Main Centers
International Centers
India
USA
Wisdom
FILTERS:
SORT BY:
ಈ ಹುಣ್ಣಿಮೆಯಂದು ಗೌತಮ ಬುದ್ಧನು ಪರಿಪೂರ್ಣ ಜ್ಞಾನೋದಯವನ್ನು ಹೊಂದಿದನು, ಮತ್ತು ಒಂದು ಆಧ್ಯಾತ್ಮಿಕ ಅಲೆಯನ್ನೇ ಹುಟ್ಟುಹಾಕಿದನು. ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು ಇದು ನಿಮಗೊಂದು ಪ್ರೇರಣೆಯಾಗಲಿ.
ಯೋಗ ಎಂದರೆ ಫ್ಲೆಕ್ಸಿಬಲ್ ಅಥವಾ ನಮ್ಯರಾಗುವುದು – ಬರೀ ದೈಹಿಕವಾಗಲ್ಲ, ಬದಲಿಗೆ ಎಲ್ಲ ರೀತಿಗಳಲ್ಲೂ. ಆಗ ನೀವು ಎಲ್ಲೇ ಇದ್ದರೂ ನಿರಾಳವಾಗಿರುತ್ತೀರಿ.
ನಿಮ್ಮನ್ನು ಓರ್ವ ನಾಯಕರಾಗಿಸುವುದು, ಇತರರಲ್ಲಿ ಅತ್ಯುತ್ತಮವಾದುದನ್ನು ಹೊರತರುವ ನಿಮ್ಮ ಸಾಮರ್ಥ್ಯ.
ಯುವಕರಾಗಿರುವುದು ಎಂದರೆ ಕಲಿಯಲು, ಬೆಳೆಯಲು, ಮತ್ತು ಜೀವನಕ್ಕೆ ಮುಕ್ತರಾಗಿರಲು ಹೃತ್ಪೂರ್ವಕರಾಗಿರುವುದು.
ನನ್ನ ಅಮ್ಮ ನನ್ನ ಮೇಲೆ ಎಂದೂ ಏನನ್ನೂ ಹೇರಲಿಲ್ಲ, ಮತ್ತು ನನಗೆ ಸಂಪೂರ್ಣವಾಗಿ ಒಳಗೂಡಿಸಿಕೊಳ್ಳುವಂತಹ ಒಂದು ಪರಿಸರವನ್ನು ನೀಡಿದಳು. ಇದು ನನಗೆ ಅದ್ಭುತವನ್ನೇ ಮಾಡಿದೆ.
ಲೆಕ್ಕಾಚಾರವು ಮನಸ್ಸಿಗೆ ಒತ್ತಡ ಮತ್ತು ಹೆಣಗಾಟವನ್ನು ತರುತ್ತದೆ. ನೀಡುವುದು ಸಂತೋಷವನ್ನು ತರುತ್ತದೆ.
ಮೊಳಕೆಯೊಡೆಯದ ಬೀಜವು ಕಲ್ಲಿಗೆ ಸಮಾನ. ನಿಮ್ಮಲ್ಲಿರುವ ದೈವಿಕ ಬೀಜವು ಅಂಕುರಿಸಬೇಕಾದರೆ, ನಿಮ್ಮ ಮನಸ್ಸು-ಹೃದಯಗಳು ತೆರೆದುಕೊಳ್ಳಬೇಕು.
ಅಧ್ಯಾತ್ಮವೆಂದರೆ ನೀರಸರಾಗುವುದಲ್ಲ. ಜೀವಕಳೆ ಮತ್ತು ಸಂತೋಷದಿಂದ ತುಂಬಿರುವ ವ್ಯಕ್ತಿಯು ಮಾತ್ರವೇ ನಿಜವಾಗಿಯೂ ಮುಕ್ತನಾಗಬಲ್ಲ.
ಮಾನವರು ಹೆಚ್ಚು ಸಶಕ್ತರಾದಂತೆ, ನಾವು ಹೆಚ್ಚು ಪ್ರಜ್ಞಾಪೂರ್ವಕರೂ, ಜವಾಬ್ದಾರಿಯುತರೂ ಆಗಬೇಕೇ ಹೊರತು ಹೆಚ್ಚು ಪ್ರವೃತ್ತಿವಶರೂ, ಪ್ರತಿಕ್ರಿಯಾತ್ಮಕರೂ ಅಲ್ಲ. ಇದೊಂದು ಮೂಲಭೂತ ಅಗತ್ಯ.
ಕರ್ಮ ಎಂದರೆ ನಿಮ್ಮ ಜೀವನವನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು. ನಿಮ್ಮ ಕರ್ಮವನ್ನು ಹೆಚ್ಚು ಪ್ರಜ್ಞಾಪೂರ್ವಕ ಪ್ರಕ್ರಿಯೆಯಾಗಿಸುವ ಮೂಲಕ, ನೀವೇ ನಿಮ್ಮ ವಿಧಿಯ ಕರ್ತೃವಾಗುತ್ತೀರಿ.
ಯಾರು ನಗಲಾರರೋ, ಅವರು ಧ್ಯಾನಸ್ಥರಾಗಲಾರರು. ನಗುವು ನಿಮ್ಮ ಜೀವಶಕ್ತಿಯಲ್ಲಿನ ಒಂದು ಮಟ್ಟದ ಉಲ್ಲಾಸ. ಧ್ಯಾನವು ಯಾವುದೇ ದೈಹಿಕ ಕ್ರಿಯೆಯಿಲ್ಲದೆಯೇ ನಿಮ್ಮ ಜೀವಶಕ್ತಿಯಲ್ಲಿ ಉಂಟಾಗುವ ಪರಮ ಉಲ್ಲಾಸ.
ನಿಮಗೆ ಯಶಸ್ಸನ್ನು ಸವಿಯಬೇಕಿದ್ದರೆ, ಬಾಹ್ಯ ಸನ್ನಿವೇಶಗಳನ್ನು ಸಮರಸವಾಗಿಸುವ ಮುನ್ನ, ಮೊಟ್ಟಮೊದಲು ನಿಮ್ಮನ್ನು ನೀವು ಸಮರಸವಾಗಿಸಿಕೊಳ್ಳಬೇಕು.