Main Centers
International Centers
India
USA
Wisdom
FILTERS:
SORT BY:
ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ.
ಅತೀಂದ್ರಿಯ ಅನುಭವಗಳಿಗಾಗಿ ಹಂಬಲಿಸಬೇಡಿ. ರೂಪಾಂತರಣೆಗಾಗಿ ಹಂಬಲಿಸಿ.
ನೀವು ಸಮಯವನ್ನು ನೋಡಿಕೊಂಡಾಗೆಲ್ಲ, ಬದುಕು ಸರಿದು ಹೋಗುತ್ತಿದೆ ಎಂಬುದನ್ನು ನೆನಪಿಸಿಕೊಳ್ಳಿ. ಯಾವುದು ನಿಜವಾಗಿಯೂ ಮುಖ್ಯವೋ ಅದರತ್ತ ಗಮನ ಹರಿಸುವ ಸಮಯ ಬಂದಿದೆ.
ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ.
ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ್ವ.
ನಿಮ್ಮ ದೇಹ-ಮನಸ್ಸುಗಳು ಆಹಾರ ಮತ್ತು ಯೋಚನೆಗಳ ಶೇಖರಣೆಗಳಷ್ಟೆ. ಅವುಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನೀವು ನಿಲ್ಲಿಸಿದರೆ, ಅಂತರಂಗದಲ್ಲಿ ನಿಮಗೆ ನಿಶ್ಚಲತೆಯ ಅರಿವಾಗುವುದು. ಧ್ಯಾನಸ್ಥರಾಗಲು ಬೇಕಿರುವುದು ಅದಷ್ಟೆ.
There is nothing else to do here except Live – the only choice you have is to Live either superficially or profoundly.
ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ, ನಿಮ್ಮ ಸುತ್ತಲಿನ ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ – ಇದು ಮಾನವ ಹೃದಯದ ಗುಣ.
ಸಮಸ್ಯೆ ಇರುವುದು ಜೀವನದಲ್ಲಲ್ಲ. ಸಮಸ್ಯೆಯೇನೆಂದರೆ ನೀವು ನಿಮ್ಮ ಮನಸ್ಸನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಂಡಿಲ್ಲ.
ಮಾನವ ಶರೀರಕ್ಕಿಂತ ಒಳ್ಳೆಯ ರಾಸಾಯನಿಕ ಕಾರ್ಖಾನೆ ಈ ಭೂಮಿಯ ಮೇಲೆ ಮತ್ತೊಂದಿಲ್ಲ. ನೀವು ಉತ್ತಮ ಮ್ಯಾನೇಜರ್ ಆಗಿದ್ದರೆ, ನೀವದರಲ್ಲಿ ಪರಮಾನಂದದ ರಸಾಯನವನ್ನು ಉತ್ಪಾದಿಸಬಹುದು.
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ.