Main Centers
International Centers
India
USA
Wisdom
FILTERS:
SORT BY:
ಇನ್ನೊಬ್ಬರು ಏನು ಮಾಡಬೇಕು ಎಂಬ ಬಗ್ಗೆ ನಿಮಗೆ ಯಾವುದೇ ನಿರೀಕ್ಷೆಗಳಿಲ್ಲದೇ ಹೋದಾಗ, ನೀವು ಯಶಸ್ವಿ ಸಂಬಂಧವನ್ನು ಹೊಂದುವಿರಿ.
ನಿಮಗೆ ಇತರರ ಅಕ್ಕರೆ-ಆದರದ ಅಗತ್ಯವಿಲ್ಲದೆಯೇ ಎಲ್ಲರ ಮೇಲೂ ನೀವು ಅಕ್ಕರೆಯನ್ನು ಎರೆಯಲು ಸಮರ್ಥರಾಗುವುದು – ಇದುವೇ ಸ್ವಾತಂತ್ರ್ಯ.
ಅಧ್ಯಾತ್ಮ ಎಂದರೆ ಆರಾಮ-ನೆಮ್ಮದಿಯ ಬದುಕನ್ನು ಹೊಂದುವುದು ಎಂದುಕೊಳ್ಳಬೇಡಿ. ಅಧ್ಯಾತ್ಮ ಎಂದರೆ ಕಿಚ್ಚೆಬ್ಬಿರುವುದು.
ಕಣ್ಣು-ಮೂಗುಗಳ ಆಕಾರ ಹೇಗೇ ಇರಲಿ, ಸಂತೋಷಭರಿತ ಮುಖವು ಎಂದಿದ್ದರೂ ಅಂದವಾದ ಮುಖ. ಸಂತೋಷಭರಿತರಾಗಿ – ಸುಂದರರಾಗಿ.
ಬೋರ್ ಹೊಡೆಯುವುದು ಜೀವನದಲ್ಲಿ ತೊಡಗುವಿಕೆಯ ಕೊರತೆಯಿಂದ. ನೀವು ನಿಮ್ಮದೇ ಯೋಚನೆ-ಭಾವನೆಗಳಲ್ಲಿ ಕಳೆದುಹೋಗಿದ್ದೀರಿ.
ನೀವು ನಿಮ್ಮ ಬಗ್ಗೆ ಏನು ಯೋಚಿಸುತ್ತೀರಿ, ಮತ್ತು ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ಮೂಲಭೂತವಾಗಿ ಯಾವುದೇ ಮಹತ್ವವಿಲ್ಲ.
ಸಾವಿರಾರು ವರ್ಷಗಳಿಂದ ನಮ್ಮ ನದಿಗಳು ನಮ್ಮನ್ನು ನಮ್ಮ ತಾಯಂದಿರಂತೆ ಸಲಹಿ ಪೋಷಿಸಿವೆ. ಈಗ ನಾವು ನಮ್ಮ ನದಿಗಳನ್ನು ಸಲಹಿ ಪೋಷಿಸುವ ಸಮಯ ಬಂದಿದೆ.
ನೀವು ಪರಿಪೂರ್ಣರಾಗಲು ಏನನ್ನೂ ಮಾಡಬೇಕಿಲ್ಲ, ಏನನ್ನೂ ಯೋಚಿಸಬೇಕಿಲ್ಲ, ಏನನ್ನೂ ಅನುಭವಿಸಬೇಕಿಲ್ಲ. ನೀವು ಹೇಗಿದ್ದೀರೋ ಹಾಗೆಯೇ ನೀವೊಂದು ಪರಿಪೂರ್ಣ ಜೀವ.
ನಿಮ್ಮ ಬದುಕಿನ ಸನ್ನಿವೇಶಗಳಲ್ಲಿ ಅದೇನೇ ಬಿಕ್ಕಟ್ಟುಗಳು ಉಂಟಾಗುತ್ತಿರಲಿ, ನಿಮ್ಮನ್ನು ನೀವು ಒಂದು ಬಿಕ್ಕಟ್ಟಾಗಿಸಬೇಡಿ.
ಕಲಿಸುವುದು ಒಂದು ವೃತ್ತಿಯಾಗಿರಬಾರದು, ಅದೊಂದು ಆಳವಾದ ತುಡಿತವಾಗಿರಬೇಕು. ಆಗಷ್ಟೆ ಶಿಕ್ಷಣವು ಮಾಹಿತಿಯ ಹೇರುವಿಕೆಯಿಂದ ಸತ್ಯದ ಅನ್ವೇಷಣೆಯತ್ತ ಸಾಗಬಲ್ಲದು.
ಒತ್ತಡವು ಜೀವನದ ಸಹಜ ಭಾಗವಲ್ಲ. ಒತ್ತಡ ಉಂಟಾಗುವುದು ನಿಮ್ಮದೇ ಜೀವವ್ಯವಸ್ಥೆಯನ್ನು ನಿಭಾಯಿಸುವಲ್ಲಿನ ನಿಮ್ಮ ಅಸಾಮರ್ಥ್ಯದಿಂದ.
ನೀವು ನಿಮ್ಮ ನಶ್ವರತೆಯ ಅರಿವಿನಲ್ಲಿದ್ದಾಗ ಮಾತ್ರ ಅದನ್ನು ಮೀರಿ ಹೋಗುವ ಹಾತೊರೆತವು ಒಂದು ನೈಜ ಶಕ್ತಿಯಾಗುತ್ತದೆ. ಇಲ್ಲದಿದ್ದರೆ ಅಧ್ಯಾತ್ಮವು ಬರೀ ಮನರಂಜನೆಯಾಗಿ ಉಳಿಯುತ್ತದೆ ಅಷ್ಟೆ.