Main Centers
International Centers
India
USA
Wisdom
FILTERS:
SORT BY:
ಭಯ ಮತ್ತು ಅಜ್ಞಾನ ಯಾವಾಗಲೂ ಜೊತೆಯಲ್ಲೇ ಇರುವಂತವು. ಜ್ಞಾನದ ಸ್ಪಷ್ಟತೆಯು ನಿಮ್ಮನ್ನು ಭಯದಿಂದ ಮುಕ್ತಗೊಳಿಸುತ್ತದೆ.
If you realize how fragile your Life is and how at any moment it could be turned upside down, you will walk very gently on this planet.
ಒಳಗೂಡಿಸಿಕೊಳ್ಳುವ ಬದುಕು ಬುದ್ಧಿವಂತ ಬದುಕು, ಏಕೆಂದರೆ ಸಮಸ್ತ ಅಸ್ತಿತ್ವವೇ ಆ ರೀತಿಯಲ್ಲಿ ಕಾರ್ಯಗೈಯುತ್ತಿದೆ.
ಕಾಡುಗಳಿಗೆ ಬೇರೆ ಯಾವುದೇ ಪರ್ಯಾಯವಿಲ್ಲ. ಈ ಸಮೃದ್ಧ ಪರಿಸರವ್ಯವಸ್ಥೆಗಳು ಎಷ್ಟೋ ಲಕ್ಷ ವರ್ಷಗಳಿಂದ ನಮ್ಮ ಹಸ್ತಕ್ಷೇಪವಿಲ್ಲದೇ ಸೊಂಪಾಗಿ ಬೆಳೆದಿವೆ. ಅವುಗಳ ಶೋಷಣೆಯನ್ನು ನಿಲ್ಲಿಸುವ ಸಮಯ ಬಂದಿದೆ.
ಜಗತ್ತಿಗೆ ನಿಮ್ಮ ಪಾಲಿನ ಕೊಡುಗೆಯೆಂದರೆ ಸ್ವತಃ ನೀವೇ – ನೀವು ಹೇಗೆ ಜೀವಿಸುತ್ತೀರಿ, ಎಷ್ಟು ಸಂತೋಷಭರಿತರಾಗಿದ್ದೀರಿ, ಎಲ್ಲವೂ ಒಂದು ಪರಿಣಾಮವನ್ನುಂಟು ಮಾಡುತ್ತದೆ.
ನಿಮಗೆ ಜೀವನದ ಉದ್ದೇಶವನ್ನು ಕಂಡುಹಿಡಿಯಬೇಕಿದ್ದರೆ, ನೀವು ದೇಹ-ಮನಸ್ಸುಗಳ ಮಿತಿಯನ್ನು ಮೀರಿ ನೋಡಬೇಕು.
ಸಮಸ್ಯೆಯು ಭೂಮಿಯ ಮೇಲೆ ಇರುವ ನೀರಿನ ‘ಪ್ರಮಾಣ’ದ್ದಲ್ಲ, ಬದಲಿಗೆ ನೀರಿನ ಗುಣಮಟ್ಟ, ಹಂಚಿಕೆ, ಮತ್ತು ಲಭ್ಯತೆಯದ್ದು. ಈ ನಿಟ್ಟಿನಲ್ಲಿ ಏಕೈಕ ನೈಜ ಪರಿಹಾರವೆಂದರೆ ಜಗತ್ತಿನಲ್ಲಿ ಪ್ರಜ್ಞೆಯ ಒಂದು ಪ್ರವಾಹವನ್ನು ಹುಟ್ಟುಹಾಕುವುದು.
ನಿಮ್ಮ ಮನುಷ್ಯತ್ವವು ಉಕ್ಕಿ ಹರಿದರೆ, ದೈವತ್ವವು ಇಳಿದು ಬರಲೇ ಬೇಕು.
ಧ್ಯಾನ ಎಂದರೆ ನಿಮ್ಮೊಳಗೆ ಪರಮ ಸ್ವಾತಂತ್ರ್ಯವನ್ನು ಹೊಂದುವುದು.
ಜೀವನ ನಡೆಯುವುದು ನಮ್ಮೊಳಗಿನಿಂದ. ನೀವು ಅದರ ಬಗ್ಗೆ ಎಷ್ಟು ಪ್ರಜ್ಞಾಪೂರ್ವಕರಾಗಿದ್ದೀರಿ ಎಂಬುದು ನಿಮ್ಮ ದೇಹ, ಮನಸ್ಸು, ಮತ್ತು ಬದುಕಿನ ಅನುಭವದ ಗುಣಮಟ್ಟವನ್ನು ನಿರ್ಧರಿಸುತ್ತದೆ.
ಇಂದು ವಸಂತದ ವಿಷುವತ್ ಸಂಕ್ರಾಂತಿ. ಇದು ನಿಮ್ಮ ಜೀವವ್ಯವಸ್ಥೆಯಲ್ಲಿ ಸಮತೋಲನವನ್ನು ತಂದುಕೊಳ್ಳುವ ದಿನ – ಯಾವುದೋ ಒಂದು ವಿಷಯದೊಂದಿಗೆ ಗುರುತಿಸಿಕೊಳ್ಳದೇ, ಜೀವಂತಿಕೆಯಿಂದ ಮಿಡಿಯಬೇಕಾದ ದಿನ.
ಆಧ್ಯಾತ್ಮಿಕ ಪಥದಲ್ಲಿ ಮಾಡಬೇಕಾದ ಮೊದಲ ವಿಷಯವೆಂದರೆ ನೀವು ಅನುಭವಾತ್ಮಕವಾಗಿ ಈಗ ಎಲ್ಲಿದ್ದೀರಿ ಎಂದು ಗೊತ್ತುಪಡಿಸಿಕೊಳ್ಳುವುದು. ನೀವು ನಿಜವಾಗಿ ಎಲ್ಲಿದ್ದೀರೋ, ಅಲ್ಲಿಂದಷ್ಟೆ ಪಯಣವನ್ನು ಪ್ರಾರಂಭಿಸಬಹುದು.