ಸದ್ಗುರುಗಳಿಂದ ಹೊಸ ವಿಷಯಗಳು
ಆಕರ್ಷಕ ಅನುಭವಕ್ಕಾಗಿ ಹಲವಾರು ಹೊಸ ದೃಶ್ಯಗಳು ಮತ್ತು ಸಂವಾದಾತ್ಮಕ ಅಂಶಗಳಿಂದ ಸಮೃದ್ಧವಾಗಿದೆ
ನಿಮ್ಮ ದೈನಂದಿನ ಜೀವನದಲ್ಲಿ ಸಾಧನಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುವಂತೆ, ಸೂಚನೆ ಮತ್ತು ರಿಮೈಂಡರ್ಗಳನ್ನು ನಿಮ್ಮ ಮೊಬೈಲ್ ನಲ್ಲಿ ಬರುವಂತೆ ಮಾಡಲಾಗಿದೆ.
ಈ ಕಾರ್ಯಕ್ರಮವು ಈಗ ಇನ್ನರ್ ಇಂಜಿನಿಯರಿಂಗ್ ಆನ್ಲೈನ್ ಕೋರ್ಸ್ನ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಮತ್ತು ಶಕ್ತಿಯುತ 21 ನಿಮಿಷಗಳ ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆಯನ್ನೂ ಒಳಗೊಂಡಿದೆ.
ಹೊಸ ಸ್ವರೂಪದ ಕಾರ್ಯಕ್ರಮಕ್ಕೆ ಕಡಿಮೆ ಶುಲ್ಕದಲ್ಲಿ ನೋಂದಾಯಿಸಲು ನಿಮಗೆ ಅವಕಾಶವಿದೆ. ನಿಮ್ಮ ಶುಲ್ಕ ಎಷ್ಟೆಂದು ವೀಕ್ಷಿಸಲು ದಯವಿಟ್ಟು ಕೆಳಗಿನ ಫಾರ್ಮ್ನಲ್ಲಿ ನಿಮ್ಮ ವಿವರಗಳನ್ನು ಒದಗಿಸಿ.
ನೀವು ಎಲ್ಲಿ ನಿಲ್ಲಿಸಿದ್ದಿರೊ ಅಲ್ಲಿಂದಲೇ ನಿಮ್ಮ ಇನ್ನರ್ ಇಂಜಿನಿಯರಿಂಗ್ ಪ್ರಯಾಣವನ್ನು ಮುಂದುವರಿಸಬಹುದು. ಉದಾಹರಣೆಗೆ, ನೀವು ಹಿಂದಿನ ಕಾರ್ಯಕ್ರಮದ ಆವೃತ್ತಿಯಲ್ಲಿ ಹಂತ 2 ಅನ್ನು ಪೂರ್ಣಗೊಳಿಸಿದರೆ, ಹೊಸ ಕಾರ್ಯಕ್ರಮದಲ್ಲಿ ಹಂತ 3 ರಿಂದ ಪ್ರಾರಂಭಿಸಬಹುದು.
ಈಗಾಗಲೇ ನಿಮಗೆ ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆ ಆಗಿದ್ದರೆ, ಹೊಸ ಕಾರ್ಯಕ್ರಮಕ್ಕೆ ಕಡಿಮೆ ಶುಲ್ಕದಲ್ಲಿ ಮರು-ನೋಂದಣಿ ಮಾಡಿಕೊಳ್ಳುವ ಆಯ್ಕೆ ಸಹ ನಿಮಗಿದೆ.
ಅರಿತುಕೊಳ್ಳಿ ಬದುಕಿನ ನಟ್-ಬೋಲ್ಟ್ ಗಳನ್ನು
“ಈ ಭೂಮಿಯ ಅತ್ಯಂತ ಆಧುನಿಕ ಯಂತ್ರವೆಂದರೆ ಅದು ಮಾನವ ದೇಹ. ಆದರೆ ಅದರ ಬಳಕೆಯ ಕುರಿತಾದ ಕೈಪಿಡಿಯನ್ನು ನೀವು ಓದಿಲ್ಲ. ನಾವದನ್ನು ಪರಿಶೋಧಿಸೋಣ.” -ಸದ್ಗುರು
ಏಕೈಕ ಬಂಧನ
“ನಿಮ್ಮ ಆಸೆಗಳನ್ನು ಅಮಿತವಾಗಿ ತೆರೆಯಿರಿ; ಅವುಗಳನ್ನು ಅಲ್ಪಕ್ಕೆ ಸೀಮಿತಗೊಳಿಸಬೇಡಿ. ಆಸೆಯ ಅಮಿತತೆಯೇ ನಿಮ್ಮ ಪರಮ ಸ್ವಭಾವ .” - ಸದ್ಗುರು
ಜೀವನವನ್ನು ಪರಿಪೂರ್ಣವಾಗಿ ಜೀವಿಸಿ
“ನೀವು ಯಾರು ಎಂಬ ಸ್ವರೂಪವನ್ನು ಯಾವುದೇ ಮಿತಿಯಿಲ್ಲದೇ ವಿಸ್ತರಿಸಿಕೊಂಡಾಗಲೇ ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸಬಲ್ಲಿರಿ. ನಿಮ್ಮ ಜೀವನದಲ್ಲಿ ನೀವು ತಿಳಿಯಬಹುದಾದ ಏಕೈಕ ನೆರವೇರಿಕೆಯೆಂದರೆ, ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಜೀವಿಸುವುದು.” - ಸದ್ಗುರು
ನೀವೇನು ಅಂದುಕೊಂಡಿದ್ದೀರೋ, ನೀವು ಅದಲ್ಲ
“ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಂಪೂರ್ಣ ಇಚ್ಛೆಯಿಂದ ನಡೆಸಿದರೆ, ಅದನ್ನು ಸ್ವರ್ಗವನ್ನಾಗಿಸಿಕೊಳ್ಳಬಹುದು. ಇಚ್ಛೆಯಿಲ್ಲದೇ ನಡೆಸಿದ ಜೀವನವು ಖಚಿತವಾದ ನರಕ.” - ಸದ್ಗುರು
ಮನಸ್ಸು - ಒಂದು ಅದ್ಭುತ ಚಮತ್ಕಾರ
“ಬಹಳಷ್ಟು ಜನರು ತಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಮನಸ್ಸನ್ನು ಅದರ ಪೂರ್ಣವಾದ ಸಾಧ್ಯತೆಯೆಡೆಗೆ ಏರಿಸಲು ನಾನು ಬಯಸುತ್ತೇನೆ.” - ಸದ್ಗುರು
ನಿಮಗೆ ಏನು ಬೇಕೋ ಅದನ್ನು ರೂಪಿಸಿಕೊಳ್ಳಿ
“ನಿಮ್ಮ ಸ್ವಾಸ್ಥ್ಯ ಮತ್ತು ನಿಮ್ಮ ಅನಾರೋಗ್ಯ, ನಿಮ್ಮ ಸಂತೋಷ ಮತ್ತು ನಿಮ್ಮ ದುಃಖ, ಎಲ್ಲವೂ ಸೃಷ್ಟಿಯಾಗುವುದು ನಿಮ್ಮೊಳಗಿನಿಂದಲೇ. ನೀವು ಯೋಗಕ್ಷೇಮವನ್ನು ಬಯಸುತ್ತಿದ್ದರೆ, ಆಂತರ್ಯದ ಕಡೆಗೆ ತಿರುಗುವ ಸಮಯವಿದು.” - ಸದ್ಗುರು
ಆಯ್ಕೆ ಮಾಡಿದ ದಿನಾಂಕಗಳಲ್ಲಿ 7 ನೇ ಹಂತವನ್ನು ನೇರಪ್ರಸಾರದಲ್ಲಿ ಅರ್ಪಿಸಲಾಗುತ್ತದೆ.
ಹಂತ 7
ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆ
“ಸೃಷ್ಟಿಯ ಮೂಲವನ್ನು ಸ್ಪರ್ಶಿಸಲು 'ಶಾಂಭವಿ ಮಹಾಮುದ್ರ ಕ್ರಿಯಾ’ ಒಂದು ಸಾಧನ. ನಿಮ್ಮ ಆಂತರ್ಯವನ್ನು ಆಳವಾಗಿ ಸ್ಪರ್ಶಿಸುವ ಪ್ರಕ್ರಿಯೆಯಲ್ಲಿ, ಪರಿವರ್ತನೆಯಿದೆ.”
— ಸದ್ಗುರು
ಕಾರ್ಯಕ್ರಮವನ್ನು
Secure payment gateway is opening.
Do not refresh or press the back button.