Main Centers
International Centers
India
USA
Wisdom
FILTERS:
SORT BY:
ನೀವು ಬದುಕಿನಲ್ಲಿ ಅದೆಷ್ಟು ವಿಷಯಗಳನ್ನು ಕೂಡಿಹಾಕಿದರೂ, ಕೊನೆಯಲ್ಲಿ ಪಾರ್ಸೆಲ್ ಸರ್ವಿಸ್ ಲಭ್ಯವಿಲ್ಲ. ಈ ರೀತಿ ಕೂಡಿಹಾಕುವ ಬದಲಿಗೆ ಜೀವನವನ್ನು ಆಳವಾಗಿಸುವತ್ತ ಗಮನ ಹರಿಸುವ ಸಮಯ ಬಂದಿದೆ.
ಪ್ರತಿಯೊಬ್ಬರೂ ಶ್ರಮಿಸಬೇಕಾದ ಒಂದು ವಿಷಯವೆಂದರೆ – ನೀವು ಬಂದಾಗ ಈ ಜಗತ್ತು ಹೇಗಿತ್ತೋ, ತೆರಳುವಾಗ ಅದಕ್ಕಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿ ಅದನ್ನು ಬಿಟ್ಟುಹೋಗಬೇಕು.
ಒಂದು ಕ್ಷಣದ ಅಪ್ಪಟ ಕೃತಜ್ಞತಾಭಾವವು ನಿಮ್ಮ ಇಡೀ ಜೀವನವನ್ನು ರೂಪಾಂತರಿಸಬಲ್ಲದು.
ನಿಮ್ಮ ಕೆಲಸವು ನಿಮಗೆ ನಿಜವಾಗಿಯೂ ಕಾಳಜಿಯಿರುವುದನ್ನು ಸೃಷ್ಟಿಸುವ ಕುರಿತಾಗಿದ್ದರೆ, ಆಗ ವರ್ಕ್-ಲೈಫ್ ಬ್ಯಾಲೆನ್ಸ್ ಮಾಡುವ ಅಗತ್ಯ ಏಳುವುದಿಲ್ಲ. ನಿಮ್ಮ ಜೀವನವೇ ಕೆಲಸವಾಗುತ್ತದೆ, ಮತ್ತು ಕೆಲಸವೇ ಜೀವನವಾಗುತ್ತದೆ.
ಒಳಿತಿನ ಹುಡುಕಾಟದಲ್ಲಿ, ನಾವು ಭೂಮಿಯ ಮೇಲೆ ಅದೆಷ್ಟೋ ಹುಚ್ಚು ಸಂಗತಿಗಳನ್ನು ಮಾಡಿದ್ದೇವೆ. ನೀವು ಅರಸುತ್ತಿರುವುದು ನಿಮ್ಮ ಒಳಿತನ್ನೇ ಆದರೆ – ಅದಕ್ಕಿರುವ ಒಂದೇ ದಾರಿಯೆಂದರೆ ಅಂತರ್ಮುಖರಾಗುವುದು.
ನಿಮ್ಮ ಜೀವನವು ಅಮೋಘವಾಗುವುದು ನೀವೆಷ್ಟು ಕೂಡಿಹಾಕಿದಿರಿ ಎಂಬುದರಿಂದಲ್ಲ, ಬದಲಿಗೆ ನಿಮ್ಮ ಅನುಭವದ ಅಗಾಧತೆಯಿಂದ.
ಜಗತ್ತಿನಲ್ಲಿ ಬಹುತೇಕರು ಬ್ಯುಸಿಯಾಗಿಲ್ಲ, ಅವರ ಮನಸ್ಸು ಅನಗತ್ಯ ಸಂಗತಿಗಳಿಂದ ಕಿಕ್ಕಿರಿದು ಹೋಗಿದೆ ಅಷ್ಟೆ.
ನಿಮಗೆ ಗೊತ್ತಿರುವುದು ಲೇಶಮಾತ್ರವಷ್ಟೆ. ನಿಮಗೆ ಗೊತ್ತಿಲ್ಲದೇ ಇರುವುದಕ್ಕೆ ಕೊನೆಯೇ ಇಲ್ಲ. ಅದೊಂದು ಅನಂತ ಸಾಧ್ಯತೆ.
ನೀವು ತರ್ಕದ ಸಂಕೋಲೆಗಳಲ್ಲೇ ಜೀವಿಸಿದರೆ, ಜೀವನದ ಸರ್ಕಸ್ಸಿನಲ್ಲಿ ಕೋಡಂಗಿಯಾಗಿ ಉಳಿಯುವಿರಿ.
ಈ ಗುರು ಪೌರ್ಣಮಿಯಂದು ನಿಮ್ಮ ಅಂತರಂಗದ ಒಳಿತಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಿ. ನಿಮ್ಮ ಯೋಗಸಾಧನೆಯನ್ನು ಮಾಡಿ, ಧ್ಯಾನಸ್ಥರಾಗಿ, ಮತ್ತು ನಿಮ್ಮ ಮನಸ್ಸನ್ನು ಒಂದು ಚಮತ್ಕಾರವಾಗಿಸಿ.ನಿಮ್ಮ ಗುರುಗಳ ಅನುಗ್ರಹವು ನಿಮ್ಮ ಮೇಲಿದೆ.ಪ್ರೀತಿ ಮತ್ತು ಆಶೀರ್ವಾದಗಳು,
ಒಳ್ಳೆಯ ಉದ್ದೇಶವಿದ್ದರೆ ಸಾಲದು. ಸರಿಯಾದ ಪ್ರಯತ್ನವನ್ನು ಸರಿಯಾದ ಪ್ರಜ್ಞೆಯೊಂದಿಗೆ ಹೂಡಿದರೆ ಮಾತ್ರ ನಿಮಗೆ ಬೇಕಾದ ಫಲಿತಾಂಶ ದೊರೆಯುತ್ತದೆ.