Main Centers
International Centers
India
USA
Wisdom
FILTERS:
SORT BY:
ಪುನರಾವರ್ತನೆಗೊಳ್ಳುವ ಬಾಳನ್ನು ಬಾಳುವುದು ನಮಗೆ ಬೇಕಿಲ್ಲ. ನಮ್ಮ ಬಾಳಿನ ಕಥೆಯನ್ನು ನಾವೇ ಬರೆಯಲು ನಾವು ಬಯಸುತ್ತೇವೆ.
ಪ್ರೀತಿಗೆ ಸ್ಪಂದನೆ ಅಗತ್ಯ – ಇಲ್ಲದಿದ್ದರೆ, ಅದು ಉಳಿಯುವುದಿಲ್ಲ. ಭಕ್ತಿಗೆ ಯಾರ ಸಹಾಯವೂ ಬೇಕಿಲ್ಲ – ನೀವು ನಿಮ್ಮ ಪಾಡಿಗೆ ತೀವ್ರತೆಯಲ್ಲಿರುತ್ತೀರಿ.
ಆಧ್ಯಾತ್ಮಿಕ ಸಾಧನೆ ಮಾಡುವುದು ಎಲ್ಲಿಗೋ ಹೋಗಲಿಕ್ಕಲ್ಲ, ಬದಲಿಗೆ ನೀವು ಸುಮ್ಮನೆ ‘ಇಲ್ಲಿ’ ಇರುವುದನ್ನು ಸಾಧ್ಯವಾಗಿಸುವಂತಹ ಸ್ಥಿತಿಗೆ ಬರಲು. ಇಲ್ಲಿ ಇರುವುದು ಎಲ್ಲೆಲ್ಲಿಯೂ ಇದೆ – ಇಲ್ಲಿ ಇಲ್ಲದ್ದು ಎಲ್ಲಿಯೂ ಇಲ್ಲ.
ಒಳಗಿನ ದೈವಿಕತೆಯು ಅಭಿವ್ಯಕ್ತಿಯನ್ನು ಪಡೆದಾಗ ಒಂದೇ ಒಂದು ಚೇತನದ ಜನ್ಮವೂ ಜಗತ್ತನ್ನು ಬದಲಿಸಬಲ್ಲದು. ನೀವು ದೈವಿಕತೆಯನ್ನು ಅರಿಯುವಂತಾಗಲಿ. ಕ್ರಿಸ್ಮಸ್ ಶುಭಾಶಯಗಳು.
ನಿಮ್ಮೊಳಗಿರುವ ಸೃಷ್ಟಿಯ ಮೂಲವು ಅಭಿವ್ಯಕ್ತಿಯನ್ನು ಪಡೆಯಲು ನೀವು ಅನುವು ಮಾಡಿಕೊಟ್ಟರೆ, ನೀವು ಆನಂದದಲ್ಲಿಲ್ಲದೆ ಬೇರೆ ದಾರಿಯೇ ಇಲ್ಲ.ಆನಂದವೇ ಎಲ್ಲ ಕೆಡುಕಿನ ವಿರುದ್ಧ ಅತ್ಯುತ್ತಮ ಭದ್ರತೆ.ನೀವು ಸಂಪರ್ಕಕ್ಕೆ ಬರುವ ಎಲ್ಲವನ್ನೂ ಆನಂದಮಯವಾಗಿಸುವ ಧನ್ಯತೆಯನ್ನು ನೀವು ಅರಿಯುವಂತಾಗಲಿ.ತುಂಬುಹೃದಯದ ಪ್ರೀತಿ ಮತ್ತು ಆಶೀರ್ವಾದಗಳು,
ನಿಮ್ಮ ಪ್ರೀತಿ, ಸಂತೋಷ, ಮತ್ತು ಶಾಂತಿಗಳು ಇನ್ನೊಬರನ್ನು ಅವಲಂಬಿಸಿದ್ದರೆ, ಈ ಗುಣಗಳನ್ನು ನೀವೆಂದೂ ನಿಮ್ಮ ಸ್ವಂತ ಗುಣಗಳಾಗಿ ಅನುಭವಿಸಲಾರಿರಿ.
ಹೇಗೆ ಕೂರಬೇಕು, ಹೇಗೆ ನಿಲ್ಲಬೇಕು, ಹೇಗೆ ಉಸಿರಾಡಬೇಕು, ಎಲ್ಲವನ್ನೂ ಹೇಗೆ ಮಾಡಬೇಕು, ನಿಮ್ಮ ಹೃದಯ ಹೇಗೆ ಬಡಿಯಬೇಕು, ನಿಮ್ಮೊಳಗಿನ ಜೀವ ಹೇಗೆ ಮಿಡಿಯಬೇಕು – ಎಲ್ಲದಕ್ಕೂ ನೀವು ಗಮನ ನೀಡಿದಾಗ, ನೀವು ‘ಯೋಗ’ ದಲ್ಲಿರುತ್ತೀರಿ.
ನಿಚ್ಚಳ ನಿಶ್ಚಲತೆಯಲ್ಲಿ ಸಮಯ ಎಂಬುದಿಲ್ಲ.
ಗುರುಗಳೊಂದಿಗೆ ಇರುವುದು ಸಾಂತ್ವನಕ್ಕಾಗಿಯಲ್ಲ. ಅದು ಮಿತಿಗಳನ್ನು ಮುರಿಯುವ ಒಂದು ನಿರಂತರ ರೋಚಕ ಪಯಣ.
ನಡಿಯುವುದಿರಲಿ ನರ್ತಿಸುವುದಿರಲಿ, ಕೆಲಸವಿರಲಿ ಆಟವಿರಲಿ, ಅಡಿಗೆಯಿರಲಿ ಹಾಡುವುದಿರಲಿ – ಅದನ್ನು ಸಂಪೂರ್ಣ ಅರಿವಿನಿಂದ ಮಾಡಿ, ಇಲ್ಲವೇ ಸಂಪೂರ್ಣವಾಗಿ ಮೈಮರೆತು ಮಾಡಿ. ಎರಡರಲ್ಲೂ ನೀವು ಸೃಷ್ಟಿಯೊಂದಿಗೆ ಒಂದಾಗುತ್ತಿರಿ.
ಯಾರಾದರೂ ನಿಜವಾಗಿಯೂ ಹಾತೊರೆದಾಗ, ಅಸ್ತಿತ್ವವು ಉತ್ತರಿಸುತ್ತದೆ.