Main Centers
International Centers
India
USA
FILTERS:
SORT BY:
ಜಗತ್ತಿನಲ್ಲಿ ಬಹುತೇಕರು ಬ್ಯುಸಿಯಾಗಿಲ್ಲ, ಅವರ ಮನಸ್ಸು ಅನಗತ್ಯ ಸಂಗತಿಗಳಿಂದ ಕಿಕ್ಕಿರಿದು ಹೋಗಿದೆ ಅಷ್ಟೆ.
ದೇವರಿಗೆ ನಿಮ್ಮ ಭಕ್ತಿಯ ಅಗತ್ಯವಿಲ್ಲ. ಭಾವನೆಯ ಉತ್ತುಂಗವನ್ನು ಅನುಭವಿಸುವ ಅಗತ್ಯವಿರುವುದು ಮಾನವ ಹೃದಯಕ್ಕೆ.
ಅಟ್ಯಾಚ್ಮೆಂಟ್ ಎಂಬುದು ಪ್ರೀತಿಯಲ್ಲ. ನೀವು ಯಾರನ್ನಾದರೂ ಹಚ್ಚಿಕೊಂಡಾಗ ಅದು ಆ ವ್ಯಕ್ತಿಯ ಬಗ್ಗೆಯಾಗಿರುವುದಿಲ್ಲ, ಬದಲಿಗೆ ನಿಮ್ಮೊಳಗೇ ಇರುವ ಅಪೂರ್ಣತೆಯ ಬಗ್ಗೆಯಾಗಿರುತ್ತದೆ.
ನೀವು ಸಂಗ್ರಹಿಸುವುದು ನಿಮ್ಮದಾಗಬಹುದೇ ಹೊರತು ಅದೆಂದಿಗೂ ನೀವೇ ಆಗಲಾರದು.
ನಿಮಗೆ ಬಹಳ ಹತ್ತಿರದವರು ಮತ್ತು ಆತ್ಮೀಯರಾದವರಿಗೇ ನಿಮ್ಮ ಅತ್ಯಂತ ಕೆಟ್ಟ ರೂಪ ನೋಡಲು ಸಿಗುತ್ತದೆ. ಯಾವ ಅಪರಿಚಿತರಿಗೂ ಆ ಕೊಳಕು ನೋಡಲು ಸಿಗುವುದಿಲ್ಲ.
ಅರಿವು ಎಂಬುದು ನೀವು ‘ಮಾಡು’ವ ವಿಷಯವಲ್ಲ. ಅರಿವು ನಿಮ್ಮ ಸ್ವರೂಪವೇ ಆಗಿದೆ.
ಮನಸ್ಸು ಎಂಬುದು ಸಮಾಜದ ಕಸದ ಬುಟ್ಟಿ. ಹಾದು ಹೋಗುವ ಎಲ್ಲರೂ ಅದರಲ್ಲಿ ಏನನ್ನಾದರೂ ತುರುಕುತ್ತಾರೆ.
ಯಾರಾದರೂ ತಮ್ಮನ್ನು ತಾವೇ ಬಹಳ ಒಳ್ಳೆಯವರು ಅಂದುಕೊಂಡಾಗ, ಅವರು ಕೊಟ್ಟಕೊನೆಗೆ ತುಂಬ ಕ್ರೂರಿಗಳಾಗುತ್ತಾರೆ.
ನೀವು ಮಾಡುವ ವಿಷಯಗಳು ನೀವು ಯಾರು ಎಂಬುದನ್ನು ನಿರ್ಧರಿಸಬಾರದು. ನೀವು ಯಾರು ಎಂಬುದು ನೀವೇನನ್ನು ಮಾಡುತ್ತೀರಿ ಎಂಬುದನ್ನು ನಿರ್ಧರಿಸಬೇಕು.
ನಿಮಗೆ ನಿಮ್ಮ ಪ್ರಸ್ತುತ ಜೀವನದ ಎಲ್ಲೆಗಳನ್ನು ಮೀರಿ ಹೋಗಬೇಕೆಂದಿದ್ದರೆ, ನಿಮ್ಮ ಹೃದಯದಲ್ಲಿ ಹುಚ್ಚಿರಬೇಕು, ಆದರೆ ತಲೆಯಲ್ಲಿ ನಿಚ್ಚಳ ಸಂತುಲನೆಯಿರಬೇಕು.
ಇಬ್ಬರು ವ್ಯಕ್ತಿಗಳು ಜೊತೆಗೂಡಿದಾಗ, ಅದು ಪರಸ್ಪರ ಸಂತೋಷವನ್ನು ಹಂಚುವ ಪ್ರಕ್ರಿಯೆಯಾಗಬೇಕೇ ಹೊರತು ಪರಸ್ಪರರಿಂದ ಸಂತೋಷವನ್ನು ಹಿಂಡುವ ಪ್ರಕ್ರಿಯೆಯಾಗಬಾರದು.
ಮಾನಸಿಕ ಒತ್ತಡ ಉಂಟಾಗುವುದು ಸನ್ನಿವೇಶಗಳಿಂದಾಗಿಯಲ್ಲ, ಬದಲಿಗೆ ನಿಮ್ಮನ್ನು ನೀವು ಹೇಗೆ ನಿಭಾಯಿಸಬೇಕೆಂದು ನಿಮಗೆ ಗೊತ್ತಿಲ್ಲದೇ ಇರುವುದರಿಂದ.