Main Centers
International Centers
India
USA
Wisdom
FILTERS:
SORT BY:
ಜಗತ್ತು ನಿಮ್ಮತ್ತ ಏನನ್ನು ಎಸೆಯುತ್ತದೆ ಎಂಬುದನ್ನು ನೀವು ನಿಯಂತ್ರಿಸಲಾರಿರಿ. ಆದರೆ ಅದರಿಂದ ನೀವು ಏನನ್ನು ಮಾಡಿಕೊಳ್ಳುತ್ತೀರಿ ಎಂಬುದು ನೂರಕ್ಕೆ ನೂರು ನಿಮ್ಮ ಕೈಯಲ್ಲಿದೆ. ಶ್ರೀರಾಮನು ಇದಕ್ಕೊಂದು ರತ್ನಪ್ರಾಯ ನಿದರ್ಶನ.
ಜಗತ್ತಿನಲ್ಲಿ ದಕ್ಷತೆಯಿಂದ ಕಾರ್ಯಗೈಯಲು ಪ್ರಧಾನವಾದ ಅಂಶ ಪುಸ್ತಕಜ್ಞಾನವಲ್ಲ, ಬದಲಿಗೆ ಗ್ರಹಣಶೀಲತೆಯಲ್ಲಿನ ಸ್ಪಷ್ಟತೆ.
ಜೀವನ್ಮರಣಗಳ ಮೂಲಕ ನಿಮ್ಮನ್ನು ಸಾಗಿಸಬಲ್ಲ ಏಕೈಕ ನಿಜವಾದ ಐಶ್ವರ್ಯವೆಂದರೆ ಅನುಭವದ ಅಗಾಧತೆ.
ಜನರನ್ನು ಬಳಸುವುದು ಮತ್ತು ವಸ್ತುಗಳನ್ನು ಪ್ರೀತಿಸುವುದು – ಇದು ಜೀವನದ ಸಂಪೂರ್ಣವಾದ ತಪ್ಪು ತಿಳುವಳಿಕೆ. ವಸ್ತುಗಳಿರುವುದು ಬಳಸಲು. ಜನರಿರುವುದು ಪ್ರೀತಿಸಲು.
ಈ ಜಗತ್ತಿಗಾಗಿ ನೀವು ಮಾಡಬಹುದಾದ ಅತ್ಯುತ್ತಮ ವಿಷಯವೆಂದರೆ ಸಂತೋಷಭರಿತ ಮತ್ತು ಆನಂದಭರಿತ ಮನುಷ್ಯರಾಗುವುದು.
ಒಮ್ಮೆ ನೀವು ನರಳಾಟದ ಭಯವನ್ನು ಮೀರಿ ಹೋದಿರೆಂದರೆ, ಸಹಜವಾಗಿಯೇ ನೀವು ಜೀವನವನ್ನು ಸಂಪೂರ್ಣವಾಗಿ ಪರಿಶೋಧಿಸುವಿರಿ.
ಚೈತನ್ಯ ಮತ್ತು ಅರಿವಿನ ಉನ್ನತ ಸ್ತರದೆಡೆಗೆ ಸಾಗುವುದೇ ಯೋಗಾಭ್ಯಾಸಗಳು ಮತ್ತು ಧ್ಯಾನದ ಮೂಲ ಉದ್ದೇಶ.
ಆರೋಗ್ಯ ಎಂದರೆ ಬರೀ ರೋಗದ ಅಭಾವವಲ್ಲ, ಬದಲಿಗೆ ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಒಳಿತನ್ನು ಒಳಗೊಂಡಿರುವ ಒಂದು ಸಮಗ್ರ ಸ್ಥಿತಿ.
ನಿಮಗೆ ಅರಿವಿಲ್ಲದೇ ಇರುವುದರ ಬಗ್ಗೆ ಏನೇನೋ ಊಹಿಸುತ್ತಾ, ‘ಅಂದುಕೊಳ್ಳು’ತ್ತಾ ಹೋದರೆ, ಖಂಡಿತವಾಗಿಯೂ ಅಜ್ಞಾನದಲ್ಲೇ ಇರುತ್ತೀರಿ.
ಮನುಷ್ಯರಾಗಿರುವುದು ಎಂದರೆ ಪ್ರತಿಯೊಂದು ಜೀವಿಯನ್ನೂ ಕೋಮಲವಾದ ದೃಷ್ಟಿಯಿಂದ ನೋಡುವ ಸಾಮರ್ಥ್ಯವನ್ನು ಹೊಂದಿರುವುದು.
ನಿಮಗಿಷ್ಟವಿಲ್ಲದ ವಿಷಯಗಳೊಂದಿಗೆ ಸಂತೋಷದಿಂದ ಬದುಕಲು ಕಲಿಯುವುದು ಜೀವನದಲ್ಲೊಂದು ಮಹತ್ತಾದ ಪಾಠ.
ಅಪರಾಧಿ ಪ್ರಜ್ಞೆ, ಭಯ, ಸಿಟ್ಟು, ಅಥವಾ ದ್ವೇಷ – ಅದನ್ನು ನೀವು ಏನಾದರೂ ಕರೆಯಿರಿ. ಮೂಲತಃ ಅದರರ್ಥ ಇಷ್ಟೆ – ನಿಮ್ಮ ಯೋಚನೆ ಮತ್ತು ಭಾವನೆಗಳು ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿವೆ.