ನಾವು ಬದುಕಲ್ಲಿ ಏನೇ ಮಾಡಲು ಹೊರಟರೂ ಒಂದಲ್ಲಾ ಒಂದು ತೊಂದರೆ ಎದುರಾಗಬಹುದು. ಅವರಿವರು ನಮ್ಮ ದಾರಿಗೆ ಅಡ್ಡ ಬರಬಹುದು. ತೊಡರು ಹಾಕಬಹುದು. ನಮಗಿಷ್ಟವಿಲ್ಲದ ಮಾತುಗಳನ್ನಾಡಬಹುದು. ಆದರೆ ನೀವು ಮಾಡುತ್ತಿರುವ ಕೆಲಸ ಮಹತ್ವವಾದದ್ದೇ? ಹಾಗಿದ್ದರೆ, ಇವೆಲ್ಲವನ್ನೂ ಮೀರಿ ನೀವದನ್ನು ಸಾಧಿಸಬೇಕು! ಯಾರು ಏನೇ ಮಾಡಿದರೂ ನಿಮ್ಮೊಳಗೆ ನೀವು ಹೇಗೆ ಇರುತ್ತೀರಿ ಎಂಬುದು ಸಂಪೂರ್ಣವಾಗಿ ನಿಮಗೇ ಬಿಟ್ಟ ಆಯ್ಕೆ ತಾನೆ? ಜೀವನದ ಏರು ತಗ್ಗುಗಳಲ್ಲಿ, ವಿವಿಧ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ಹೇಗಿಟ್ಟುಕೊಳ್ಳುತ್ತೇವೆ ಎಂಬುದು ನಾವು ಏನು ಮಾಡುತ್ತೇವೆ ಎಂಬುದನ್ನು ನಿರ್ಧರಿಸುತ್ತವೆ. ಸದ್ಗುರುಗಳ ಈ ಅತ್ಯಂತ ಪ್ರೇರಣಾದಾಯಕ ಮಾತುಗಳನ್ನು ಸಂಪೂರ್ಣವಾಗಿ ಕೇಳಿ!