹತ್ತಿಕ್ಕುತ್ತಿರುವ ಎಲ್ಲವನ್ನೂ ಮೀರಿ ಹೋಗುವಂತಾಗಲಿ.
ನಿಚ್ಚಳ ಸ್ಪಷ್ಟತೆಯಿದ್ದರೆ, ಆಗ ಧೈರ್ಯದ ಅಗತ್ಯವಿಲ್ಲ. ಸ್ಪಷ್ಟತೆಯೇ ನಿಮ್ಮನ್ನು ಆ ಕಡೆಗೆ ದಾಟಿಸುತ್ತದೆ.
ನಾವೆಲ್ಲರೂ ಹುಟ್ಟು ಆತ್ಮಜ್ಞಾನಿಗಳು. ಅಜ್ಞಾನವು ಒಂದು ಆಯ್ಕೆಯಷ್ಟೆ.